ಈ ಪುಟವನ್ನು ಪ್ರಕಟಿಸಲಾಗಿದೆ

ನಿಂತು ಮಾಡಿದ ಪ್ರಯತ್ನದಲ್ಲಿ ಎಷ್ಟು ಹಿರಿಯರು ಐವತ್ತು ಅರುವತ್ತು ವರ್ಷವಾಗುವುದ ರೊಳಗೆ ಇಂಥ ಗೌರವವನ್ನು ಪಡೆದಿಲ್ಲ? ಇದೂ ಗಮನಕ್ಕೆ ಬರುತ್ತದೆ. ಆದರೇನು? ಈಗಲಾದರೂ ಇದು ನಡೆಯಿತಲ್ಲ! ಕರಾವಳಿಯ ಜನರೇ ಮುಂದೆ ನಿಂತು ಇದನ್ನು ಮಾಡಿದ್ದರಿಂದ ಈ ಸಮಾರಂಭ ಮಾಳದಲ್ಲಿ, ಕಾರ್ಕಳದಲ್ಲಿ, ಮಂಗಳೂರಿನಲ್ಲಿ ಆಗುತ್ತಿದ್ದರೆ ಎಷ್ಟು ಆತ್ಮೀಯವೂ ಹೃದಯಸ್ಪರ್ಶಿಯೂ ಆಗಿರಬಹುದಿತ್ತೋ ಅದಕ್ಕೆ ಸರಿಮಿಗಿಲೆನಿಸಿದ ಸಂಭ್ರಮ ಇಲ್ಲಿ ಪ್ರಾಪ್ತವಾಗಿದೆ. ಇನ್ನು ಇದಕ್ಕೆ ಮಿಗಿಲಾದುದೇ ಆದ ಸಂಭ್ರಮ ಎಲ್ಲಿ ನಡೆದರೂ ಅದಕ್ಕಿನ್ನು ದ್ವಿತೀಯ ಸ್ಥಾನ.
ಜೋಶಿಯವರ ಸನ್ಮಾನಕ್ಕೆ ಮೈಸೂರಿನಲ್ಲಾದರೂ ಅವರ ಸ್ವಸಮುದಾಯದ ಚಿತ್ಪಾವನರೇ ಮುಂದಕ್ಕೆ ಬರಬೇಕಾಯಿತು. ಈ ಹಿಂದೆ ಕರಾವಳಿಯಲ್ಲಿ ನಡೆದ ಹಲವು ಹಿರಿಯರ ಸಂಮಾನ, ಸಂಸ್ಮರಣ ಸಮಾರಂಭಗಳಲ್ಲಿ ಅವರವರ ಜಾತೀಯ ಸಮುದಾಯ ಗಳವರೇ ಹೆಗಲುಗೊಟ್ಟಿದ್ದವರು. ನಿಜಕ್ಕಾದರೆ “ಜೋಶಿ ಅವರಂತಹ ಕಲಾಕಾರರು ಅಖಿಲ ಸಮಾಜಕ್ಕೆ ಸೇರಿದವರು. ಅವರ ಸನ್ಮಾನ ಸಾರ್ವಜನಿಕ ಪ್ರಯತ್ನದಲ್ಲಿ ಆಗಬೇಕು” ಎಂಬ ಅಭಿಪ್ರಾಯ ಆಗಲೇ ಇಲ್ಲಿಯ ಗೋಷ್ಠಿಯೊಂದರಲ್ಲಿ ಎತ್ತಿಹೇಳಲ್ಪಟ್ಟಿತು. ಆ ಮಾತು ಯಥಾರ್ಥವೇ. ಆದರೆ ಚಿತ್ಪಾವನರೂ ಇಂಥ ಕೆಲಸಕ್ಕೆ ಹೊರಡದಿದ್ದರೆ ಇನ್ನಾರನ್ನು ಕಾದುಕುಳ್ಳಿರಬೇಕು?
ಜಾತೀಯ ಸಂಘಟನೆಗಳ ವಿಚಾರದಲ್ಲಿ ನನಗೆ ಬೇರೆಯೇ ಹೇಳಲಿಕ್ಕಿದೆ. ಜಾತೀಯ ಸಂಘಟನೆಗಳು ಎಷ್ಟು ಸಾಧ್ಯವೋ ಅಷ್ಟು ಬಲಿಷ್ಠವಾಗಿ ಸರ್ವಮುಖಿಯಾಗಿ ಬೆಳೆಯಬೇಕು. ಇದರಿಂದ ಜಾತಿಯೊಳಗೆ ಭದ್ರತೆ, ವ್ಯಾವಹಾರಿಕ ಸುಗಮತೆ ಎಲ್ಲಾ ಉಂಟಾಗುತ್ತದೆ. ಆದರೆ ಆಧುನಿಕ ಭಾರತದ ಸ್ಥಿತಿಗತಿಯ ಸುಧಾರಣೆಯ ದೃಷ್ಟಿಯಲ್ಲಿ ಮಹಾರಾಷ್ಟ್ರದ ಭೂದಾನದ ಚಳವಳದ ನಾಯಕರಾಗಿದ್ದ ಕಾಕಾಸಾಹೇಬ್ ಕಾಲೇಲ್ಕರ್ ಅವರಂದಂತೆ “ವಿವಾಹವನ್ನು ಸ್ವಜಾತಿಯೊಳಗೆ ನಿಷೇಧಿಸಬೇಕು”. ಇವತ್ತು ಸರಕಾರದ ಪ್ರಯತ್ನದಿಂದ ಶಿಕ್ಷಣ, ಶೌಚ, ದಂಧೆ, ಜೀವನ ಶೈಲಿ, ಕುಟುಂಬ ಪದ್ಧತಿ ಇವುಗಳಲ್ಲಿ ಬಹಳಷ್ಟು ಏಕರೂಪತೆ, ಸಮಾನತೆ ವಿವಿಧ ಸಮುದಾಯಗಳಲ್ಲಿ ಆಗಿರುವುದರಿಂದ ಅಂತರ್ಜಾತೀಯ ವಿವಾಹದ ಶಾಸನಾತ್ಮಕ ಪ್ರಯತ್ನ ವಿಫಲವಾಗದು. ಈ ನಿಟ್ಟಿನಲ್ಲಿ ಹಿಂದೆ ಬ್ರಾಹ್ಮಣ ಮಾತ್ರವಲ್ಲ ಅಬ್ರಾಹ್ಮಣ ಗೋತ್ರಗಳು ಕೂಡಾ ಸಗೋತ್ರ ವಿವಾಹವನ್ನು ನಿಷೇಧಿಸಿ ವಂಶೀಯವಾಗಿ ಉತ್ತಮಿಕೆಯನ್ನು ಸಾಧಿಸಿದ್ದುಂಟು. ಇದು ತತ್ವಣವೇ ಆಗಬೇಕೆಂದಿಲ್ಲ. ಈ ಕಡೆಗೆ ಒಂದಿಷ್ಟು ಯೋಚನೆಯನ್ನು ಹರಿಸಿದರೂ ಭಾರತೀಯ ಪ್ರಜಾಕೋಟಿಯ ಕ್ಷೇಮ ಬಹವಾಗಿ ಸಾಧಿತವಾಗುತ್ತದೆ ಎಂಬುದು ನನ್ನ ಆಶಯ.
ಒಂದಿಷ್ಟು ವಿಷಯಾಂತರವಾದರೂ ಅಪ್ರಸ್ತುತವಾಗಲಿಲ್ಲ. ಯಾಕೆಂದರೆ ಗೋಷ್ಠಿಯೊಂದರಲ್ಲಿ ಎತ್ತಿದ ಮಾತೊಂದಕ್ಕೆ ಸಮಾಧಾನ ಸಿಗಲೆಂದು ಇಷ್ಟನ್ನು ಹೇಳಿದೆ.

ಡಾ. ಎಂ. ಪ್ರಭಾಕರ ಜೋಶಿ 'ವಾಗರ್ಥ ಗೌರವ'ದ ಬಗೆಗೆ ಒಂದಿಷ್ಟು ಹೇಳಲೇ ಬೇಕು. ನಾನು ಮತ್ತು ಜೋಶಿಯವರು ಬಾಲ್ಯಸ್ನೇಹಿತರು. ಒಂದೇ ವರ್ಷದಲ್ಲಿ

ವಾಗರ್ಥ ಗೌರವ / 47