ರಾಗ ಸೌರಾಷ್ಟ್ರ ತ್ರಿವುಡೆ ತಾಳ
ಪೊತ್ತು ದಣಿಯಲದೇಕೆ ಗಿರಿಗಳ । ನೆತ್ತಲೇತಕೆ ಕಲ್ಮರಂಗಳ । ಮತ್ತೆ
ಬಳಲುವುದೇಕೆ ಸೇತುವೆ ।। ಬಿತ್ತರಿಪಡೆ ।।೧।। ಬಿಡು ಬಿಡೀ ಸೇತುವನು
ಬಲಿವಡೆ ಕಡು ಗಹನವೇ ಬಾಣ ಮುಖದಲಿ । ಎಡೆಬಿಡದೆ ಸೇತುವನ್ನು
ರಚಿಸುವೆ । ದೃಢತರದೊಳು ।। ೨ ।। ಸುರಪನೈರಾವತವ ತರಿಸಿಹೆ । ತರುಚರರು
ನೀವ್ ನಿಮಗೆ ಘನವಿದು । ನೆರೆ ಪರಾಕ್ರಮಿಗೇನು ದೊಡ್ಡಿತು । ಪರಿಕಿಸುವಡೆ
।। ೩ ।। ಕಿರಿದು ಬಲವುಳ್ಳವರು ನೀವೆಂ । ಬರಿಕೆಯೆಮಗಾಯೆಂಬ ಪಾರ್ಥನ ।
ಬ್ಬರದ ನುಡಿಯನು ಕೇಳುತೆಂದನು । ಮರುತಸುತನು ।। ೪ ।। [ಕೇಳಿದಾ
ಕ್ಷಣ ಪ್ರಳಯರುದ್ರನ ಹೋಲುವೆಯ ಘನ ಕ್ರೋಧರೂಪವ । ತಾಳಿ ಕೋಪದಿ
ನುಡಿದನಾ ಸುರ । ಪಾಲಸುತಗೆ ।। ೫ ।।]
ರಾಗ ಮಾರವಿ ಏಕತಾಳ
ಏನುವನೆಂದೆಯೋ । ಮಾನವ ಗರ್ವದಿ । ಸಾನುವ ನೀನಡರಿ । ಅನುವ
ದಾರುನಿ । ಧಾನದಿ ಪೇಳ್ ಸುರ । ಮಾನವರೊಳಗೆನಗೆ ।। ೧ ।। ಮುಕ್ಕುವೆ
ಜಗವನು । ತಿಕ್ಕುವೆ ಯಮನನು । ಸಿಕ್ಕಿಸಿ ಭೈರವನ ।। ಠಕ್ಕುಪಚಾರದ
ಗರ್ವವಿದೇತಕೆ । ಸೊಕ್ಕಿಲಿ ಗಳಹದಿರು ।।೨।। ಕಣೆಯಲಿ ನೀನಿದ । ಕೆಣೆಯಹ
ಸೇತುವ । ಹಣಿವೆಯೆನಳವೆ ।। ಜುಣುಗೆ ನೀ ಬಾಯ್ಕಡಿ । ವಾರವ ಬೀರುವೆ
ಎಣಿಸದೆ ಗರ್ವದೊಳು ।। ೩ ।। ತೊಟ್ಟ ಶರಧಿ ನೀ । ಕಟ್ಟಿದ ಸೇತುವೆ ।
ನಿಟ್ಟಿಸಲಾನದನು । ಥಟ್ಟನೆ ಪಾದದಿ । ಮೆಟ್ಟಿ ಮುರಿಯದಿರೆ । ದಿಟ್ಟ
ಹನುಮನಹನೆ ।। ೪ ।।
ರಾಗ ಭೈರವಿ ಅಷ್ಟತಾಳ
ಎಲವೊ ಮರ್ಕಟನೆ ಗರ್ವದಿ ನೀನು । ಸುಮ್ಮ । ನುಲಿಯಲು ಕಾಣೆನು
ಫಲವನು ।। ಬಲಿವೆನು ಶರದಿ ಸೇತುವನದ । ನೀನು । ಬಲದಿ ಮುರಿಯದಿರಲೇ
ನೆಂದು ।। ೧ ।। ಸಾಕು ಸಾಕೆ ಮಂಕು ಮನುಜನೆ । ಇಂಥ । ಕಾಕು
ಪೌರುಷವೇಕೋ ಸುಮ್ಮನೆ ।। ನಾ ಕಾಣೆ ಸೇತುವ ಮುರಿಯಲು । ಕೇಳ್ವೆ ।