ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಕಲಾವಿದರೂ ರೂಢಿಯಲ್ಲಿ ಇಟ್ಟುಕೊಳ್ಳದ ಒಂದು ಪದ್ಧತಿಯನ್ನು ಜೋಶಿಯವರು ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಸ್ನೇಹದ ತೆಕ್ಕೆಗೆ ಸಿಕ್ಕಿದ ಯಾರೇ ಇರಲಿ, ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದಿರಲಿ, ಮನೆಗೆ ಹಿಂತಿರುಗಿದ ಕೂಡಲೆ ಅವರಿಗೆ ಒಂದು ಕೃತಜ್ಞತಾ ಪತ್ರ ಬರೆಯವುದು ಅವರಿಗೆ ಅನ್ನ, ಉಸಿರಿನಷ್ಟೇ ಸಹಜವಾದ ಕ್ರಿಯೆಯಾಗಿದೆ. ಇದರಿಂದ ಸ್ನೇಹವರ್ಧನೆಯಷ್ಟೇ ಅಲ್ಲ; ಕಾರ್ಯಕ್ರಮ ಏರ್ಪಡಿಸಿದ ಸಂಘಟಕರಿಗೆ ಒಂದು ಕೃತಕೃತ್ಯತಾ ಭಾವ ಉಂಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಂಥಾದ್ದನ್ನು ಜೋಶಿ ಒಂದು ವ್ರತದಂತೆ ಮಾಡಿಕೊಂಡು ಬಂದಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆ, ಕಾರ್ಕಳ ತಾಲ್ಲೂಕು ಮಾಳದಲ್ಲಿ 6-2-1946ರಂದು ನಾರಾಯಣ ಜೋಶಿ ಮತ್ತು ಲಕ್ಷ್ಮೀಬಾಯಿ ದಂಪತಿಗೆ ಮೂರನೆಯ ಮಗನಾಗಿ ಹುಟ್ಟಿದ ಜೋಶಿ ಎಳವೆಯಿಂದಲೂ ಯಕ್ಷಗಾನಕ್ಕೆ ಮನಸೋತವರು. ತಂದೆ ಸಂಸ್ಕೃತ ವಿದ್ವಾಂಸರು. ತಾಯಿಯ ತಂದೆ ಯಕ್ಷಗಾನ ಗುರು. ಕಲೆ, ಸಾಹಿತ್ಯದ ಹಿನ್ನೆಲೆ ಇರುವ ಕುಟುಂಬ ಅವರ ಯಕ್ಷಗಾನ ಪ್ರೇಮಕ್ಕೆ ನೀರೆರೆಯಿತು. ಉಜಿರೆ, ಮಾಳ, ಕಾರ್ಕಳ, ಮುಲ್ಕಿ, ಧಾರವಾಡದಲ್ಲಿ ವಿದ್ಯಾಭ್ಯಾಸ, ವಿದ್ಯಾರ್ಥಿ ದೆಸೆಯಲ್ಲೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಹಾಗೆಯೇ ಜ್ಞಾನತೃಷೆಯನ್ನೂ ಹೆಚ್ಚಿಸಿತು. ಸುತ್ತಮುತ್ತಲಿನಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳು, ಬಯಲಾಟಗಳು ಅವರ ಯಕ್ಷಗಾನ ಪ್ರೇಮಕ್ಕೆ ಪ್ರೋತ್ಸಾಹ ನೀಡಿದವು. ಅಲ್ಲಿಯ ಗ್ರಂಥಾಲಯಗಳು ಅವರ ಸಾಹಿತ್ಯಾಭಿರುಚಿಯನ್ನು ಕೆರಳಿಸಿದವು. ಇವೆಲ್ಲದರ ಫಲವಾಗಿ ಅವರಲ್ಲಿ ಒಂದು ಸಾಂಸ್ಕೃತಿಕವಾದ, ಘನವಾದ ವ್ಯಕ್ತಿತ್ವ ರೂಪುಗೊಂಡವು.

ಸಾಂಸಾರಿಕವಾಗಿ ಜೋಶಿ ಇಬ್ಬರು ಹೆಣ್ಣುಮಕ್ಕಳ ತಂದೆ. ಸ್ವಾತಿ ಮತ್ತು ಶ್ವೇತಾ. ಇಬ್ಬರಿಗೂ ಮದುವೆಯಾಗಿ ಗಂಡಂದಿರೊಡನೆ ಅವರು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಮಡದಿ ಶ್ರೀಮತಿ ಸುಚೇತಾ ಜೂನಿಯರ್ ಕಾಲೇಜೊಂದರ ಪ್ರಾಧ್ಯಾಪಕಿಯಾಗಿ ನಿವೃತ್ತರಾಗಿದ್ದಾರೆ. ಜೋಶಿಯವರ ಸಾರಸ್ವತ ಕೈಂಕರ್ಯದಲ್ಲಿ ಅವರ ಸಹಾಯ- ಸಹಕಾರ ದೊಡ್ಡದು.

ಜೋಶಿಯವರದು ಒಂದು ಅಪೂರ್ವ ವ್ಯಕ್ತಿತ್ವ ಅಧ್ಯಯನ, ಅನುಭವ, ತೆರೆದ ಮನಸ್ಸು, ಹೊಸಚಿಂತನೆ, ಸರಸ ಸಂಭಾಷಣೆ, ಅಂತಃಕರಣ, ಔದಾರ್ಯ, ಸದಭಿರುಚಿಯ ಹಾಸ್ಯ, ವ್ಯಂಗ್ಯ, ನಿರ್ದಾಕ್ಷಿಣ್ಯದ ಮಾತು ಮುಂತಾದವುಗಳಿಂದ ಜನರ ಮನಸ್ಸನ್ನು ಬಹು ಬೇಗ ಗೆಲ್ಲಬಲ್ಲರು. ಇಂತಹ ಜೋಶಿಯವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ-ಗೌರವ- ಪುರಸ್ಕಾರಗಳು ಬಂದಿವೆ. ಇತ್ತೀಚೆಗೆ ಬಂದ 'ಪಾರ್ತಿಸುಬ್ಬ ಪ್ರಶಸ್ತಿ'ಯಿಂದ 'ಯಕ್ಷಮಂಗಳ' ಪ್ರಶಸ್ತಿಯವರೆಗೆ ಅವರಿಗೆ ಬಂದ ಒಂದೊಂದು ಪ್ರಶಸ್ತಿಯೂ ಯಕ್ಷಗಾನ ಪ್ರೇಮಿಗಳ ಅಭಿಮಾನಕ್ಕೆ ಕೋಡು ಮೂಡಿಸಿವೆ. ಅವರ ಬಹುಮುಖ ಪ್ರತಿಭೆ ಮತ್ತು ಸಾಧನೆಗಳನ್ನು ಎತ್ತಿಹಿಡಿದಿವೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರದಾನ ಮಾಡುವ 'ಪಾರ್ತಿಸುಬ್ಬ

ವಾಗರ್ಥ ಗೌರವ / 36