ಈ ಪುಟವನ್ನು ಪ್ರಕಟಿಸಲಾಗಿದೆ
82
ಮಾರುಮಾಲೆ

ಇರುವ ಗೌರವ, ಪೂಜ್ಯಭಾವ. ಇದಕ್ಕೆಲ್ಲ ಕೃಷ್ಣನ ಪಾತ್ರದಲ್ಲೂ ಸಮ ರ್ಥನೆ. ಈ ಪ್ರೇಕ್ಷಕ ಪ್ರಜ್ಞೆ-ಪ್ರದರ್ಶನದ ದಿಕ್ಕು ಧೋರಣೆಗಳನ್ನು ಬಹು ವಾಗಿ ನಿರ್ಣಯಿಸುತ್ತದೆ.
ಹೀಗೆ ನಿರ್ಮಾಣವಾದ ಒಂದು ಸಿದ್ಧ ವಿನ್ಯಾಸ (Ready design) ಹನುಮಂತನ ಪಾತ್ರಕ್ಕೆ ಇದು ಅನುಕೂಲವಾಗಿದ್ದು, ಬೇರೊಂದು ರೀತಿ ಯಿಂದ ಚಿತ್ರಿಸುವ ಆವಶ್ಯಕತೆ ಅವನಿಗಿರುವುದಿಲ್ಲ. ಅರ್ಜುನನ ಪಾತ್ರಧಾರಿ (ಅಥವಾ ಅರ್ಥಧಾರಿ) ಇದಕ್ಕೆ ವ್ಯತಿರಿಕ್ತವಾಗಿ ಒಂದು ವಿನ್ಯಾಸವನ್ನು ರೂಪಿ ಸಲು ಹೋದರೆ, ಒದ್ದಾಡಬೇಕಾಗುತ್ತದೆ- ಪ್ರೇಕ್ಷಕ ನಿರೀಕ್ಷೆಯ ವಿರುದ್ಧ, ಸಹಕಲಾವಿದರ ಚಿತ್ರಣದ ಎದುರು. ಹಾಗಾಗಿ, ಸೌಲಭ್ಯಕ್ಕಾಗಿ, ಒಟ್ಟು ಪ್ರದರ್ಶನದ ಆಕಾರದ ಏಕಮುಖತೆಯ ದೃಷ್ಟಿಯಿಂದಲೂ, ಅರ್ಜುನನೂ ಅದೇ ವಿನ್ಯಾಸಕ್ಕೆ ಹೊಂದಿಕೊಂಡು ಹೋಗುವುದೇ ಹೆಚ್ಚು. ಕೃಷ್ಣನ ಪಾತ್ರ 'ದೇವರ' ಪಾತ್ರವಾದುದರಿಂದ, ಹೊಸ ವಿನ್ಯಾಸ ತರಲು, ಅದನ್ನು ಶ್ರೋತೃ ವಿಗೆ ಒಪ್ಪಿಸಲು ಅವನಿಗೆ ಕಷ್ಟವಾಗಲಾರದು. ಅರ್ಜುನನಿಗೆ ಆ ಅನುಕೂಲ ವಿಲ್ಲ. ವಯಸ್ಸು ಹನುಮಂತನಿಗೆ ರಕ್ಷೆಯಾಗಿದೆ, ಅವನ ಇತರ ಪ್ರಭಾ ವಳಿಯೊಂದಿಗೆ. ಇವೆಲ್ಲದರ ಹಿನ್ನೆಲೆಯಲ್ಲಿ ಅರ್ಜುನನ ಪಾತ್ರಧಾರಿಯ ಹೊಸ ಹುಡುಕಾಟ ಅದು ಒದ್ದಾಟವಾದರೂ, ಕುತೂಹಲಕರವಾದ ಒಂದು ಯತ್ನ, ಕಲಾವಿದನಿಗೆ ಒಂದು ಪಂಥಾಹ್ವಾನ. ಇಂತಹ ಪ್ರಯತ್ನಗಳೂ ನಡೆದಿವೆ.
ಯಕ್ಷಗಾನ ಪ್ರಸಂಗ ಮತ್ತು ಪ್ರದರ್ಶನ-ಇವುಗಳ ಸಂಬಂಧವನ್ನು ಕುರಿತು, ಒಂದೆರಡು ವಿಚಾರಗಳನ್ನು ಇಲ್ಲಿ ಪರಿಶೀಲಿಸಬಹುದು. ಯಕ್ಷಗಾನ ಪ್ರದರ್ಶನಕ್ಕೆ ಎರಡು ಪಾಠ (Text)ಗಳಿವೆ-ಪದ್ಯ ಮತ್ತು ಗದ್ಯ, ಅರ್ಥಾತ್ ಪ್ರಸಂಗದ ಪದ್ಯಗಳು ಮತ್ತು ಪಾತ್ರದ ಮಾತುಗಾರಿಕೆ. ಇದರಲ್ಲಿ ಪದ್ಯ `ಸ್ಥಿರಪಾಠ', ಗದ್ಯ 'ಚರಪಾಠ' ಎಂದಿಟ್ಟುಕೊಳ್ಳಬಹುದು. ಪದ್ಯಗಳು ನಿಶ್ಚಿತ ವಾಗಿ ಅವೇ ಇರುತ್ತವೆ. (ಇಲ್ಲ ಕೂಡ, ಒಂದು ಪ್ರಸಂಗದಿಂದ ನಾವು ಆಯ್ದುಕೊಳ್ಳುವ ಪದ್ಯಗಳು ಬೇರೆ ಬೇರೆ ಆದಾಗ, ಒಂದು ಅರ್ಥದಲ್ಲಿ ಬೇರೆ ಬೇರೆ ಪಾಠಗಳೇ ಆದಂತಾಯಿತು. ಪದ್ಯಗಳ ಅಥವಾ ಪ್ರಸಂಗ ಭಾಗದ