ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೪೩ ಸಂಭ್ರಮಿಸುತ್ತಿದ್ದದನ್ನೆ ಆಲಿಸುತ್ತ ಬಹುಸಮಯ ಅವಳು ನಿತೇ ಇದ್ದಳು. ಚಂದ್ರಸೇಕರಯ್ಯಾರ ಸಂಸಾರವ ಅವರೂರಿಗೆ ತಲುಪ್ಪಿ ಬಂದ ಲಕ್ಕನಿಗೆ, ತನ್ನ ಗಂತೆಮ್ಮನ ಒಂದೊಂದು ಕೇಮೆಯೂ ತಾರೀಪು ತಂದಿತ್ತು... ಸಿವುನಿ ಕಾಲಿಟ್ಟಿದ್ದೆ ಕಾಲಿಟ್ಟದ್ದು ಆ ಗುಡ್ಡಿಗೆ ಒಂದು ವಪ್ಪ ವಾರಣ ಬೆಳಕತ್ತು-ಕಲ್ಯಾಣಿ ಅತ್ತರಾಗಿತ್ತಾಗಿ ಚೆಲಾಡ್ತಿದ್ದ ಮಡಿಕೆಕುಡಿಕೇನಲ್ಲ ಅವು ಎಲ್ಲೆಲ್ಲಿರಬೇಕೊ ಅಲ್ಲಲ್ಲಿ ಜೋಡಿಸಿದ್ದು. ಸಿವುನಿ, ಗುಡ್ಡ ವಳುಗಿನ ನೆಲಕೆಲ್ಲ ಆಗಾಗ ತೊವ್ವ ತಾರಿಸ್ತಿದ್ದಲು. ಪರ್ತಿ ಜಿನ ಬೆಳುವಾದರೆ ತೆಪ್ಪದೆ ಗುಡ್ಲು ಮುಂದಕೆ ರಂಗೋಲಿ ಚಿತ್ತಾರವ ತರಾವರಿ ಬುಡುಸ್ತಿದ್ದು. ಅವೆಲ್ಲಕ್ಕೂ ಮಿಗಿಲಾಗಿ ಅವಳಯ್ಯಂಗೆ ಬೇಸ್ ಅನಿಸುದ್ದು ಅಂದರೆ, ಅವಳು ನಂಜನಗೂಡು ಸೀಮೆಲಿ ಕಲ್ಲುಗಂಬಂದು ಅಡುಗೆ ಮಾಡಾದರಲ್ಲಿ ತೋರಿಸ್ತಿದ್ದ ಕಯ್ಯ ಚಳಕ!... ಅಯ್ಯಂಗೆ ನೆಗಡಿ ಆಯ್ತು ಅನ್ನಾದೆ ತಡ ಸೀಗಡಿ ಸಾರು ತಯಾರು ಮಾಡಿ ಇಕ್ಕುತಿದ್ದಲು. ಏಳೆಂಟು ಜಿನ ಸುರುದಾಡಿ ನೆಗಡಿ ವೊಂಟೋದಾಗ, “ನನ್ನ ಮಗಳು ಸಿವುನಿ ಮಾಡಿ ಇಕ್ಷ ಸೀಗಡಿ ಮೀನಿನ ಸಾರೇ ನನ್ನ ಸೀತ್ವ, ವೊಡದದ್ದು”- ಅಂತ ಸಿಕ್ಕಸಿಕ್ಕದೋರ ಕುಟ್ಟೆ ನಿಂಗಯ್ಯ ಸಾರಿದ್ದ. “ಕಲ್ಯಾಣಿ, ನೀನಿ ಯೇನಿದ್ರೂವೆ ವೊರಗಿನ ಕೇಮ್ಮೆ ಲಾಯಕ್ಕು. ಅಡುಗೇಲಿ ನಿನ್ನ ಮಗಳ ಕರಾಮತ್ತೇ ಕರಾಮತ್ತು” ಅಂದು ಮಗಳ ಮೇಲು ಮಾಡಿ, ಎಡತಿಯ ಆಳೀತಿದ್ದ. ಆಗ ಕಲ್ಯಾಣಿ, - “ಬಾಯದೆ ಅಂತ ಬೋಮಾನದ ಮಾತಾಡಬುಟ್ರೆ ಯೇನ ಬಂದದ್ದು? ನಾನು ನನ್ನ ದುಡ್ಡಲ್ಲಿ ಸೀಗಡಿ ತಂದು ಕ್ವಟ್ಟುದ್ದಕ್ಕೆ ಅಲ್ವ ನಿನ್ನ ಮಗಳು ಸಾರು ಮಾಡಕ್ಕಾಯ್ತು” ಅಂದು ಬಾಯಿ ಮುಚ್ಚುಸ್ತಿದ್ದು. ನಿಂಗಯ್ಯಂಗೆ ಸೋಸಲು ಮೀನು ಮೇಲೋಗರ ಅಂದರೆ ಬಲು ಇಚ್ಚೆ, ಒಂದು ಜಿನ ಮಗಳಿಗೆ, “ಸೋಸಲು ಮೀನು ಉದಕ ಮಾಡಮ್ಮಿ” ಅಂದಾಗ, ಸಿವುನಿ“ಅಯ್ಯೋ-ದುಡ್ಡು?” ಕೇಳಿದಳು. “ಅಯ್ಯಂಗೇಳಿ ತರಸು” ಅಂತ ಇದ್ದಂತೆ, ಕಲ್ಯಾಣಿ “ಊ. ದೊರೆ ಮೊಮ್ಮಗ ಯೋಳುಬುಟ್ಟ... ಯೆಲ್ಲಿಂದ ಉದುರಾದೊ ಕಾಣೆ ದುಡ್ಡು?... ನಾನು ನನ್ನ ಮಗ ಗೇಯೋದು ನಮ್ಮ ಇಟ್ಟು ಸೊಪ್ಪೆ