ಈ ಪುಟವನ್ನು ಪರಿಶೀಲಿಸಲಾಗಿದೆ
ಮಿ೦ಚು 193
“ಪ್ರಧಾನಿಯ ಆಪ್ತ ಕಾರ್ಯದರ್ಶಿಯ ಕೈಯಲ್ಲಿ ನನ್ನದೊಂದು ಮನವಿ ಕೊಟ್ಟ ಹೋಗ್ಲೆನೆ.” -
“ನಿನ್ನಿಷ್ಟ" “ರಾಷ್ಟಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲಾ?" - “ಬೇಡ, ಅವರಿಗಲೂ ಪ್ರಧಾನಿಗೂ ವಿರಸ, ನೀನು ಮುದುಕನನ್ನು ಭೇಟಿ
ಯಾದದ್ದು ಗೊತ್ತಾದರೆ ಪ್ರಧಾನಿ ಕೆಂಡವಾಗ್ದಾರೆ.”
“ನೀವೊಬ್ಬರೇ ನನ್ನ ಹಿತೈಷಿ, ನನಗೆ ಏನು ಸಲಹೆ ಕೊಡ್ರೀರಿ ?" ನಕುಲದೇವ್ ಕೈಗಡಿಯಾರ ನೋಡಿದ. “ನಿಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಿ: ಶಾಸಕರಲ್ಲಿ ಬಹುಸಂಖ್ಯಾಕರು ನಿಮ್ಮ
ಕಡೆ ಇರುವಂತೆ ನೋಡಿಕೊಳ್ಳಿ. ಅದಕ್ಕೆ ಏನೇನು ಕ್ರಮ ಅಗತ್ಯವೋ ಆ ಕ್ರಮ ತೆಗೆದುಕೊಳ್ಳಿ.”
“ನೀವು ಕಾಶ್ಮೀರದಿಂದ ಬಂದ ಮೇಲೆ ಪ್ರಧಾನಿಗೆ ನನ್ನ ಪರವಾಗಿ ಒಂದು
ಮಾತು ಹೇಳಿ.' - *
“ಹೇಳದೆ ಇರ್ತೀನಾ ?” “ಕಿಷ್ಕಿ೦ಧೆ ರಾಜ್ಯಪಾಲರಿಗೂ ಫೋನ್ ಮಾಡಿ. ಚೌಗುಲೆಯಿ೦ದ೦ತೂ ನಾನು
ಪೂರ್ಣ ಸಹಾಯ ನಿರೀಕ್ಷಿಸ್ತೇನೆ. ಆತನಿಗೂ ನೀವೊಮ್ಮೆ ಫೋನ್ ಮಾಡಿದರೆ ಕೃತಜ್ಞ ೪ಾಗ್ತೇನೆ.” - -
“ಭಿನ್ನಮತೀಯರ ಕಿರಿಚಾಟದಿಂದ ಗಾಬರಿಯಾದೆಯ? ರಾಜಕೀಯದಲ್ಲಿ
ಇದೆಲ್ಲ ಸಾಮಾನ್ಯ, ಮಿನಿ."
“ನನಗಿದೆಲ್ಲ ಹೊಸದು.” “ಹೊತ್ತಾಯು, ಹೋಗ್ರಿಡ್ತೀನಿ. ಕಾಣಿಕೆಗಾಗಿ ಥಾಂಕ್ಸ್. ನನ್ನ ಮರುಕಾಣಿಕೇನ
ಮುಖ್ಯಮಂತ್ರಿಗಳ ಸಭೆಗೆ ನೀವು ಬಂದಾಗ ಸಲ್ಲಿಸ್ತೀನಿ."
ಸೌದಾಮಿನಿ ಇಳಿದಳು. ಬಾಗಿಲು ಮುಚ್ಚಿಕೊಂಡಿತು. ಅದರಲ್ಲಿ ಕಿಟಿಕಿ
ಗಾಜು ಭದ್ರವಾಗಿತ್ತು. ಮಾತನಾಡಿಯೂ ಪ್ರಯೋಜನವಿಲ್ಲ. ಆ ಮಾತು ಒಳಗಿನ ವರಿಗೆ ಕೇಳಿಸುವುದಿಲ್ಲ. ಮೋಹಕ ನಗೆ ಬೀರಲು ಯತ್ನಿಸುತ್ತ ಕೈ ಜೋಡಿಸಿದಳು. ಆತ ಅಂಗೈಯ ಬೆರಳು ತುದಿಗಳನ್ನು ತುಟಿಗೆ ಮುಟ್ಟಿಸಿದ.
* * * ನಕುಲದೇವ ಹೋದ ಸ್ವಲ್ಪ ಹೊತ್ತಿನಲ್ಲೆ ಫೆರ್ನಾಂಡೀಸ್ ಮತ್ತು ಸಿತಾರಾ
ಬಂದರು. ರಾಷ್ತ್ರಾಪಕ್ಷದ ಕಾರ್ಯದರ್ಶಿ ಬ೦ದು ಹೋದರೆ೦ದು ತಿಳಿದಾಗ, ಕಿಷ್ಟಿಂಧೆಯ ಮೇಲೆ ಕವಿದಿರುವ ಮೋಡಗಳು ಚೆದರಿ ಹೋಗಲೂಬಹುದು, ಎಂದುಕೊಂಡರು.
13