ಈ ಪುಟವನ್ನು ಪ್ರಕಟಿಸಲಾಗಿದೆ

೧೭

ಕುರಿತು, " ಅಮಲೆ ! ನಾನೊಬ್ಬಳೇ ಹೋಗಿ ಆ ಮನೆಯಲ್ಲಿ ವಾಸಮಾಡ
ಲಾರೆನು, ನೀನೂ ಅಲ್ಲಿಗೆ ಬಂದಿರಬೇಕು " ಎಂದಳು.
ಅಮಲೆಯು ಒಪ್ಪಿಕೊಂಡಳು. ಇಬ್ಬರೂ ಹೋಗಿ ಧನದಾಸನ
ಮನೆಯಲ್ಲಿ ವಾಸಮಾಡಿಕೊಂಡಿದ್ದರು, ಆದರೂ ಆಗಾಗ್ಗೆ ಅಮಲೆಯು
ಪುರಂದರನ ಮನೆಗೆ ಹೋಗುತ್ತಿದ್ದುದನ್ನು ಹಿರಣ್ಮಯಿಯು ತಿಳಿದು, ಹಾಗೆ
ಹೋಗಕೂಡದೆಂದು ನಿಷೇಧಿಸಿದಳು. ಅಮಲೆಯು ಹೋಗುವುದನ್ನು
ಬಿಟ್ಟಳು.
ತಂದೆಯ ಮನೆಗೆ ಬಂದಾರಭ್ಯ ಅವಳಿಗೊಂದು ವಿಷಯವನ್ನು
ಕುರಿತು ಆಶ್ಚರ್ಯವುಂಟಾಯಿತು. ಒಂದುದಿನ ಅಮಲೆಯು, " ಹಿರಣ್ಮಯಿ !
ನೀನು ಸಂಸಾರನಿರ್ವಾಹಕ್ಕೋಸ್ಕರವಾಗಿ ಯೋಚಿಸಕೆಲಸವಿಲ್ಲ, ನೀನು
ಸ್ವಂತವಾಗಿ ಕಷ್ಟಪಡಬೇಕಾದ ಅವಶ್ಯಕವೂ ಇಲ್ಲ, ಅರಮನೆಯಲ್ಲೆನಗೆ
ಕೆಲಸವಾಗಿದೆ, ದುಡ್ಡು ಕಾಸಿಗೆ ಕಡಿಮೆಯಿಲ್ಲ, ನೀನು ಮನೆಯಲ್ಲಿ ಯಜ
ಮಾನಿಯಾಗಿದ್ದುಕೊಂಡಿರು " ಎಂದು ಹೇಳಿದಳು. ಅಮಲೆಯ ಕೈಯಲ್ಲಿ
ಹೆಚ್ಚು ಹಣಕಾಸು ಬಂದು ಹೋಗುತಿದ್ದುದನ್ನು ನೋಡಿ ಹಿರಣ್ಮಯಿಗೆ
ಆಶ್ಚರ್ಯವುಂಟಾಗಿ ಮನದಲ್ಲಿ ನಾನಾಪ್ರಕಾರವಾದ ಸಂಶಯವು ತಲೆದೋ
ರಿತು.

ಏಳನೆಯ ಪರಿಚ್ಛೇದ.

——————

ವಿವಾಹವಾದ ವರ್ಷದಿಂದ ಐದನೆಯ ಮಾಫುಶುದ್ಧ ಪಂಚಮಿಯು
ಪ್ರಾಪ್ತವಾಯಿತು. ಹಿರಣ್ಮಯಿಯು ಆ ದಿನವನ್ನು ಜ್ಞಾಪಕದಲ್ಲಿಟ್ಟುಕೊ೦
ಡಿದ್ದವಳು ಸಂಧ್ಯಾಕಾಲದಲ್ಲಿ, ವಿಮನೆಯಾಗಿ ಕುಳಿತಿದ್ದಳು. ಕುಳಿತಿದ್ದ
ಹಾಗೆ ಮನಸ್ಸಿನಲ್ಲಿ, " ಗುರುಗಳ ಅನುಜ್ಞೆಯಪ್ರಕಾರ ನಾಳಿನ ದಿನದಿಂದ
ನಾನು ಉಂಗುರವನ್ನು ಹಾಕಿಕೊಳ್ಳಬಹುದು. ಆದರೆ ಹಾಕಿಕೊಳ್ಳಲಾ
ಪೆನೆ ? ಹಾಕಿಕೊಂಡರೆ ನನಗೇನು ಲಾಭ ? ಬಹುಶಃ ಸ್ವಾಮಿಯನ್ನು ಕಂ

3