ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನಕ್ಕೊಬ್ಬರೇ ಜೋಶಿ

ಅಭಿನಂದನಾ ಭಾಷಣ

ಎನ್. ಅಶೋಕ ಭಟ್, ಉಜಿರ

ಡಾ. ಎಂ. ಪ್ರಭಾಕರ ಜೋಶಿ ಅನ್ನುವಲ್ಲಿ 'ಎಂ' ಅನ್ನುವುದು ಕಾರ್ಕಳದ ಮಾಳ, ಮಂಗಳೂರು ಮತ್ತು ಮೈಸೂರನ್ನು ಧ್ವನಿಸುತ್ತದೆ. ಜೋಶಿಯವರ ಕೀರ್ತಿ ಧಾವಲ್ಯ ಈ ಮೂರು ಊರಿಗಷ್ಟೇ ಸೀಮಿತವಾದುದಲ್ಲ. ಅದು ಇಡೀ ಕರ್ನಾಟಕವನ್ನು ವ್ಯಾಪಿಸಿದೆ. ಜೋಶಿಯವರು ತುಂಬಾ ದೊಡ್ಡ ಕೆಲಸವನ್ನು ಮಾಡಿದವರು. ಅರ್ಥ, ಬರಹ, ಭಾಷಣ, ಸಹಾಯ, ವಿಚಾರ, ಸಂಪನ್ಮೂಲ- ಇವುಗಳೊಟ್ಟಿಗೆ ಸರಸ ವ್ಯಕ್ತಿತ್ವಗಳೆಲ್ಲಾ ಸೇರಿ ಯಕ್ಷಗಾನಕ್ಕೊಬ್ಬನೇ ಜೋಶಿ ಎಂಬುದು ವರ್ಣನೆಯಲ್ಲ. ನಿಜವಾಗಲೂ ಕೇಳಿದಾಗಲೆಲ್ಲಾ ವಸ್ತು, ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ. ಆಹ್ವಾನ ಪತ್ರಿಕೆಯ ವಿನ್ಯಾಸದಿಂದ ಹಿಡಿದು ಪುರಾಣ ಮಾಹಿತಿ, ಶಾಸ್ತ್ರವಿಷಯದ ವರೆಗೆ ಯಾವಾಗಲೂ ಅವರನ್ನು ಕೇಳಿದರೆ ಉತ್ತರ ರೆಡಿ. ಇತರರಿಗೆ ಸಹಾಯ ಮಾಡುವಲ್ಲಿ ಡಾ. ಜೋಶಿ ದಧೀಚಿ ಪ್ರವೃತ್ತಿಯವರು. ಕೇಳಿದ್ದನ್ನು ಇಲ್ಲ ಅನ್ನುವುದೇ ಅವರ ಜಾಯಮಾನದಲ್ಲಿ ಇಲ್ಲ.

ಜೋಶಿಯವರು ಬೆಸೆಂಟ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಗಳಿಸಿದ ಜನಪ್ರಿಯತೆ, ಸಹವರ್ತಿಗಳ ಪ್ರೀತಿ ಎಲ್ಲರಿಗೆ ಸಿಕ್ಕುವಂಥಾದ್ದಲ್ಲ. ಅವರ ವಿದ್ಯಾರ್ಥಿಗಳು ಅವರ ಪಾಠ ಪ್ರವಚನ ಕಾಳಜಿಗಳನ್ನು ನೆನಪಿಸುವ ರೀತಿಯೇ ಒಂದು ಸಂಶೋಧಕ, ಸಂಸ್ಕೃತಿ ಚಿಂತಕ, ಅರ್ಥಧಾರಿ, ಸಂಘಟಕ ಡಾ. ಏ. ಪ್ರಭಾಕರ ಜೋಶಿ ಅಭಿನಂದನಾ ಸಮಿತಿ, ಮೈಸೂರು ಜೋಶಿ ವಾಗರ್ಥ ಗೌರವ ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಪ್ರದರ್ಶನ