ಈ ಪುಟವನ್ನು ಪ್ರಕಟಿಸಲಾಗಿದೆ
ಶರಶೇತು ಬಂಧನ
79


ವಿನಿರ್ಜಿತಪಾಪ ವಿಧೃತಮಾರ್ಗಣಚಾಪ । ಜಯ ಜಯ ಚಿದಾಭಾಸ ಚಿನ್ಮಯ ಚಿದಾಕಾಶ ಜಯತೆಂದನಾ ಹನುಮನು । ೧ ।।

ರಾಗ ಕೇದಾರಗೌಳ ಅಷ್ಟತಾಳ

ಎಂದು ಸಂಸ್ತುತಿಸಿ ಭಕ್ತಿಯೊಳೆರಗಿದ ವಾಯು । ನಂದನನನು ದಯದಿ । ಚಂದದೊಳೆತ್ತಿ ತಕ್ಕಯಿಸಿ ಮೈದಡವುತ್ತಿಂ । ತೆಂದನು ಮಾಧವನು ।। ೧ ।। ವಾತಕುಮಾರ ಕೇಳ್ ಬರಿದೆ ನೀ ಮನದಲ್ಲಿ । ಸೋತೆನೆಂದೆಣಿಸದಿರು । ಆತನ ಪಕ್ಷಪಾತದೊಳು ಮೈಯಾಂತೆj ನಾ । ಸೇತುವಿಗಿದು ದಿಟವು ।। ೨ ।। ಈಗ ಕೃಷ್ಣಾವತಾರದಿ ಬಂದು ನಾ ಸಖ ನಾಗಿಹೆನೀ ಪಾರ್ಥಗೆ ।। ಲೋಗನಲ್ಲಿವನಂ ನಿನ್ನಂತೆ ಸದ್ಭಕ್ತನು । ಹೇಗೆ ಬಿಟ್ಟಪೆನೀತನ ।।೩।। ಇಹುದು ನಿನ್ನಿಂದ ಮುಂದಕೆ ಕಾರ್ಯವೀತಗೆ । ಬಹುಮಾತಿನಿಂದಲೇನು ।। ಬಹುದೀತ ನೆನೆದಾಗಲೆಂದೊಡಂ ಬಡಿಸಿ ಸಂ । ಗ್ರಹಿಸಿದನಾತನನು ।। ೪ ।।

ಭಾಮಿನಿ

ಇಂತು ಹನುಮನನೊಡಬಡಿಸಿ ಶ್ರೀ । ಕಾಂತ ಬಳಿಕರ್ಜುನಗೆ ನಿಜ ರೂ ।ಪಾಂತಿದೆಲ್ಲವನರುಹಿ ತೆರಳಲು ಮೇಲೆ ಫಲುಗುಣನು ।। ಅಂತರಂಗದಿ ನಾಚಿ ಪವನಜ । ನಂತಿರಕೆ ನಡೆತಂದು ಭಯದಲಿ । ನಿಂತು ಕರಗಳ ಮುಗಿದು ನುಡಿ ದನು ವಿನಯಪರನಾಗಿ ।। ೧ ।।

(ಸುಭದ್ರಾ ಕಲ್ಯಾಣ : ಹಟ್ಟಿಯಂಗಡಿ ರಾಮಭಟ್ಟ, ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ ಉಡುಪಿ 1985)