ಈ ಪುಟವನ್ನು ಪ್ರಕಟಿಸಲಾಗಿದೆ

ಇವರಲ್ಲದೆ ಪ್ರಸಿದ್ಧ ಕಲಾವಿದರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಕುಂಬ್ಳೆ ಸುಂದರರಾಯರು, ಕೆ. ಗೋವಿಂದ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟರು, ಜಬ್ಬಾರ್ ಸಮೋ, ಕೆರೆಮನೆ ಶಿವಾನಂದ ಹೆಗಡೆ, ಹಿರಿಯ ಸಾಹಿತಿ ಪ್ರೊ. ಎಂ. ರಾಮಚಂದ್ರ ಕಾರ್ಕಳ ಮೊದಲಾದವರು ಜೋಶಿಯವರಿಗೆ ಶುಭಾಶಂಸನಗಳನ್ನು ಕಳುಹಿಸಿದ್ದು ಅವನ್ನು ಇಲ್ಲಿ ಪ್ರತ್ಯೇಕವಾಗಿ ದಾಖಲಿಸಿದ್ದೇವೆ. ಅವರೆಲ್ಲರಿಗೂ 'ಜೋಶಿ ಅಭಿನಂದನಾ ಸಮಿತಿ' ಹಾರ್ದಿಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.
ಕೊನೆಯದಾಗಿ ಒಂದು ಮಾತು. ಈ ಪುಸ್ತಿಕೆಯನ್ನು ಹೊತರುವಲ್ಲಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತು ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಿದ ಡಾ. ಎಂ. ಪ್ರಭಾಕರ ಜೋಶಿಯವರನ್ನು ಮರೆಯುವುದಾದರೂ ಹೇಗೆ? ಅವರಿಗೆ ಹಾರ್ದಿಕ ಕೃತಜ್ಞತೆಗಳು.

ವಂದನೆಗಳೊಂದಿಗೆ
ಮೈಸೂರು
ಇತಿ ತಮ್ಮವ
ದಿನಾಂಕ: 20-11-2017
ಗ.ನಾ. ಭಟ್ಟ

x