ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ರಾಮಚ೦ದ್ರಚರಿತಪುರಾಣಂ || ೨೨ || ಕಂ|| ಜಯಲಕ್ಷ್ಮಿಯ ನಯನೋತ್ಸಲ ಮಯೂಖಮನೆ ತಾನೆ ಬಂದು ಕರ ಕಿಸಲಯ ಕಾ೦ || ತಿಯಿನೇಂ ರಾಗಂಬತ್ತು ದೊ ಜಯಾಸಿ ಪೊಗರಿಳಿಸೆ ಕಿಸುರ ಮಸಿಯಕ್ಕರಮಂ || ೨೧ || ಕಾಳಾಹಿಯೆನಿಪ ಕೃಷ್ಣನ ತೋಳೊಳ್ ನಿಶ್ವಾಸ ಧೂಮ ಲೇಖಾಕೃತಿಯಿ೦ || ಬಾಳಾಯತ'ಮಿರೆ ಜಡಿದಂ ಬಾಳೊಡನಲ್ಲಾಡೆ ನೆಲ ನೆವದಿಂ ದಿನಪಂ ಅಂತು ಜಡಿದು ಕರವಾಳ ಕೂರ್ಪಂ ನೋಡಲೆಂದುಕಂ|| ಬಾಯ್ತಾರೆ ನಿಲೆ ಕುಮಾರಂ ಪೊಯೊಡೆ ಕೈಯಳವಿದಾರ ಕೈಯಳವಿಯೆನಲ್ || ನೆಲ ಕಾವಿನ ಪೊದೆಯಂ ಪೊಯ್ದ೦ತೊರ್ಮೊದಲೆ ಸರಿದುದಾ ವಂಶವನಂ 1 ೨೩ || ಆ ವಂಶವನದೊಡನೆ ಕಂ | ತಲೆ ಸಂದು ಪಾತೆ ಪಾಲವ ತಲೆವರವೆಡೆವಳಿಯದಟ್ಟೆ ಯಿಂದುಣ್ಣುವಸ್ತ್ರ | ಧ್ವಲಧಾರೆ ನಾಳ ಮೆನೆ ಪಂ ದಲೆ ಪೋಲ್ತುದು ನಭದೊಳಲರ್ದ ಕೆಂದಾವರೆಯಂ || ೨೪ || ಆಗಳ ದಂ ಕಂಡು ನಿರಪರಾಧನಂ ಕೊಂದೆನೆಂದು ಮನದೊಳ್ ಲಕ್ಷಣಂ ಕಟ್ಟು ಕಡೆದು ಕಂ ॥ ವೇಧಸ್ಸಂಕಲ್ಪಂ ದು ರ್ಬೋಧಮಿವಂ ನಿಟ್ಟೆಯಿಂ ನಿರೋಧಿಸಿ ತನುವಂ || ಸಾಧಿಸಿದೊಡೀ ಕೃಪಾಣಮೆ ಬಾಧಾಕರನಾಯ್ತ ಜಾ ಕೃಪಾಣಿಯದವೋಲ್ | ೨೫ || ಎಂದು ಕಾರುಣ್ಯಪರನಾಗಿರ್ಪುದುಂ ತತ್‌ಕ್ಷೇಯಕಮಂ ರಕ್ಷಿಸುವ ಯಕ್ಷಾ ಮರ ಸಹಸ್ರಮಿನ್ನೆಮಗೆ ನೀನೆ ಪತಿಯೆಂದು ಪೊಡೆವಟ್ಟು ಪೂಜಿಸಿ ಪೋಪುದುಂ, ನಿಜಾಗ್ರಜನ ಸವಿಾಪಕ್ಕೆ ಬಂದು ಕರವಾಳ ವೃತ್ತಾಂತಮಂ ವಿದಿತಂ ಮಾಡಿ 1. ಮೆನೆ. ಗ ಘ ಚ.