ಶಾಪಾದಪಿ ವರಾದಪಿ!
೯೯
ಮಹಾಭಾರತದಲ್ಲಿ ರಾಮಕಥೆಯು ವನಪರ್ವದ ಅಧ್ಯಾಯದಲ್ಲಿ (೨೭೩ರಿಂದ ೨೯೧) ಬಂದಿದೆ.
ಕಾಮಮಂಗಾನಿ ಮೇ ಸೀತೇ ದುನೋತು ಮರಕಧ್ವಜ: |೨೭||
ನ ತ್ವಾಮಕಾಮಾಂ ಸುಶ್ರೋಣಿ ಸಮೇಷ್ಯೇ ಚಾರುಹಾಸಿನೀಮ್ ||೨೮||
“ಹೇ ಸುಂದರಿ! ಎಲೈ ಸುಹಾಸಿನಿಯೆ! ಕಾಮನು ನನ್ನ ಶರೀರವನ್ನು ಷ್ಟೇ ಪೀಡಿಸಿದರೂ ನಾನು ನನ್ನ ಒಪ್ಪಿಗೆಯಿಲ್ಲದೆ ಸಮಾಗಮಿಸುವುದಿಲ್ಲ.” ಈ ರೀತಿ ರಾವಣನು ನಿಖರವಾಗಿ ಹೇಳಿದ್ದಾನೆ; ಆದ್ದರಿಂದ ಇನ್ನಿತರ ಪುರಾವೆಗಳ ಆವಶ್ಯಕತೆಯಿಲ್ಲ.
ತ್ರಿಜಟೆ ಎಂಬ ರಾಕ್ಷಸಿಯು ಸೀತೆಯಲ್ಲಿ ನೆಚ್ಚಿಕೆಯನ್ನುಂಟುಮಾಡಿ ಈ ರೀತಿ ಹೇಳಿದ್ದಾಳೆ:
ಮಾ ಚ ತೇsಸ್ತು ಭಯಂ ಭೀರು ರಾವಣಾಲ್ಲೋಕಗರ್ಹಿತಾತ್ |
ನಲಕೂಬರಶಾಪೇನ ರಕ್ಷಿತಾ ಹ್ಯಸಿ ನಂದಿನೀ ‖೫೯‖.
ಶಪ್ತೋಹ್ಯೇಣ ಪುರಾ ಪಾಪೋ ವಧುಂ ರಂಭಾಂ ಪರಾಮೃಶನ್ |
ನ ಶಕ್ನೋತ್ಯವಶಾರಂ ನಾರೀಮುಪೈತುವ ಜಿತೇಂದ್ರಿಯಃ ‖೬೦‖
“ಹೇ ನಂದಿನಿ! ಆತನಿಗೆ ಕುಬೇರಪುತ್ರನಾದ ನಲಕೂಬರನ ಶಾಪವು ದೊರಕಿದೆ. ಅದರಿಂದಲೇ ನಿನ್ನ ರಕ್ಷಣೆಯಾಗುತ್ತಿದೆ. ಪೂರ್ವದಲ್ಲಿ ಈ ದುಷ್ಟನು ಸೊಸೆಯಂತಿದ್ದ ರಂಭೆ ಎಂಬ ನಾರಿಯೊಡನೆ ಅತಿಪ್ರಸಂಗವನ್ನು ಮಾಡಿದನು. ಆ ಕಾರಣ ಆತನಿಗೆ ತಾನಾಗಿ ಶಾಪ ದೊರಕಿದೆ. ಈ ಅಜಿತೇಂದ್ರಿಯನಾದ ರಾವಣನು ಆತನಿಗೆ ತಾನಾಗಿ ವಶವಾಗದ ಸ್ತ್ರೀಯೊಡನೆ ಸಮಾಗಮವನ್ನು ನಡೆಸಲು ಅಸಮರ್ಥನಾಗಿದ್ದಾನೆ.”
ಶ್ರೀರಾಮನು ಸೀತೆಯ ಚಾರಿತ್ರ್ಯದ ಶುದ್ಧತೆಯ ಬಗ್ಗೆ ಸಂದೇಹವನ್ನು ತಳೆದು ಅವಳನ್ನು ತ್ಯಜಿಸಲು ಸಿದ್ಧನಾದಾಗ ಬ್ರಹ್ಮದೇವನು ಪ್ರಕಟನಾಗಿ ಇಂತೆಂದನು:
ನಲಕೂಬರಶಾಪೇನ ರಕ್ಷಾ ಚಾಸ್ಯಾಃ ಕೃತ ಮಯಾ ‖೩೩‖
“ನಲಕೂಬರ ಶಾಪದಿಂದ ನಾನು ಅವಳ ರಕ್ಷಣೆಯನ್ನೇರ್ಪಡಿಸಿದ್ದೆನು.ಅದೇ ರೀತಿ