ಈ ಪುಟವನ್ನು ಪ್ರಕಟಿಸಲಾಗಿದೆ

ಜ್ಞಾನೋತ್ತರ ಬುದ್ಧಕಾಯ೯.

೧೮೯

ನೆಡುತ್ತಿತ್ತು. ಕೋಸಲ ಹಾಗೂ ಮಗಧ ಪ್ರಾಂತಗಳೇ ಮುಖ್ಯವಾಗಿ ಅವನ ಕಾರ್ಯಕ್ಷೇತ್ರಗಳಾಗಿದ್ದರೂ, ಅವನ ಕೀರ್ತಿಯು ದಿಗ್ದೇಶಗಳಲ್ಲಿ ಹರಡಿತು. ಬುದ್ಧನ ಹೆಂಡತಿಯೂ ಮಗನಾದ ರಾಹುಲನೂ ಅವನ ಶಿಷ್ಯರಾದರು. ಹಲವು ರಾಜರೂ, ಶಾಸ್ತ್ರಸಂಪನ್ನರಾದ ಬ್ರಾಮ್ಹಣರೂ ಬುದ್ಧನ ಪಾದಕ್ಕೆರಗಿ ಬುದ್ಧಶಿಷ್ಯರಾದರು. ಜಾರ, ಚೋರ, ಪತಿತ, ಚಾಂಡಾಲ, ಅವರಂತಹ ಮೂಢರು ಸಹ ಬುದ್ಧದೇವನ ಪ್ರನಾದತೀರ್ಧದಿ೦ದ ಅ೦ತರ್ಬಾಹ್ಯ ಶುದ್ಧರಾಗಿ ಸದ್ಗುಣಿಗಳಾದರು. ಒಬ್ಬ ಭಿಕ್ಷುವು ಅತಿಸಾರ ಬೇನೆಯಿಂದ ನೆರಳುತ್ತ ಹಾಸಿಗೆ ಹಿಡಿದು ಬಿದ್ದಿರಲು, ಬುದ್ಧನು ಅವನನ್ನು ಕೇಳುವವರು ಯಾರೂ ಇಲ್ಲದ ಸ್ಥಿತಿಯನ್ನು ಕ೦ಡು ತಾನೇ ಸ್ವತಃ ಅವನ ಸೇವೆಗೆ ಕೈಕಟ್ಟಿಕೊಂಡು ನಿಂತಿರುವ ಕಥೆಯ ಮೇಲಿಂದ ಬುದ್ಧದೇವನ ಅಂತಃಕರಣದ ಕಲ್ಪನೆಯಾಗುತ್ತದೆ. ರಾಜವೈಭವದೊಳಗೆ ಓಲಾಡುತ್ತಿರುವ ಅನೇಕ ರಾಜಪುತ್ರರು ಬುದ್ಧ ದರ್ಶನದಿಂದ ಸಂಸಾರವನ್ನು ತೊರೆದು ಭಿಕ್ಷುಗಳಾದ ಕಥೆಗಳಿವೆ. ಯಾವುದೊಂದು ಊರಲ್ಲಿ ಒಂದು ದೊಡ್ಡ ಸಮಾರಂಭ ನಡೆದಿರಲು, ಅಲ್ಲಿ ಬುದ್ಧದೇವನು ಹೋಗಿದ್ದನು. ಆ ಸಮಾರಂಭದೊಳಗಿರುವ ಮನೆತನಸ್ಥಳಾದ ಒಬ್ಬ ಸುಂದರ ಹಾಗೂ ಶ್ರೀಮಂತ ಯುವತಿಗೆ ಬುದ್ಧದೇವನನ್ನು ನೋಡಿದೊಡನೆಯೇ ವೈರಾಗ್ಯವುಂಟಾದ್ದರಿಂದ ಅವಳು ಬೌದ್ಧ ಮಠಕ್ಕೆ ಹೋಗಿ, ಬುದ್ಧನ ಬೋಧೆಯಿಂದ ಭಿಕ್ಷುಣಿಯಾದಳು. ಬುದ್ಧ ಸಂಘದೊಳಗೆ ಅ೦ಬಾಪಾಲಿಯೆಂಬ ವೇಶ್ಯೆಯೂ, ಸುವಿನೀತನೆಂಬ ಭಂಗಿಯವನೂ, ಉವಾಲಿಯೆಂಬ ಕ್ಷೌರಕನೂ ಸೇರಿ, ಒಳ್ಳೇ ಗೌರವಕ್ಕೇರಿದ್ದರು. ವಾರಾಣಸಿಯ೦ಥ ಸನಾತನ ವೈದಿಕಧರ್ಮದ ಕೋಟೆಯಲ್ಲಿ ಸಹ ಹೊಕ್ಕು ಬುದ್ಧದೇವನು ತನ್ನ ವಾಗ್ದಲದಿಂದ ವಿದ್ವಾಂಸರನ್ನು ಗೆದ್ದನು. ನಿಜವಾಗಿ ನೋಡಿದರೆ, ಸ್ತ್ರೀಯರನ್ನು ಕಂಡರೆ ಬುದ್ಧನಿಗಾಗುತ್ತಿರಲಿಲ್ಲ. ಸ್ತ್ರೀಯರು ಚಂಚಲರೂ, ಅವರಲ್ಲಿ ನೈತಿಕ ಬಲವು ಕಡಿಮೆಯಿರುವದೆಂದೂ ಅರಮನೆಯಲ್ಲಿರುವಾಗ ಅವನಿಗೆ ಮನದಟ್ಟಾದ್ದರಿಂದ ಸ್ತ್ರೀಯರ ವಿಷಯದಲ್ಲಿ ಅವನಿಗೆ ಬಲವಾದ ತಿರಸ್ಕಾರ; ಆದುದರಿಂದ ಮೊತ್ತ ಮೊದಲು ಅವನು ಸ್ತ್ರೀಯರನ್ನು ತನ್ನ ಭಿಕ್ಷುಸಂಘ