ಈ ಪುಟವನ್ನು ಪ್ರಕಟಿಸಲಾಗಿದೆ
118
ಮಾರುಮಾಲೆ

ಪ್ರಸಂಗದ ಕಥೆಯು, ಬಹುಭಾಗ ಮೂಲದಂತೆ ಇದ್ದರೂ, ಮುಳಿಯರು ಮಾಡಿಕೊಂಡ ವ್ಯತ್ಯಾಸಗಳು ಗಮನಾರ್ಹವಾಗಿದೆ. ಮೂಲದ ಮಾಣಿಕ್ಯ ಪ್ರಭೆ ಇಲ್ಲಿ ಸೂರ್ಯಕಾಂತಿಯಾಗಿದ್ದಾಳೆ. ಮೂಲದಲ್ಲಿ ಧೂಮಧ್ವಜೆ ಕಾಣಸಿಗುವುದು, ಚಂದ್ರಕೇತುವಿನ ಗುಹಾಪ್ರವೇಶದ ನಂತರ, ಪ್ರಸಂಗದಲ್ಲಿ ಅವಳು ಬಂದು ಶಾಪ ಪಡೆಯುವ ಕಥೆ ಮೊದಲೇ ಬಂದಿದೆ. ಇದು ರಂಗದಲ್ಲಿ ದೃಶ್ಯಸಂಯೋ ಜನೆಯ ಅಂದಕ್ಕೂ, ಹೆಣ್ಣ ಬಣ್ಣದ ಪ್ರವೇಶಕ್ಕಾಗಿಯೂ ಮಾಡಿಕೊಂಡ ಬದ ಲಾವಣೆ, ಐವರು ನಾಗಕನ್ಯೆಯರ ಜತೆ ಚಂದ್ರಕೇತುವು ಸಮಾಗಮಿಸಿದ ಕಥೆ ಪ್ರಸಂಗದಲ್ಲಿಲ್ಲ. ಬದಲಾಗಿ ಕೊನೆಯಲ್ಲಿ ಪಡೆಯುವ ಉಪದೇಶವನ್ನು ಮೊದಲೇ ಪಡೆದಂತೆ ಸಂಕ್ಷೇಪವಾಗಿ ಸೂಚಿತವಾಗಿದೆ.ಇದು ಕತೆಗೆ ತರ್ಕ, ಶುದ್ಧತೆಯನ್ನು ನೀಡುವ ಯತ್ನವಾಗಿದ್ದು, ಚಂದ್ರಕೇತು-ಸೂರ್ಯ ಕಾಂತಿಯರ ಪ್ರಣಯಕ್ಕೆ ಪ್ರಾಶಸ್ತ್ಯ ನೀಡಿದೆ.
ಕಥೆಯ ಸ್ವರೂಪ, ಆಶಯ, ವಸ್ತು ಪ್ರತಿಪಾದನೆಗಳಲ್ಲಿ ಜೀವವಿಲ್ಲ. ಸತ್ವವಿಲ್ಲ. ಕೇವಲ ರಂಜನೆ ಎಂದರೆ ರಂಜನೆಯ ಅಂಶವೂ ವಿಶೇಷವೇನಿಲ್ಲ. ಸಂಘರ್ಷವಾಗಲಿ, ಗಂಭೀರ ವಿಷಯವಾಗಲಿ, ಚಿತ್ರಣವಾಗಲಿ ಇಲ್ಲ. ಹಾಗಾಗಿ ಈ ಪ್ರಸಂಗವನ್ನು ತಾಂತ್ರಿಕ ದೃಷ್ಟಿಯಿಂದ ಮಾತ್ರ ಪರಿಶೀಲಿಸಬಹುದಾಗಿದೆ.
ಸಂಪ್ರದಾಯದಂತೆ ವೃತ್ತವೊಂದರಿಂದ ಆರಂಭವಾಗಿ, ಎಲ್ಲ ದೇವರು ಗಳಿಗೆ ಸ್ತುತಿಯೊಪ್ಪಿಸಿ ಕಥಾರಂಭವಾಗುವ ಈ ಪ್ರಸಂಗದಲ್ಲಿ, ಮೊದಲ ಸ್ತುತಿಯ ಮಧ್ಯದಲ್ಲೇ `ನಿಜವೆಂ ಬೆಳಗುವೆ ನಾಂ' ಎಂದಿರುವುದು, ಮುಳಿ ಯರು ಯಕ್ಷಗಾನವನ್ನು ಕಲೆಯಾಗಿ ಅಂಗೀಕರಿಸಿದ್ದಾರೆಂದೂ, ಭಕ್ತಿಯಾಗಿ ಅಲ್ಲವೆಂದೂ ತೋರಿಸುತ್ತದೆ. ಆದುದರಿಂದಲೇ ಪೌರಾಣಿಕ ಆಶಯ, ಮೌಲ್ಯ ಗಳಿಗೆ ಮಹತ್ವವಿಲ್ಲದೆ, ಒಂದು ಲೌಕಿಕ ಪ್ರಣಯ ಕಥೆಯನ್ನು ಅವರು ಆರಿಸಿರ ಬೇಕು, ಮೂಲ ಕತೆಯಲ್ಲಿಲ್ಲದೆ, ಪ್ರಸಂಗದಲ್ಲಿ ಕಾಣುವಂತೆ ನಾರದ ಮುನಿಯಿಂದ ಚೂತ ಫಲವನ್ನು ಪಡೆದು ಸಂತಾನ ಪ್ರಾಪ್ತಿಯಾಗುವ ಅಂಶ ರತ್ನಾವತಿ ಕಲ್ಯಾಣದ ಯಥಾಪ್ರತಿಯಾಗಿದೆ.