ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ



ಹೊರಟಾಗ ಮಾರಿದತ್ತನ ತಳಾರನಾದ ಚಂಡಕರ್ಮನು ಅವರನ್ನು ಹಿಡಿದು, ಚಂಡಮಾರಿ ದೇವತೆಯ ಮನೆಗೊಯ್ದಾಗ ಅಭಯರುಚಿ ಈ ಕಥೆಯನ್ನು ಹೇಳುತ್ತಾನೆ ಮಾರಿದತ್ತನ ಮನಸ್ಸು ಮಾರ್ಪಟ್ಟು ದೀಕ್ಷೆವಹಿಸುತ್ತಾನೆ. ಇವನು ಸತ್ತು, ಮುಂದೆ ಮೂರನೆಯ ಸ್ವರ್ಗದಲ್ಲಿ ದೇವನೆ ಆಗುತ್ತಾನೆ. ಅಭಯರುಚಿ ಅಭಯಮತಿಗಳೂ ಕಾಲಾಂತರದಲ್ಲಿ ಈಶಾನ ಕಲ್ಪದಲ್ಲಿ ಹುಟ್ಟುತ್ತಾರೆ. ಅಮೃತಮತಿ ಧೂಮಪ್ರಭೆಯೆಂಬ ನರಕದಲ್ಲಿ ತೊಳಲುತ್ತಾಳೆ.

೪ ಪರೀಶಲನ

ಇದಿಷ್ಟು ಕಥೆಯನ್ನು ಸ್ಕೂಲವಾಗಿ ನೋಡುವಾಗ ಕಾಣದ ಸಮಸ್ಯೆಗಳು ಸೂಕ್ಷಾವಲೋಕನ ಸಂದರ್ಭದಲ್ಲಿ ತಲೆಯೆತ್ತುತ್ತವೆ. ಎಲ್ಲವಕ್ಕಿಂತಲೂ ಪ್ರಮುಖವಾದುದು ಅಮೃತಮತಿಯ ವರ್ತನೆಯ ಸಮಸ್ಯೆ. ಯಶೋಧರನ ಕಬ್ಬಿನ ಬಿಲ್ಲಿಗೂ ನನೆಯ ನಾರಿಗೂ ಜನಮೋಹನ ಬಾಣವು ಹುಟ್ಟುವಂತೆ ಹುಟ್ಟಿದವನು ಮಾತ್ರವಲ್ಲದೆ, ಎಳೆವೆಯಿಂದಲೇ ಸೌಂದರ್ಯದ ಮೂರ್ತಿಯಾಗಿ ರೂಪುಗೊಂಡವನು. ತಾರುಣ್ಯದಲ್ಲಿ ಎಳೆಯ ಬೆಂಗಳು, ಪುಷ್ಪಬಾಣ, ಮಲಯಮಾರುತ ಇವುಗಳ ಆಕರ್ಷಕತೆಯನ್ನು ಪಡೆದವನು. ಇಂಥವನ ಮನಃಪ್ರಿಯೆ ಅಮೃತಮತಿ. “ಕನ್ಯಾ ವರಯತೇ ರೂಪಂ ಎಂಬ ಮಾತಿನಂತೆ ಅಮೃತಮತಿ ಯಶೋಧರನ ರೂಪವನ್ನು ಮೆಚ್ಚಿ ಅವನನ್ನು ವರಿಸಿದಳೆಂದಾದರೆ, ಅವನ ಸೌಂದರ್ಯಕ್ಕೆ ಅದೊಂದು ಪ್ರಶಸ್ತಿಯೇ ಸರಿ. ಅವನು ಸ್ವತಃ ರಾಜನಾಗಿದ್ದನೆಂದಮೇಲೆ ಅಧಿಕಾರ ಐಶ್ವರ್ಯಗಳೂ ಅವನಿಗೆ ಬೇಕಾದಷ್ಟಿದ್ದುವು ಎಂದು ಬೇರೆ ಹೇಳಬೇಕಾಗಿಲ್ಲ. ಅರಸುತನದಲ್ಲಿ ಕೂಡ ಅವನು ದುರ್ಬಲನೂ ಅಲ್ಲ; ಹೇಡಿಯೂ ಅಲ್ಲ. ಅವನ ಅಸಿಲತೆ (ಖಡ) ರಣಭೌತವಾಗಿತ್ತೆಂದು ಅವನೇ ಹೇಳುತ್ತಾನೆ. ಅದು ಅವನ ಹಿರಿಯರಿಂದ ಬಂದುದೆ೦ದಾಗಿದ್ದರೆ ಅವನು ಅದರ ಮೇಲೆ ಅಷ್ಟೊಂದು ಅಭಿಮಾನವಿರಿಸಿಕೊಳ್ಳುತ್ತಿದ್ದನೆ? ಅಂತೂ ಯಾವ ಬಗೆಯ ನ್ಯೂನತೆಯೂ ಇಲ್ಲದ ಯಶೋಧರ ಯಾವ ದುರ್ಗುಣವನ್ನೂ ಪಡೆದಿದ್ದನೆಂದಿಲ್ಲ. ಇಂತಹ ಯಶೋಧರಪತ್ನಿ ಅಮೃತಮತಿ. ಆಕೆ ಆತನಿಗೆ ಮನಃಪ್ರಿಯೆ. ಆದರೆ ಅವಳಿಗೆ ಅವನು ಮನಃಪ್ರಿಯನಾಗಿದ್ದನೆ? ಕವಿಯ ಈ ಒಂದು ಮಾತು ಇಲ್ಲಿ ವಿಚಾರಣೀಯ:

ಅಮೃತಮತಿ ಗಡ ಯಶೋಧರ