ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತಿ ಹಿತೈ ಪೀ ಸ ನಂದಿನಿ:- ಸಂಶಯವಿಲ್ಲ; ಆದರೆ..........ವ್ಯಾಸಂಗವು ನನಗಾ 11ಯೇ ನಡೆಯುತ್ತಿರಬೇಕು? ನಾರಾ:- ಓಹೋ! ಅದೂ ನಿನಗಾಗಿ, ಅಥವಾ ಅನ್ಯರಿಗಾಗಿಯೇ ? ನಂದಿನಿ:--ತಲೆದೂಗಿ-ಭಲೆ, ನಾದಾನಂದ! ನೀನು ಪರಾರ್ಥ ವಾದಿಯೇ ಸರಿ. ಅಹುದು ! ಎಲ್ಲರೂ ನಿನ್ನಂತಹ ವಿದ್ಯಾಭ್ಯಾಸುಗಳೇ ಆದಪಕ್ಷದಲ್ಲಿ ಬೋಧಕರೆಲ್ಲರೂ ಬಲುಬೇಗ ಕೆಲಸದ ಗೊಂದಲದಿಂದ ಬಿಡು ಗಡೆ ಹೊಂದಬಹುದು !” ನಾವಾ: -ನಂದಿನಿ! ಈ ಕಾಲದ SUವಾಧ್ಯಾಯರಿಗೆ ಅಥವಾ ಬೋಧ ಕರಿಗೆ ತಿಳೆವಿದ್ದರಲ್ಲವೇ, ನಮಗೆ ತಿಳಿವು ಬೇಕೆಂಬುದು? ಅವರನ್ನು ನೋಡಿ ದರೆ ನಾವೇ ನಿವೃತ್ತರೆಂದೂ ಸೂಕ್ಷ್ಮದೃಷ್ಟಿಗಳೆಂದೂ ತಿಳಿದುಬರುವದು. ಈಗಿನ ಬೋಧಕರಿಗೇನು? ದಿನದಬ್ಬುವುದೊಂದು ಮೊತ್ತ: ಕೈ ರ್ಪಣ ತುಂಬುವುದೊಂದು ಲೆಕ್ಕ!! ಕಾಲಹರಣಕ್ಕೆಂದರೆ, ಹರಟೆಗೆ ಮಕ್ಕಳಿದ್ದರೆ ನಲವೇ !!!-- ಇಲ್ಲವಾದರೆ, ಒಕ್ಕಲಗಿತ್ತಿಯಾದರೂ ಇದ್ದೇ ಇರುವಳು ? ಅವರ ಗತಿಯೇ ಹೀಗಾಗಿಹೋಗಿದೆ. ಇನ್ನು ನಮ್ಮನ್ನು ಕೇಳಿದರೆ ಹೇಳು ವುರೇನು? ಕಂಡಂತೆಯೇ ಇರುವುದು ! - ನಂದಿನಿ:-ತಲೆದೂಗುತ್ತ-ನಾದಾ ! : ಗುರುವಿನಂತೆಯೇ ಶಿಷ್ಯರು' ಎಂಬುದು ನಿಜವಾಗಿದ್ದರೂ ಗುರುವು ಮಾಡುವ ಕೆಟ್ಟ ಕೆಲಸಗಳನ್ನು ತಿಳಿ ತಿಳಿದೂ ಗುರುಪ್ರಸಾದವೆಂದು ಅದನ್ನೇ ಅನುಸರಿಸುವುದು ನಮ್ಮ ಧರ್ಮ ಮ, ಅವರಲ್ಲಿರುವ ಗುಣಭಾಗಗಳನ್ನು ನಾವು ಅನುಸರಿಸಬೇಕಾದುದೇ ಮುಖ್ಯವು, ದೋಷವನ್ನು ಹುಡುಕುತ್ತ ಹೋದರೆ, ಎಷ್ಟೆಷ್ಟೊ ಕಂಡು ಬರುವುವು. ಆದರೆ, ಹೆರವರ ಕುಂದನ್ನೇ ಆರಿಸಿ ಆಕ್ಷೇಪಿಸುವುದು ಸರಿಯಲ್ಲ ವೆಂದ ಬಳಿಕ, ಗುರುಗಳ ವಿಚಾರದಲ್ಲಿಯೇ ದೋಷವನ್ನು ಚಿಂತಿಸುವುದು ಎಂತಹ ವಾತಕವೋ ತಿಳಿದು ಹೇಳಲಾರೆಯೋ?” ನಾವಾ;.-ನಂದಿನಿ! ನೀನು ಹೇಗೆ ಬೇಕಾದರೂ ಹೇಳು. ಆದರೆ, ನಿನ್ನನ್ನು ಕುರಿತು. - ಯಾವಾಗಲೂ ನಿಜವನ್ನೇ ಹೇಳು; ಜಿತೇಂದ್ರಿಯಳಾ ಗಿರೋ ರ..” ಎಂದು ಉಪದೇಶ ಮಾಡಲು ನಾನೂ ಬಲ್ಲೆನು. ಹಾಗೆ ಉಪದೇವ ನನ್ನಲ್ಲಿ ನೂರಾರು ಕುಲ ನಟನೆಗಳಿದ್ದರೆ ನೀನು ನನ್ನ