ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಕ್ಷ ಭಾಷಣ

ನಾಡಿನ ಕಣ್ಮಣಿ - ಜೋಶಿ

ಡಾ. ಕೆ.ಎಂ. ರಾಘವ ನಂಬಿಯಾ‌ರ್

ದಿಕ್ಕಾಲಾದನವಚ್ಚಿನ್ನಾಂತ ಚಿನ್ಮಾತ್ರಮೂರ್ತಯೇ
ಸಾನುಭೂಕಮಾನಾಯ ನಮಃ ಶಾಂತಾಯ ತೇಜಸೇ
ವೇದಿಕೆಯಲ್ಲಿ ಮಂಡಿಸಿರುವ ಸನ್ಮಾನಮೂರ್ತಿಗಳಾದ ಡಾ. ಎಂ. ಪ್ರಭಾಕರ ಪ್ರಾ॥ ಸುಚೇತಾ ಜೋಶಿ ದಂಪತಿಗಳೇ, ಸಕಲ ಆದರಣೀಯ ಅತಿಥಿಗಳೇ, ಸಭೆಯಲ್ಲಿ ಮಂಡಿಸಿರುವ ಎಲ್ಲಾ ಹಿರಿಯರೇ, ವಿದ್ವನ್ಮಣಿಗಳೇ, ಯಕ್ಷಗಾನದ ಆರಾಧಕರಾದ ಸುಮನಸ್ಸುಗಳೇ, ಎಲ್ಲರಿಗೆ ವಂದನೆಗಳು.

ಯಕ್ಷಗಾನವನ್ನು ಪ್ರೀತಿಸಿದ, ಆದರಿಸಿದ ಎಲ್ಲರೂ ಹರುಷಪಡುವ ಸಂಭ್ರಮಿಸುವ ದಿನವಿದು. ಯಕ್ಷಗಾನ ರಂಗ ಸಂಭ್ರಮಿಸುವ ಗಳಿಗೆಯಿದು.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ನೆಗಳೆ ಹೊಂದಿರುವ ಮಹಾನಗರಿ ಮೈಸೂರಿನಲ್ಲಿ ಇತಿಹಾಸ ಪ್ರಸಿದ್ಧ ಜಗನ್ನೋಹನ ಅರಮನೆ ಸಭಾಂಗಣದಲ್ಲಿ ನನ್ನ ಅತ್ಯಂತ ಆತ್ಮೀಯ ಮಿತ್ರರಾದ ಡಾ. ಎಂ. ಪ್ರಭಾಕರ ಜೋಶಿ ಮತ್ತವರ ಕುಟುಂಬವನ್ನು ಸಂಮಾನಿಸುವ ಸದವಸರದ ಅಧ್ಯಕ್ಷಸ್ಥಾನ ನನ್ನದಾಗಿದೆ ಎಂಬುದು ನಿಜಕ್ಕೂ ನನ್ನ ಪಾಲಿನ ಪುಣ್ಯಫಲ ಎಂದೇ ಭಾವಿಸುವೆ.

ಎಲ್ಲಿಯ ಮಾಳ? ಎಲ್ಲಿಯ ಮೈಸೂರಿನ ಜಗನ್ನೋಹನ ಅರಮನೆ ಸಭಾಗೃಹ?