ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೧೪೫ ಶ್ವೇದವನ್ನು ವಿಧಿಸಿದ ನನ್ನ ಪಾಪಕೃತ್ಯವು, ನನ್ನ ಹೃದಯವನ್ನು ಸುಡುವು ದಕ್ಕುಪಕ್ರಮಮಾಡಿದೆ ನನ್ನ ಅಪರಾಧಕ್ಕೆ ಇದು ತಕ್ಕ ಶಿಕ್ಷೆಯಾಗಿ ಪರಿ ಣಮಿಸಲಿ ! ನನ್ನಂಧ ದುರಾರ್ಗರನ್ನು ಸನ್ಮಾರ್ಗಕ್ಕೆ ತರುವುದಕ್ಕಾಗಿಯೇ, ದೇವರು ನಿಮ್ಮನ್ನು ನಿಲ್ಯಾಣಮಾಡಿರುವನು. ನೀವಿಬ್ಬರೂ ಆಯುರಾರೋ ಗ್ಯವುಳ್ಳವರಾಗಿ ಧರ ಸಂಸ್ಥಾಪನಕ್ಕೆ ಸಹಾಯಮಾಡುತ್ತಿರುವಂತೆ ದೇವರು ಅನುಗ್ರಹಿಸಲಿ ” ಎಂದು ಹೇಳಿ, ಡೀಮನ್ನನಿಗೆ ವಿಧಿಸಲ್ಪಟ್ಟಿದ್ದ ಮರಣದಂ ಡನೆಯನ್ನು ಹಿಂದಕ್ಕೆ ತೆಗೆದುಕೊಂಡನು ಈ ದೇ ಮನ್ನಿ ನಂತೆಯ, ನಿಧಿ ಯಾಸನಂತೆಯ, ಮನೋವಾಕ್ಕರಗಳಲ್ಲಿಯ ಧರನಿಷ್ಠೆಯುಳ್ಳ ನರಲ್ಲಿ ಮಾತ್ರವೇ ೧೦ಧ ಸ್ನೇಹವು ಕಾಣಲ್ಪಡುವರಲ್ಲದೆ, ಇತರರಲ್ಲಿ ಈ ಸ್ನೇಹವ ಕಾಣಲ್ಪಡುವುದಿಲ್ಲ. ಸತ್ಯವೇ ಅಕೃತ್ರಿಮವಾದ ಸ್ನೇಹಕ್ಕೆ ಮೂಲವಾದುದು, ಸತ್ಯವೇ ಪ್ರಪಂಚದ ಸ್ಥಿತಿಗೂ ಮೂಲ ಕಾರಣವಾದುದು, ಸತ್ಯವನ್ನು ದ್ದರಿಸುವ ಪ್ರಯತ್ನವ, ಜಗದೀಶ್ವರನ ಪ್ರಸನ್ನ ತೆಗೆ ಅತ್ಯಂತ ಸಾಧಕವಾದುದು ಆದ ಬಂದಲೇ 6 ಸತ್ಯ ಮೇವೂದ್ದರಾಮ್ಯಹಮ* ಎಂಬುದು ನಮ್ಮ ಮಹಾ ಪ್ರಭುಗಳ ಬಿರುದಾಗಿರುವುದು, ಈ ಜರುದಿನಿಂದ ನಡೆಯತಕ್ಕವರ ಭಾಗ್ಯಕ್ಕೆ ಸಮಾನವಾದ ಭಾಗ್ಯ ಬೇರೆ ಯಾವುದೂ ಇರುವುದಿಲ್ಲ, ಕ್ಷಣಭಂಗುರ ವಾದ ಇಷ್ಟಾರ್ಧಗಳು ಅನೇಕವಾಗಿರಬಹುದು ; ಅವುಗಳನ್ನ ಪೇಕ್ಷಿಸಿ, ಬೆಂಕಿಯಲ್ಲಿ ಪತಂಗದ ಹುಳುಗಳು ಬಿದ್ದು ನಾಶವಾಗುವಂತೆ, ಅನೇಕರು ನಾಶವಾಗಲೂ ಬಹುದು. ಸತ್ಯವನ್ನವಲಂಬಿಸತಕ್ಕವರಿಗೆ, ಇಂಧ ನಾಶವೂ ಅನರ್ಧಗಳೂ ಎಂದಿಗೂ ಉಂಟಾಗುವುದಿಲ್ಲ ; ಅವರಿಗೆಂದಿಗೂ ಎಲ್ಲೆ ಲ್ಲಿಯ ಶ್ರೇಯಸ್ಸೇ ಲಭಿಸುವುದು. 19