ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆಯು.


>39

~- ಹಿಂದುಸ್ತಾನದಲ್ಲಿ ಬೇರೆ ಬೇರೆ ಜಾತಿಯ ಜನರ ಇತಿಹಾಸಗಳಲ್ಲಿ ರಜಪೂತರ ಇತಿಹಾಸವು ಅತ್ಯಂತ ಗೌರವವುಳ್ಳದ್ದೂ, ಮಹತ್ವದ್ದೂ ಆಗಿದೆ. ಕೇವಲ ಹಿಂದುಸ್ತಾನವೂಂದ ಏಕೆ ? ಜಗತ್ತಿನಲ್ಲಿರುವ ನಾನಾ ದೇಶಗಳ ಇತಿಹಾ ಸಗಳಲ್ಲಿಯೂ, ರಾಜಸ್ತಾನದ ಇತಿಹಾಸಕ್ಕೆ ಶ್ರೇಷ ತೆಯನ್ನು ಕೊಡಬಹುದು. ಯಾಕಂದರೆ ರಜಪೂತರು ಮಾನವೀ ಜೀವಿತದ ಆದರ್ಶ ಗುಣಗಳ ಪರಾಕಾಷ್ಟತ ಯನ್ನು ತೋರಿಸುವದರಲ್ಲಿ ಹೆಸರಾಗಿದ್ದಾರೆ ರಾಜಾನದಲ್ಲಿ ಅಪ್ರತಿಮ ಸ್ವದೇಶ ಭಕ್ತರಿಗೆ ಕೊರತೆಯಿಲ್ಲ, ಅಸಾಮಾನ್ಯ ಆತ್ಮಯಜ್ಞ ಮಾಡಿದವರ ಕೊರತೆಯಿಲ್ಲ, ಅಲೌಕಿಕ ಪಿತೃಭಕ್ತಿಯನ್ನು ತೋರಿಸಿದವರ ಕೊರತಲ್ಲ, ಅಸಮ ರಾಜನಿಗೆ ಯನ್ನು ತೋರಿಸಿದವರ ಕೊರತೆಯಿಲ್ಲ, ಸ್ಥಿರಪ್ರತಿಜ್ಞೆಯುಳ್ಳವರಿಲ್ಲದಿಲ್ಲ, ಶೂರರ ಕೊರತೆಯಿಲ್ಲ ಈ ಮೊದಲಾದ ಆದರ್ಶಗುಣಗಳ ಅತ್ಯುತ ಸ್ವರೂಪವನ್ನು ಅನ ಲೋಕಿಸಬೇಕಾದಲ್ಲಿ ನಾವು ರಾಜಸ್ತಾನದ ಇತಿಹಾಸದ ಕಡೆಗೆ ತಿರುಗಬೇಕಾಗು ವದು ಈ ರಾಜಪುತ್ರ-ಜನಾಂಗದವರ ಶ್ರೇಷ್ಟತೆಯಿಂದ, ಒ೦ದು ಕಾಲದಲ್ಲಿ ಹಿಂದುಸ್ತಾನದ ಅತ್ಯಂತ ಮಹತ್ವವನ್ನು ಪಡೆದಿದ್ದಿತು ಈ ತರದ ಉದಾತ್ತ ಜನರ ನಿರ್ಮಾಣ ಮಾಡಿದ ಭಾರತಮಾತೆಯಲ್ಲಿ ಜನ್ಮ ಹೊಂದಿದ ಬಗ್ಗೆ ನಾವು ಈಗಲೂ ಅಭಿಮಾನವನ್ನು ವಹಿಸಬಹುದಾಗಿದೆ, ಆದರೆ ಕೇವಲ ಅಭಿಮಾನದಿಂದ ಹೆಚ್ಚು ಉಪಯೋಗವಿಲ್ಲ, ಸದ್ಯಕಾಲದ ಸುಧಾರಣೆಯ ಯುಗದಲ್ಲಿ ನನ್ಯವಾದ ನಮ್ಮ ಗೌರವವನ್ನು ಸಂಪಾದಿಸಿಕೊಳ್ಳಲು ಯತ್ನಿ ಸುವರು ಪೂರ್ವಿಕರ ತರಿತ್ರೆಗಳನ್ನು ಆದರ್ಶವಾಗಿಟ್ಟು ಕೊಂಡು, ಆಚರಿಸಲು ಪ್ರಯತ್ನಿ ಸುವದು ಪ್ರತಿಯೊಬ್ಬ ಭಾರತೀ ಯನ ಆದ್ಯ ಕರ್ತವ್ಯವಾಗಿದೆ ಉದಾತ್ತ ಗುಣಮಂಡಿತರಾದ ರಜಪೂತರಲ್ಲಿ ಮಹಾರಾಣಾ ಪ್ರತಾಪಸಿಂಹನು ಶ್ರೇಷ್ಮತಮನಾಗಿದ್ದಾನೆ ಈ ಮಹನೀಯನ ಜೀವನ ಚರಿತೆಯನ್ನು, ನಾವು ಕೆಲವು ಬಂಗಾಲ ಪುಸ್ತಕಳ ಆಧಾರದಿಂದ ಬರೆದಿದ್ದೇವೆ. ಭಾರತೀಯರಲ್ಲಿ ಹಿಂದುಳಿದ