ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ಯಶೋಧರ ಚರಿತೆ

ನಿರವಿಸಿದ ಚಂದ್ರಮತಿಯೆಂ-
ಬರಸಿಯೆ ನಾಯುರಗಿ ಮೊಸಳೆ ಆಡು ಲುಲಾಯಂ
ಚರಣಾಯುಧವಧುವಾದಳ್
ಗುರುವಚನದಿನೀಗಳಭಯಮತಿಯಾಗಿರ್ದಳ್೫೮


ನಿನಗಂ ಕುಸುಮಾಳಿಗಂ
ಜಯಿಸಿದವಳೆಂಬುವಭಯರುಚಿಮತಿಗಳ್ ಮು-
ನ್ನಿನ ಜನ್ಮಮನಿತುಮಂ ನೆ-
ಟ್ಟನೆ ಬಲ್ಲರ್ ಕೇಳ್ದುನಂಬು ನೀನ್ ಧರಣಿಪತೀ೫೯


ನೀನರಿವೆ ಕೊಂದ ಘೋರಮ-
ನಾನಿಗ್ರಹವಧೆಯಿನಂದು ಸತ್ತವರಿವರ್
ಮೀನುಂ ಮೊಸಳೆಯುಮಾಡಂ-
ತಾ ನೆಗಳ್ದ ಜಪೋತಮಹಿಷಮಾದಂದರಸಾ೬೦
______________

ಪಡೆದು ಅಭಯರುಚಿಯಾಗಿದ್ದಾನೆ ೫೮. ಚಂದ್ರಮತಿಯೆಂಬ ಆರಸಿ ಕ್ರಮವಾಗಿ
ನಾಯಿ, ಹಾವು, ಮೊಸಳೆ, ಆಡು, ಕೋಣ, ಹೇಂಟೆಯಾಗಿ ಹುಟ್ಟಿದ್ದಳು. ಈಗ
ಗುರುವಿನ ವಚನವನ್ನು ಕೇಳಿದುದರಿಂದಾಗಿ ಅಭಯಮತಿಯಾಗಿ ಜನಿಸಿದ್ದಾಳೆ.
೫೯. ನಿನಗೂ ಕುಸುಮಾವಳಿಗೂ ಹುಟ್ಟಿದ ಅಭಯರುಚಿ ಅಭಯಮತಿಗಳೆಂಬ
ಅವಳಿ ಮಕ್ಕಳು ಹಿಂದಿನ ಇಷ್ಟೂ ಜನ್ಮಗಳನ್ನು ಚೆನ್ನಾಗಿ ಬಲ್ಲರು. ಅವರನ್ನೇ
ಕೇಳು ನಿನಗೆ ವಿಶ್ವಾಸವಾದೀತು. ೬೦. ನೀನು ಕೊಂದ ಆ ಘೋರಕಾರ್ಯದ
ವಿಷಯ ನಿನಗೇ ಗೊತ್ತಿದೆ. ನಿನ್ನ ಭೀಕರ ಹಿಂಸಾಘಾತದಿಂದ ಮೀನು, ಮೊಸಳೆ,
ಆಡು, ಹೋತ, ಕೋಣ ಎಂಬ ಜನ್ಮಗಳಲ್ಲಿದ್ದು ಸತ್ತವರೂ ತಿಳಿದಿದ್ದಾರೆ.