ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಬನಶಂಕರಿ ೫
"ಯಾವ ಕಥೆಯೋ ?" "ನರಕಾಸುರನ ಕಥೆ ಅಪ್ಪಯ್ಯ.." ಅದರ ಜತೆಯಲ್ಲೇ ನಾಣಿಯ ಸ್ವರ; "ಬಲೀದು ಬಲಿ ಚಕ್ರವರ್ತೀದು ಅಪ್ಪಯ್ಯ.." ಆ ಬಳಿಕ ಕಥೆಗಳು-- ಅಮ್ಮಿಗೂ ಅಲ್ಲೇ ಕುಳಿತು ಕೇಳುವ ಆಸೆ ಆದರೆ ಪುಟ್ಟ ಗೃಹಿಣಿಗೆ ಕಥೆ ಕೇಳಲು ಬಿಡುವಿಲ್ಲ ಒಳಗೆ ಅಡುಗೆಯ ಕೆಲಸದಲ್ಲಿ ಅತ್ತೆಗೆ ನೆರವಾಗಬೇಕು, ಅವರು ಬರುವ ಹೊತ್ತಿಗೆ- "ಚಿಕ್ಕಮಗಳೂರಿನಿಂದ ಗಾಡಿ ಕಟ್ಟಿದ್ದೇ ತಡವಾಯ್ತೇನೋ.." ಎಂದು ತಮ್ಮಷ್ಟಕ್ಕೆ ಅತ್ತೆ ಆಡಿಕೊಂಡರು. ಅಮ್ಮಿ ಚಿಕ್ಕಮಗಳೂರು ನೋಡಿದವಳಲ್ಲ, ಆದರೆ ಅತ್ತೆ ಬಾರಿಬಾರಿಗೂ ಆ ಊರಿನ ವರ್ಣನೆ ಮಾಡಿದ್ದರು ಅಲ್ಲಿ ದೊಡ್ಡ ಸಾಹುಕಾರರೊಬ್ಬರ ಅಂಗಡಿಯಲ್ಲಿ ಅಮ್ಮಿಯ ಗಂಡ ಲೆಕ್ಕ ಬರೆಯುವ ಗುಮಾಸ್ತೆ ,ಒಂದು ವರ್ಷದ ಅವದಿಯಲ್ಲಿ ಬಲು ನಂಬಿಕಸ್ತನೆನಿಸಿಕೊಂಡು ತಿಂಗಳಿಗೆ ಆತ ಹತ್ತು ರೂಪಾಯಿ ಸಂಬಳ ಪಡೆಯುತ್ತಿದ್ದ, ದೊಡ್ಡವನಾದ ಹಾಗೆ ಅವನಿಗೆ ದೊಡ್ಡ ದೊಡ್ಡ ಸರಕಾರಿ ಹುದ್ದೆಗಳು ಸಿಗುತ್ತವೆಂದು ಅತ್ತೆ ಹೇಳುತ್ತಿದ್ದರು.ಮಾವನೂ ಹೇಳುತ್ತಿದ್ದರು. ಚಿಕ್ಕಮಗಳೂರಿನಿಂದ ಹಳ್ಳಿಗೆ ಬರಬೇಕಾದರೆ ಎತ್ತಿನ ಗಾಡಿಯಲ್ಲಿ ಹನ್ನೆರಡು ಮೈಲು ದೂರ ಬರಬೇಕು ಕಲ್ಲು ಕೆಸರಿನ ಕೊರಕಲು ಹಾದಿ, ಆಮೇಲೆ ಕಾಲ್ನಡಗೆ...ಹಾಗೆ ಹಳ್ಳಿ ಸೇರಬೇಕು. ಅಡುಗೆಯ ಸಿದ್ದತೆ ಎಲ್ಲವೂ ಮುಗಿದು ಅತ್ತೆ ""ರಾಮಾ" ಎಂದು ಬೆನ್ನು ನಿಡಿದುಕೊಡರು. ಹೊರಗೆ ಮಾವ ಕಥೆ ಹೇಳುತ್ತಿದ್ದುದು ನಿಂತಿತು. "ಲಕ್ಷ್ಮಿ.ಲಕ್ಷ್ಮಿ.. ಎಂದು ಅವರು ಕರೆದರು. "ಬಂದೆ" "ಸುಳಿವೇ ಇಲ್ವಲ್ಲೇ ಇಬ್ಬರದೂ" "ತಡವಾಗಿ ಗಾಡಿಕಟ್ಟಿದರೇನೋ?" ಅತ್ತೆಗೆ ಹೊಳೆಯುತ್ತಿದ್ದ ಕಾರಣ ಅದೊಂದೇ. "ಹಬ್ಬದ ದಿವಸ ಸ್ವಲ್ಪ ಬೇಗ್ನೆಹೊರಡ್ಬೇಕೂಂತ ಗ್ಯಾನ ಇರ್ಬೇಡ್ವೇನು?" "........................." "ಅತ್ವಾ ಸಂತೆ ಬೀದೀಲಿ ಖರೀದಿ ಮಾಡ್ತ ತಡವಾಯ್ತೋ ಏನೋ?" "ಇದ್ದರೂ ಇದ್ದೀತು " ಮಾವನ ಸಂದೇಹವೇ ಅಮ್ಮಿಯ ಸಂದೇಹ.ಖರೀದಿಗೆ ನಿಂತು ತಡವಾದುಡೆಸರಿ. ನಾನು ಬೇರೆ. ಮೇಲೆ ಕನ್ನಡಿಯಿದ್ದ ಪುಟ್ಟ ಕುಂಕುಮದ ಕರಡಿಗೆಯೊಂದು ಇದ್ದರಾದೀತೆಂದು ಎಂದೋ ಒಮ್ಮೆ ಅತ್ತೆಗೆ ಹೇಳಿರ ಲಿಲ್ಲವೇ?