ಈ ಪುಟವನ್ನು ಪ್ರಕಟಿಸಲಾಗಿದೆ
ರೂಲ್ಸ್ ಮೇಷ್ಟ್ರು
೪೭
ಸರಿಯಾಗಿ ನೋಡಿಕೊಳ್ಳಬೇಕು. ನಿಮ್ಮ ಚೇರ್ಮನ್ನರಂಥವರು ಬಂದುಬಿಟ್ಟರೆ ನಾವೇನು ಮಾಡುವುದು ?
( ಉಪಾಧ್ಯಾಯರು ಕಾಫಿ ತರುವರು, ಎಳನೀರು ಬರುವುದು )
ಮೇಷ್ಟು
ಸ್ವಾಮಿ, ರಾಮಣ್ಣಗೌಡರಿಂದಾನೇ ಈ ಹಳ್ಳಿ ಇಷ್ಟು ಮಟ್ಟಿಗೆ ಇರೋದು. ನಮಗೆಲ್ಲ ಎಷ್ಟೋ ಸಹಾಯ ಮಾಡಿದ್ದಾರೆ. ಅವರಿಲ್ಲದಿದ್ದರೆ ಎರಡು ದಿವಸ ಇಲ್ಲಿ ಪೂರೈಸೋದು ಕಷ್ಟ ಸ್ವಾಮಿ.
ಇನ್ ಸ್ಪೆಕ್ಟರ್
ಮೇಷ್ಟ್ರೇ, ಮಕ್ಕಳನ್ನೆಲ್ಲ ಕರೆಯಿರಿ. ಹಾಡೇನಾದರೂ ಹೇಳಿ ಕೊಟ್ಟಿದ್ದೀರಾ, ಕೇಳೋಣ.
( ಹುಡುಗರು ಜಮಾಯಿಸುವರು. “ ಕಾಯೋ ಶ್ರೀಗೌರಿ” ಹೇಳುವರು. )