ಈ ಪುಟವನ್ನು ಪ್ರಕಟಿಸಲಾಗಿದೆ

ಉದ್ಘಾಟಕರಾದ ಯಕ್ಷಗಾನದ ಅರ್ಥಧಾರಿ, ಕವಿ, ಲೇಖಕ ಡಾ। ರಮಾನಂದ ಬನಾರಿಯವರು ತಾಳಮದ್ದಳೆಯೇ ಒಂದು ವಾಗರ್ಥದ ವಿಶ್ವರೂಪ ದರ್ಶನವನ್ನು ಮಾಡಿಸುತ್ತದೆ. ತನಗೆ ರಂಗದಲ್ಲಿ ಆಪ್ತರಾದವರು ಜೋಷಿಯವರು. ರಂಗದಲ್ಲಾದ ವೈಷಮ್ಯ ಅವರನ್ನು ರಂಗದ ಹೊರಗೆ ಕಾಡಿದ್ದಿಲ್ಲವೆಂದು ನುಡಿದರು. ಕಾರ್ಯಕ್ರಮದ ಪ್ರಸ್ತಾವನೆಯ ನುಡಿಗಳಲ್ಲಿ ವಿದ್ವಾನ್ ಗನಾ ಭಟ್ಟರು ಡಾ. ಜೋಷಿಯವರು ಒಬ್ಬ ವ್ಯುತ್ಪನ್ನ, ಚಿಂತನಶೀಲ, ಮೊನಚುಮಾತಿನ ಅರ್ಥದಾರಿ. ಸದಭಿರುಚಿಯ ವಿನೋದ ಪ್ರಿಯ. ಹಲವು ಆಯಾಮಗಳ ಮೇಲ್ಪಂಕ್ತಿಯ ವಿಮರ್ಶಕನೆಂದು ಕೊಂಡಾಡಿದರು.

ಗನಾ ಭಟ್ಟರು ಮರುದಿನದ ವಿಚಾರಗೋಷ್ಠಿಯಲ್ಲಿ 'ಜೋಷಿಯವರ ತತ್ವ ಚಿಂತನ ಎಂಬ ಕುರಿತು ಮಾತನಾಡಿದರು. ಜೋಷಿಯವರು ಒಬ್ಬ ಒಳ್ಳೆಯ ತತ್ವ ಚಿಂತಕ. ಶಂಕರಾಚಾರ್ಯರ ಅದೈತವನ್ನೂ, ಚಾರುವಾಕರ ನಿರೀಶ್ವರ ವಾದವನ್ನೂ ಸಮನ್ವಯ ಗೊಳಿಸಬಲ್ಲರು. ಯಕ್ಷಗಾನ ಕಲಾವಿದ, ಉಪನ್ಯಾಸಕ, ವಿದ್ವಾಂಸ ಎಂ.ಎ. ಹೆಗಡೆಯವ ರೊಂದಿಗೆ ಅವರು ಬರೆದ 'ಭಾರತೀಯ ತತ್ವ ಶಾಸ್ತ್ರ ಒಂದು ಮೌಲಿಕ ಕೃತಿ. ಭಾರತೀಯ ದರ್ಶನಗಳ ಸಂಗಮವದು. ಅವರ ಇನ್ನೊಂದು ಕೃತಿ 'ತತ್ವ ಮನನ'. ಹದಿನೇಳು ಲೇಖನಗಳನ್ನೊಳಗೊಂಡ ವೇದಾಂತ ತತ್ವ ಸಾರ. ಒಂದೊಂದು ಶಬ್ದಕ್ಕೂ ಅವರು ವಿಶೇಷ ಅರ್ಥವನ್ನು ಕಲ್ಪಿಸಬಲ್ಲರು. ಶಿವನ ಮುಕ್ಕಣ್ಣು ಮೂರು ವೇದಗಳೆಂದು ಅವರು ವ್ಯಾಖ್ಯಾನಿಸುತ್ತಾರೆ. ಹೀಗೆ ಜೋಷಿಯವರ ಪಾಂಡಿತ್ಯದ ಆಳವನ್ನು ಉದಾಹರಣೆಯೊಂದಿಗೆ ವಿವರಿಸಿದರು.

ಯಕ್ಷಗಾನದ ಅರ್ಥದಾರಿ, ಪ್ರವಚನಕಾರ, ಕವಿ ಸೇರಾಜೆ ಸೀತಾರಾಮ ಭಟ್ಟರು ಜೋಷಿ ಒಂದು ವಿಶ್ವಕೋಶ. ಯಕ್ಷಗಾನಕ್ಕೆ ಒಂದು ಅಕಾಡಮಿಕ್ ದೃಷ್ಟಿ ಕೊಟ್ಟವರು. ವಾಗರ್ಥಗಳು ಹೂವೂ, ಪರಿಮಳವೂ ಇದ್ದಂತೆ. ಅವಿನಾಭಾವ. ತಾಳಮದ್ದಳೆ ಒಬ್ಬ ಮೆರೆಯುವ ಕಲೆಯಲ್ಲ. ಕೂಟವಾಗಿ ಹೊಂದಿಕೊಂಡು ಕಲೆಯಲ್ಲಿ ಗಲ್ಲುವತ್ತ ಜೋಷಿಯವರ ಗಮನವೆಂದು ವಿಶ್ಲೇಷಿಸಿದರು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ। ಕೊಳಂಬೆ ಚಿದಾನಂದ ಗೌಡರು ಜೋಷಿಯವರ ನಿರ್ವಹಣೆಯನ್ನು ಕಂಡುದು ಕಡಿಮೆ. ಆದರೆ ಪ್ರಯಾಣ ಕಾಲದಲ್ಲಿ ಜೋಷಿಯವರ ಧ್ವನಿಮುದ್ರಿಕೆಗಳನ್ನು ಆಲಿಸುವ ಹವ್ಯಾಸವಿದೆ. ಅವರ ಮಾತಿನ ಮೋಡಿಗೆ ತಾನು ಒಳಗಾಗಿದ್ದೇನೆಂದರು.

ಮರುದಿನದ 'ಡಾ। ಜೋಷಿಯವರ ಜೀವನ ಮತ್ತು ಸಾಧನೆ' ಎಂಬ ವಿಚಾರ ಸಂಕಿರಣದ ಕಲಾಪದಲ್ಲಿ ಯಕ್ಷಗಾನ ಕಲಾವಿದ, ಉಪನ್ಯಾಸಕ, ನಿವೃತ್ತ ಪ್ರಾಚಾರ್ಯ ಎಂ.ಎಲ್. ಸಾಮಗರು 'ಜೋಷಿಯವರ ವಿಮರ್ಶಾ ವಿಧಾನ (ಮೌಖಿಕ ಮತ್ತು ಗ್ರಾಂಥಿಕ)' ಎಂಬ ವಿಷಯದಲ್ಲಿ ಪ್ರಬಂಧವನ್ನು ವಾಚಿಸಿದರು. ಜೋಷಿಯವರದು ಟಿಪ್ಪಣಿ ರೂಪದ ಬರೆಹ ಮತ್ತು ಮಾತು. ಅಲ್ಲಿ ಶಬ್ದದ ದುಂದುಗಾರಿಕೆಯಿಲ್ಲ. ವಿಷಯಾಂತರದ ಕವಲಿಲ್ಲ. ಗೊಂದಲಕ್ಕೆ ಎಡೆಯಿಲ್ಲ. ಡಾ। ಶಿವರಾಮ ಕಾರಂತರ ನಂತರದ ಶ್ರೇಷ್ಠ ವಿಮರ್ಶಾ ಕೊಡುಗೆ ಅವರದು. ಕಾರಂತರು ಯಕ್ಷಗಾನದ

ವಾಗರ್ಥ ಗೌರವ / 9