ರಾಮಚಂದ್ರಚರಿತಪುರಾಣಂ
ಪರಮಬ್ರಹ್ಮಶರೀರಪುಷ್ಟಿ ಜನತಾಂತರ್ದೃಷ್ಟಿ ಕೈವಲ್ಯಬೋ |
ಧ ರಮಾ ಮಕ್ಕಿಕಹಾರಯಷ್ಟಿ ಕವಿತಾವಲ್ಲಿ ಸುಧಾವೃಷ್ಟಿ ಸ ||
ರ್ವ ರಸೋತ್ಪಾದ ನವೀನಸೃಷ್ಟಿ ಬುಧ ಹರ್ಷಾಕ್ಷ್ಯಷ್ಟಿ ಸಾಂಗಸುಂ |
ದರಿ ವಿದ್ಯಾನಟ ನಾಟಕ೦ನಲಿಗೆ ಮತ್ಯಾವಸ್ಥ ಲೀ ರಂಗದೊಳ್
ಕಂ || ಅನಘರನುಬದ್ಧ ಕೇವಲ
ರೆನಿಸಿದ ಗೌತಮ ಸುಧನ್ಮ ಜ೦ಬೂಗಣಭ್ರ ||
ದ್ವಿನುತರೆಮಗೀಗೆ ಶಾಶ್ವತ
ಧನವೆನಿಸಿದ ವಿಶ್ರುತ ಶ್ರುತಾರಾಧನನಂ ||೭||
ಶ್ರುತಕೇವಲಿ ವಿಷ್ಣುವ್ರತಿ
ಪತಿ ಚರಣಂ ನಂದಿ ಪರಮಮುನಿ ಪದಮಪರಾ ||
ಜಿತ ಪಾದಂ ಗೋವರ್ಧನ
ಯತಿ ಕ್ರಮಂjಭದ್ರಬಾಹು ಚರಣಂ ಶರಣಂ ||೮||
ದಶ ಪೂರೈಧರರುಮೇಕಾ
ದಶಾಂಗಧಾರಿಗಳುಮೆನಿಪ ಮುಪದ ನಖ ದೀ ||
ಪ್ತಿ ಶರಚ್ಚಂದ್ರಿಕೆ ದರ್ಶನ
ವಿಶುದ್ದಿಯಂ ಮಾಡುಗಘತಮೋ ವಿಘಟನಮಂ||೯||
ಭೂತಬಲಿ ಪುಷ್ಪದಂತ
ಖ್ಯಾತರ ಜಿನಸೇನ ವೀರಸೇನ ಮುನೀಂದ್ರ ||
ಖ್ಯಾತರ ಸಮಂತಭದ್ರ
ಖ್ಯಾತರ ಪದಪಾಂಸು ಕಿಡಿಸುಗಮಪಾಂಸುಗಳಂ ||೧೦||
ಕವಿ ಪರಮೇಷ್ಠಿಗಳ ಗುಣ
ಸ್ತವನಂಗಳ್ ಪೂಜ್ಯಪಾದ ಯತಿಪತಿಯ ಗುಣ||
ಸ್ತವನಂಗಳೊರ್ಮೆ ನಾಲಗೆ
ಗೆ ವಂದ ಮಾನವನ ವಾನಾಲ೦ ನಿ೦ದಪುದೇ || ೧೧||
ಚತುರಂಗುಲ ಚಾರಣ ಋ
ದ್ಧಿ ತಮಗೆ ಸಮನಿಸಿದುದೆನಿಪ ತಪದುನ್ನತಿಯಿಂ||
ಶ್ರುತದಿಂ ಭೂಮಂಡಲ ವಿ
ಶ್ರುತರೆನಿಸಿದರಿ ಕುಂದಕುಂದಾಚಾರ್ಯರ್ ||೧೨||
1. ಸೌಂದರಿ. ೧೨ ನೆಯ ಪದ್ಯವು ಕ, ಖ, ಪ್ರತಿಗಳಲ್ಲಿಲ್ಲ.