ಈ ಪುಟವನ್ನು ಪ್ರಕಟಿಸಲಾಗಿದೆ
110
ಮಾರುಮಾಲೆ

ಈ ಅಭಿಪ್ರಾಯದ ಒಂದು ತಿಳಿವಳಿಕೆ ಮುಳಿಯರಿಗೂ ಇದ್ದಿತು. (ಪುಟ 24) 'ಯಕ್ಷಗಾನ' ವೆಂದರೆ, 'ಯಕ್ಷಗಾನ ಪ್ರಬಂಧ'ವೆಂದು ಭಾವಿಸಬಾರದು ಎಂದು ಹೇಳಿ, ಗೋವಿಂದ ದೀಕ್ಷಿತನ ಸಾಹಿತ್ಯ ಸುಧಾ ಗ್ರಂಥದ “ಶ್ರೀ ರುಕ್ಷ್ಮಿಣೀ ಕೃಷ್ಣ ವಿವಾಹ ಯಕ್ಷಗಾನಂ ಪ್ರಬಂಧಾನಪಿ ನೈಕಭೇದಾನ್” ಎಂಬುದನ್ನು ಉದಾಹರಿಸಿದ್ದಾರೆ. ಆದರೆ ಇದೇ ಶ್ಲೋಕವು ಯಕ್ಷಗಾನವೆಂಬುದು ಪ್ರಬಂಧ ವಿಶೇಷವನ್ನು ಸೂಚಿಸುತ್ತಿದೆ ಎಂಬುದನ್ನು ಗಮನಿಸಬಹುದು.

ಮುಳಿಯರು ಸೂಚಿಸಿರುವ ತುಂಬ ಕುತೂಹಲಕರವಾದ ಅಂಶವೆಂದರೆ, `ಯಕ್ಷರಾತ್ರಿ' ಎಂಬ ಶಬ್ದದ ವಿವೇಚನೆ. ಯಕ್ಷ-ಕುಬೇರ ಸಂಬಂಧ, ಅಲ್ಲಿಂದ ಧನಾಧಿಪತಿಯಾದ ಕುಬೇರನಿಗೂ 'ಯಕ್ಷರಾತ್ರಿ' ಎಂದರೆ ದೀಪಾವಳಿ ಹಬ್ಬ ದಲ್ಲೆ ಲಕ್ಷ್ಮೀ ಪೂಜೆ ಇರುವುದನ್ನೂ ಸೂಚಿಸಿ, 'ಯಕ್ಷರಾತ್ರಿ'ಯಾದ ದೀಪಾ ವಳಿಯಂದೇ ನಮ್ಮ ಆಟದ ಮೇಳಗಳು ತಿರುಗಾಟ ಆರಂಭಿಸುವುದನ್ನೂ ಉಲ್ಲೇಖಿಸಿ ಸಂಬಂಧ ಕಲ್ಪಿಸಿದ್ದಾರೆ. ಜತೆಗೆ ಯಕ್ಷರು ಮೂಲತಃ ದಕ್ಷಿಣದವ ರಾಗಿದ್ದು, ರಾವಣನಿಂದ ಕುಬೇರನ ಪರಾಭವವಾಗಿ ಕುಬೇರನು ಅಲಕಾವತಿಗೆ ಹೋದ ಬಳಿಕ, ಯಕ್ಷರು ಇಲ್ಲಿ ಉಳಿದವರೆಂಬ ಪೌರಾಣಿಕ ಸಂಗತಿಯನ್ನು ಇದಕ್ಕೆ ಹೊಂದಿಸಿದ್ದಾರೆ. ಇವು ತುಂಬ ಚಾತುರ್ಯದ ಸಲಹೆಗಳು, ಇವುಗಳ ಬಗೆಗೆ ಹೆಚ್ಚಿನ ಪರಿಶೀಲನೆ ಅಗತ್ಯ.

ಯಕ್ಷಗಾನ ಸಂಶೋಧನೆಯಲ್ಲಿ ಬಹು ಉಲ್ಲೇಖಗೊಂಡು ಚರ್ಚಿತವಾದ ಒಂದು ಪದ್ಯ, ಅಗ್ಗಳನ ಚಂದ್ರಪ್ರಭಾ ಪುರಾಣದ ಈ ಪದ್ಯ (ಚಂದ್ರಪ್ರಭ ಪುರಾಣ 7.97)
“ತಾಳಮನಿತ್ತು ಸುಮ್ಮನಿಸದೊತ್ತುವ ಪಂಚಮನುಣ್ಚರಕ್ಕಣಂ
ಮೇಳತೆಯಿಲ್ಲ ಬೀಣೆಯ ಸರಂ ಬಿಡದಿಲ್ಲಿಯೆನಿಪ್ಪ ಠಾಯೆಯಿಂ
ದಾಣತಿ ಮಾಡಿ ಸಾಳಗದ ದೇಸಿಯ ಗೀತಮನಂದು ಪಾಡುವಿಂ
ಪಾಣನನುರ್ವರಾಧಿಪತಿ ಲೀಲೆಯಿಂದಕ್ಕಲಗಾಣಕೊರ್ವನಂ ಕೇಳುತ್ತ ಮಿರ್ದ೦.