ಈ ಪುಟವನ್ನು ಪ್ರಕಟಿಸಲಾಗಿದೆ



ದ್ವಿತೀಯಾಶ್ವಾಸಂ



      ಕಂ|| ಶ್ರೀಯಂ ವಿತರಣದೊಳ್ ವಾಕ್
            ಶ್ರೀಯಂ ರಾಜನ್ಯವೃತ್ತಿಯೊಳ್,ವಿಮಲಯಶ||
            ಶ್ಶ್ರೀಯಂ ಜಿನಪ್ರವಚನ
            ಶ್ರೇಯದೊಳತಿಶಯಿಸಿ ನೆಗಳ್ದಿನಭಿನವಪಂಪಂ||೧||

       ಆ ವಿಜಯನರನಾಥನೊಂದು ದಿವಸ ವೊಡ್ಡೋಲಗಂಗೊಟ್ಟಿರ್ಪುದುಂ---

ಮ|| ಸಕಲಕ್ಷತ್ರಕಿರೀಟತಾಡಿತ ಪದಾಂಭೋಜಾತನಾಸ್ಥಾನ ವೇ|
      ದಿಕೆಗುತ್ತಾನಿತ ಚಿತ್ರವೇತ್ರಲತನೋರ್ವ೦ ಕಾರ್ಯವಿಜ್ಞಾಪನೋ||
      ತ್ಸುಕಚಿತ್ತಂ ಧವಲೋತ್ತರೀಯವಸನಂ ಲಂಬೋದರಂ ಲಂಬಕೂ|
      ರ್ಚಕಲಾಪಂ ಸಿತಕಂಚುಕಂ ತ್ವರಿತದಿಂ ಬಂದಂ ಪ್ರತೀಹಾರಕಂ||
 
      ಅಂತು ಬಂದು ಮೊಗಸಾಲೆಯೊಳ್ಮೆಯ್ಯಿಕ್ಕಿ ಮೊಗಸುತ್ತಿನ ದುಗುಲದ ಬಿನ್ನ
ಪದ ಸೆರಗನಧರಪಲ್ಲವಕ್ಕೆ ತೆಗೆದು, ದೇವ! ನಾಗಪುರಮನಾಳ್ವಿಭವಾಹನನ ತನೂಭವ ನುದಯಸುಂದರಕುಮಾರನರಮನೆಯ ಬಾಗಿಲೊಳ್ಬಂದು ನಿಂದಿರ್ದಪನೆಂದು ಬಿನ್ನವಿಸೆ ಬರವೇಳೆಂಬುದುಂ---

ಮ||ಸ್ರ| ದಿವದೊಳ್ಬೆಳ್ದಿಂಗಳಂ ಬಿತ್ತರಿಸೆ ತರಳಮುಕ್ತಾವತಂಸಪ್ರಭಾ ಪ
        ಲ್ಲವಮಾಕಾರಂ ಸ್ಮರಾಕಾರಮನಜನಿಸೆ ಪೊಕ್ಕಂ ನೃಪಾವಾಸಮಂ ವಾ||
        ಸವಸೌ೦ದರ್ಯ೦ ಧರಾವಲ್ಲಭಸುಭಗ ಸಭಾಲೋಕನಾಕರ್ಷಣಂ ಮಾ|
        ಡೆ ವಿಶಾಲೋರಸ್ಟ್ಲೀಲೀ ನಿಸ್ತುಲ ಚಕಚಕಿತ ಸ್ಫಾರಹಾರಂ ಕುಮಾರಂ||೩||

        ಕ೦|| ಕತಿಪಯ ಪರಿಜನ ಪರಿವೃತ
              ನತಿಲಲಿತಾಕೃತಿ ಸಿತಾತಪತ್ರದ ನೆಳಲೊಳ್||
              ಸಿತ ಶತಪತ್ರಚ್ಛಾಯಾಂ
              ಚಿತ ಬಾಲ ಮರಾಲ ಲೀಲೆಯಂ ಪಾಲಿಸಿದ೦

ಅಂತು ಬಂದು ನೃಪಸಭಾಸದನಮಂ ಪೊಕ್ಕು---