ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ವು ರಾಜ ಲಕ್ಷ ಣ:-ಆಗ್ರಹ | ಅಮೇಧವು ಸಾಂಗವಾಗಿ ನಡೆಯು ವುದಕ್ಕನೇನು ಸಲಕರಣಗಳಾಗಬೇಕೂ ಅವುಗಳನ್ನೆಲ್ಲಾ ನಮಗೆ ತಿಳುಹಿಸು. ನಾವು ಸಿದ್ಧಪಡಿಸುವವು. - ಶ್ರೀರಾಮು:-ಲಕ್ಷ ಣಾ ! ಮಹಾತ್ಮನಾದ ಸುಗ್ರೀವನ ಬಳಿಗೆ ದೂತರನ್ನು ಕಳುಹಿಸು, ಆತನನ್ನು ಸಪರಿವಾರವಾಗಿ ಯಜೇತ ವಕ್ಕೆ ಬರಬೇಕೆಂದು ಹೇಳಿ ಕಳುಹಿಸು, ರಾಕ್ಷಸೇಶಗನಾದ ವಿಭೀರ ನನ್ನು ಬರಮಾಡು, ನನ್ನ ಸಾಮಂತರಾಜರೆಲ್ಲರಿಗೂ ಸಂದೇಶವನ್ನು ಕಳುಹಿಸು, ಅವರೆಲ್ಲರೂ ಸಪರಿವಾಗಿ ಬಂದು ಯಜ್ಞವನ್ನು ನೋಡಿ ಸಂತೋಷಪಡಲಿ. ನಾನಾ ದೇಶಗಳಲ್ಲಿ ವಾಸಮಾಡತಕ್ಕ ಬಾಹ್ಯ ಇವರನ್ನು ಸಪರಿವಾರವಾಗಿ ಬರಮಾಡು, ಗೃಹಸ್ಥರೆಲ್ಲರೂ ಸತೀಸುತ ರೊಂದಿಗೆ ಯಜ್ಞಕ್ಕೆ ಬರುವಂತೆ ಪ್ರಚಾರ ಮಾಡಿಸು, ಸಂಗೀತಗಾರ ರನ್ನ ಸಮಸ್ತ ಕಲಾವಿದರನ್ನೂ ಕರಯಿಸು. ನೈಮಿಶಾರಣ್ಯದಲ್ಲಿ ಗೋಮತೀನದೀತೀರದಲ್ಲಿ ಯಜ್ಞಶಾಲೆಯನ್ನು ಸಿದ್ದಪಡಿಸು, ಸಾವಿ ರಾರುಬಂಡಿಗಳ ಧಾನ್ಯವನ, ವಿವಿಧ ಸಾಮಗ್ರಿಗಳನ್ನೂ ಅಲ್ಲಿನ ಈ ಗ್ರಾಣಗಳಲ್ಲಿ ತುಂಬಿಸು. ಚೆನ್ನಾಗಿ ಹಾಲು ಕರೆಯತಕ್ಕ ಗೋವುಗ ಳನ್ನು ಸಾವಿರಗಟ್ಟಿ ಯಾಗಲ್ಲಿಗೆ ಕಳುಹಿಸು. ಸುವರ್ಣವನ್ನು ಈ ಚಿಗದ್ದೆ ಯಾಗಲ್ಲಿ ಭದ್ರಪಡಿಸು, ಅಲ್ಲಿ ಸಾವಿರಾರು ವಾಸಸ್ಥಾನಗಳನ್ನು ನಿರ್ಮಿಸು, ಪರಿಚಾರಕರನ್ನೂ ಹರಿಜನರನ್ನೂ, ಭಗತನೊಂದಿಗಲ್ಲಿಗೆ ಕಳುಹಿಸು. ಆಬಾಲವೃದ್ಧರಾದಿಯಾಗಿ ಸೌರನ್ನು ಇಲ್ಲಿಗೆ ಕಳುಹಿಸು, ಶಿಲ್ಪಿಗಳು, ಕೋಶಾಧ್ಯಕ್ಷರು, ಮುಂತಾದವರನ್ನಲ್ಲಿಗೆ ಕಳುಹಿಸು. ನ ಜನನಿಯರನ್ನೂ, ಅಂತಃಪುರ ಸ್ತ್ರೀಯರನ್ನೂ, ಭಂಗಾರದಿಂದ ತಯಾರಿಸಲ್ಪಟ್ಟ ಸೀತೆಯನ್ನೂ ಅಲ್ಲಿಗೆ ಭಗತನ ಸಂಗಡ ಕಳುಹಿಸು. ಮಿಕ್ಕ ವಿಷಯಗಳನ್ನು ಕಾಲೋಚಿತವಾಗಿ ತಿಳುಹಿಸುವೆನು, ಲಕ್ಷಣ:-ಮಹದಾಜ್ಞೆ ! ಎಲ್ಲವನ್ನೂ ಸಿದ್ಧಪಡಿಸುವನು. [ಶ್ರೀರಾಮ, ಲಕ್ಷ್ಮಣ, ಭರತ, ಶತ್ರುಘ್ನರು ಅಂತಃಪುರವನ್ನು ಕುರಿತು ತರಳುವರು.] - - -