ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FL ಸತೀಹಿತೈಷಿಣೀ ನಾನೃತಂ ' ( ಧರ್ಮೊವರ್ಧತಿ, ವರ್ಧತಿ' ಎಂಬೀ ಸೂತ್ರಗಳನ್ನು ಮುಂದಿಟ್ಟು ಕೊಂಡು, ಪಾರಮಾರ್ಥಿಕಬುದ್ಧಿಯಿಂದ ಸೈ ಕರ್ತವ್ಯದಲ್ಲಿ ಹಾಗೂ ದೇಶಸೇವೆ, ಲೋಕಹಿತಕಾರ್ಯಗಳಲ್ಲಿ ಯೇ ನಿರತನಾಗಿ ತನಗೆ ಅಹಿತವನ್ನುಂಟುಮಾಡುವವರಲ್ಲಿ ಕೂಡ ಕೆಪಿಸದೆ ಶಾಂತ 5 ನಾಗಿ, ಅವರ ಅಭ್ಯುದಯವನ್ನು ಕೋರುತ್ತಿರುವನು. ಇಂತಹ ಲೋಕೋತ್ತರಗುಣಸಂಪನ್ನ ನಾದ ಕುಮಾರನ ವಿಚಾರದಲ್ಲಿ ಮೂರ್ತ ನಾದ ರವಿವರ್ಮನ ಅವನ ಸಂಗಡಿಗರೂ ನಡೆಯಿಸಿರುವ ದೌಷ್ಯ ವನ್ನು ನೋಡಿದರೆ ಏನನ್ನಬಹುದು ? ಆಹಾ! ಒಡಹುಟ್ಟಿದ ಪ್ರೀತಿಯು ಸ್ವಲ್ಪವಾದರೂ ಬೇಡವೆ ? ಹೋಗಲಿ: ತಮ್ಮ ಅಧರ್ಮಪ್ರವರ್ತನೆಗೆ 10 ಫಲವೇನೆಂದಾದರೂ ಯೋಚಿಸಬೇಡವೆ ? ಹೀಗೂ ವಂಚನೆಯೇ ? ಹೀಗೂ ದ್ರೋಹವೇ ? ಇಷ್ಟರ ಅತ್ಯಾಚಾರವೇ ? ಸುಡು-ಸುಡು ! ದುರಾಚಾರಿಗಳ ದುರ್ಜಿವನವನ್ನು ಸುಡುಸುಡು |! ಅವರ ಕಪಟ, ಕುಟಿಲ, ವೇಷಭಾಷೆಗಳಿಗೆ ಧಿಕ್ಕಾರವಿರಲಿ, ಆಗಲಿ; ಮಾಡಲಿ, ಇದ ರಿಂದ ಸತ್ಯ ಪರಾಕ್ರಮಿಯಾದ ನಮ್ಮ ರಮಾನಂದ ಕುಮಾರನಿಗೇನೂ 15 ಅಪಘಾತವಾಗುವಂತಿಲ್ಲ. ರಮಾನಂದನು ಸನ್ನಿತರ ಪ್ರಬಲಸಹಾಯ ಸಂ ಪತ್ತಿಯಿಂದ ಸುಕ್ಷೇಮಿಯಾಗಿಯೇ ಇರುವನು. ಹಾಗೆ ಆತನಿಗೆ ಸಹಾಯಸಂಪತ್ತಿಯಿಲ್ಲದಿದ್ದರೆ, ಈ ಮೂರ್ಖರ ದ್ರೋಹಗಳಿಂದ ಆತನು ವಿಧ್ಯಾ ಪವಾದಕ್ಕೆ ತುತ್ತಾಗುತ್ತಿದ್ದುದು ಮಾತ್ರವಲ್ಲ ದೆ, ಅಪ ಮೃತ್ಯುವಿಗೂ ಬಲಿಯಾಗುತ್ತಿದ್ದನು. ಆದರೆ, ಈಗ ಇನ್ನಷ್ಟು ದಿನಗಳು 20 ಹೀಗಿದ್ದು ತೀರುವುದು ಇದಕ್ಕೆ ಪ್ರತೀಕಾರ ಮಾಡಲೇ ಬೇಕಲ್ಲವೆ? ಚಿಃ 1 ಚಿಃ !! ಹೆತ್ತೊಡಲನ್ನು ಹಿಡಿದು ಕಟ್ಟುವುದು ಬಲುಕಷ್ಟ. ಮೊದಲೇ ರವಿವರ್ಮನ ದುರ್ನಡತೆ, ಅವಿಧೇಯತೆಗಳನ್ನು ಕುರಿತು ಚಿಂತಿಸುತ್ತಿದ್ದವರಿಗೆ, ರಮಾನಂದನ ಈಗಿನ ಸಂದಿಗ್ಧ ವಿಷಯವೂ, ಆತನ ಮೇಲೆ ಹೊರಿಸಲ್ಪಟ್ಟಿರುವ ಮಿಥ್ಯಾಪವಾದವೂ ಮತ್ತಷ್ಟು 25 ಯಾತನೆಯನ್ನೇ ಉಂಟು ಮಾಡಿರುವುದರಲ್ಲಿ ಆಶ್ಚರ್ಯವೇನು ?