ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು

65

ನೀಡಿದರು. ಎಲ್ಲವೂ ಅವರಿಗೆ ಒಪ್ಪಿಗೆಯೇ, ಪಕ್ಷದ ಕಾರ್ಯದರ್ಶಿ ರಾಜಭವನ
ದಿಂದಲೇ ರಾಷ್ಟ್ರಪತಿಗೆ, ಪ್ರಧಾನಿಗೆ ಸ್ಟೇಟ್ ಕಾಲ್ ಮಾಡಿದರು. ರಾಜ್ಯಪಾಲರೂ
ಅವರ ಪತ್ನಿಯೂ ಸೌದಾಮಿನಿಯನ್ನು ಕುತೂಹಲದಿಂದ ಮತ್ತೆ ಮತ್ತೆ ನೋಡಿದರು.
ಪತ್ರಿಕೆಗಳ, ವಾರ್ತಾಸಂಸ್ಥೆಗಳ ಪ್ರತಿನಿಧಿಗಳಿಗೂ, ಛಾಯಾಚಿತ್ರಕಾರರಿಗೂ
ಅವಸರದ ಕರೆ. ರಾಜಭವನದ ದರ್ಬಾರ್ ಹಾಲ್‌ನಲ್ಲಿ ಕಿಷ್ಕಿಂಧೆಯ ಮುಖ್ಯ
ಮಂತ್ರಿಯಾಗಿ “ನಾನು ಸೌದಾಮಿನಿ ದೇವಿ” ಪ್ರತಿಜ್ಞೆ ಸ್ವೀಕರಿಸಿದರು,
ಒಂಭತ್ತು ಗಂಟೆಯ ವಾರ್ತಾಪ್ರಸಾರದಲ್ಲಿ ಆಕಾಶವಾಣಿ ಇದನ್ನು ಬಿತ್ತರಿಸಿತು,
“ಜಗದಲಪುರದಲ್ಲಿ ಹಿರಿಯ ಯೋಗಿನಿ ಬಾಬಾರ ಬಳಿ ಸಾರಿ ನುಡಿದರು :
“ವಾರ್ತ ಕೇಳಿದಿರಾ ?"
"ಹ್ಞ."