ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೭೫

ನವಿಲಮೃತಮತಿಯ ಸೆಜ್ಜೆಯ
ದವಳಾರದೊಳಾಡುತ್ತಿರ್ದು ಬದಗನುಮಂ ತ-
ನ್ನವಳೊಡಗೂಡಿರೆ ನಿಟ್ಟಿಸಿ
ಭವರೋಪಷದಿನಿಳಿದುದಷ್ಟವಂಕನ ಕಣ್ಣಂ೪೦


ಆನ್‌ ಬೆಂದೆನೆಂದು ನವಿಲಂ
ಪಾಣ್ಬೆ ಕನಲ್ದಡಸಿ ಪೊಯ್ಯೆ ಮೇಗಣ ನೆಲೆಯಿಂ
ದಂ ಬಿರ್ದುದು ಪಚ್ಚೆಯ ಪದ-
ಕಂ ಬೀಳ್ವಂತಿರೆ ಸುಧಾಂಶುಬಿಂಬದ ಕೊರಲಿಂ೪೧


ಅರಸನುಮಾಗಳೆ ನೆತ್ತದ
ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂ-
ದರೆ ಗೆತ್ತು ಪಿಡಿದುದೆಂಬಾ-
ಚರಿ ಕುಕ್ಕರಿ ನೊಂದು ಬೀಳ್ವ ನಂದನಚರನಂ೪೨


ಅರಸ, ಪಾಪದ ಫಲವನ್ನು ನೋಡು! ೪೦. ಒಮ್ಮೆ ಅಮೃತಮತಿಯು
ಧವಳಶಯ್ಯಾಗಾರದಲ್ಲಿ ನವಿಲು ಆಡುತ್ತಾ ಇತ್ತು. ಅಲ್ಲಿಗೆ ಮಾವುತ ಅಷ್ಟವಂಕನು
ಬಂದನು. ಅಮೃತಮತಿ ಎಂದಿನಂತೆ ಅವನ ಸಮಾಗಮಕ್ಕೆ ಬಂದಳು. ಇದನ್ನು
ಕಂಡ ಕೂಡಲೆ ನವಿಲು ಪೂರ್ವಜನ್ಮದ ರೋಷದಿಂದ ಅಷ್ಟವಂಕನ ಕಣ್ಣನ್ನು
ಕುಕ್ಕಿಬಿಟ್ಟಿತು. ೪೧. “ಅಯ್ಯೊ, ಸತ್ತೆ ನಾನು!” ಎನ್ನುತ್ತಾ ಆ ಕುಲಟೆಯು ನವಿಲ
ಕಡೆಗೆ ನುಗ್ಗಿ ಅದನ್ನು ಹೊಡೆಯಲು ಚಂದ್ರಬಿಂಬದ ಕುತ್ತಿಗೆಯಿಂದ ಪಚ್ಚೆಯ
ಪದಕವೊಂದು ಕೆಳಗುರುಳುವಂತೆ ಉಪ್ಪರಿಗೆಯಿಂದ ಕೆಳಕ್ಕೆ ಬಿದ್ದ ಸತ್ತಿತು. ೪೨.
ಅದೇ ಸಮಯಕ್ಕೆ ನೆತ್ತನಾಡುವ ಆವೇಶದಲ್ಲಿದ್ದ ಯಶೋಮತಿ “ತೆಕ್ಕೊ!” ಎಂದು
ದಾಳವನ್ನು ಇಕ್ಕಿದನು. ಬೀಳುವ ನವಿಲನ್ನು ತೆಗೆದುಕೊಳ್ಳುವಂತೆ ರಾಜನು
ಹೇಳುವನೆಂದು ಗ್ರಹಿಸಿ ನಾಯಿಯು ಬೀಳುತ್ತಿದ್ದ ನವಿಲನ್ನು ಹಿಡಿದುಕೊಂಡಿತು.