ಈ ಪುಟವನ್ನು ಪ್ರಕಟಿಸಲಾಗಿದೆ

೮೮

ರಾಮಚಂದ್ರಚರಿತಪುರಾಣಂ

     ತಾದುದು ಗಾಳಿಗೊಡ್ಡಿದ ಮುಗಿಲೆಣೆಯಾದುದು ಕೂಡೆಯೊಕ್ಕಿದಂ।
     ತಾದುದು ರಾಮಬಾಣ ಹತಿಯಿಂದಿದಿರಾದ ವಿರೋಧಿಸಾಧನಂ||೬೭||

ಆಗಳ್--

     ಕಂ|| ಬಲವಳಿಯೆ ತರಂಗತಮಂ
           ಪಲಾಯನೋದ್ಯುಕ್ತನಾಸೆವಟ್ಟಂ ಜಂಘಾ||
           ಬಲಮಂ ದಶರಥರಾಮನ
           ಶಿಲೀಮುಖಕ್ಕೆಡರುವಂತವಂ ದಶಮುಖನೇ||೬೮||

           ಓಡಲೊಡರಿಸುವೊಡಂ ತೊಡೆ
           ಸೇಡೊಡರಿಸಿದಪ್ಪುದೆಂದು ಭಯರಸದಿಂದ||
           ಲ್ಲಾಡೆ ಮನಂ ಕೈದುವನೀ
           ಡಾಡಿದನ೦ಜಿಸುಗುಮಾರುಮಂ ರಾಮಶರಂ||೬೯||

           ತುಳಿಲಾಳ್ತನಕ್ಕವಂ ನೀ
           ರೀಳಿವಂತಳವಳಿದು ಸೂಸೆ ಕಣ್ಣೀರ್ತೇರಿಂ||
           ದಿಳಿದಂ ನೆಲಕ್ಕೆ ಜಸಮಡಿ
           ಗಿಳಿವಿನೆಗಂ ಲುಬ್ಧಕಂ ನೆಲ೦ ಪಳಿವಿನೆಗಂ||೭೦||

ಚ|| ಸುಗಿದಿರೆ ಚಂದ್ರಮಂಡಲದಮುಂದೆ ತಮಂ ಕೆಡೆದಿರ್ದುದೆಂಬಿನಂ|
     ಮುಗಿಯೆ ಕರಾಂಬುಜಂ ಕುವಲಯಂ ನಗುವಂತಿರೆ ರಾಮಚಂದ್ರನೇ||
     ಳ್ಗೆಗೆ ದೆಸೆಗೆಟ್ಟು ತೊಟ್ಟನೆ ತರಂಗತಮಂ ಶರಣೆಂದು ಬೀಳ್ವುದುಂ|
     ಗಗನಮನಾಗಳಾವರಿಸಿದತ್ತಪಹಾರ ಘನಾನಕಸ್ವನಂ||೭೧||

     ಕಂ||ಅಂಬರಮಂ ವಿಜಯಪತಾ
          ಕಾಂಬರವೊಡನೊಡನೆ ಸಕಲ ದಿಗ್ವನಿತಾವ||
          ಕ್ತ್ರಾಂಬುಜಮನಭಯಘೋಷಂ
          ಚುಂಬಿಸಿದುವು ಕಳಿದುದಮರ ಕುಸುಮಾಸಾರಂ||೭೨||

          ಅ೦ಜದಿರಂಜದಿರೆನೆ ಮುಗಿ
          ದಂಜಲಿಪುಟಮಂ ತರಂಗತಮನಿದಿರೊಳ್ನಿಂ||
          ದ೦ಜನಗಿರಿಯವೊಲಿರೆ ಕೊ
          ಟ್ಟಂ ಜಯಜಾಯಾಸಹಾಯನಭಯಮನಾಗಳ||೭೩||