ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಂಕಂ. 9, ರ್ಕೊತೆಯುಂಟು!ನಾನು ನಿಮಗೆ ಹೊಸದಾಗಿ ಹೇಳಿ ತಿಳಿಸಬೇಕಾ ದುದೇನೂ ಇಲ್ಲ! ಆದರೂ ಈಗ ನಾನು, ಈ ಸ್ಥಾನ ಗೌರವಕ್ಕಾ ಗಿ, ನಿಮಗೆ ಒಂದೆರಡು ಮಾತುಗಳನ್ನು ಹೇಳಬೇಕಾಗುವುದು. ಮುಖ್ಯವಾಗಿ ನೀವೆಲ್ಲರೂ ಗಮನಿಸಬೇಕಾದ ವಿಷಯವೇನೆಂದರೆ;- ಪ್ರಜೆಗಳಿಂದ ನಮಗೆ ಸಲ್ಲತಕ್ಕೆ ರಾಜಾದಾಯಗಳೆಲ್ಲವೂ,ಆ ಪ್ರಜೆ ಗಳ ಕ್ಷೇಮಕ್ಕಾಗಿಯೇ ವಿನಿಯೋಗಿಸಲ್ಪಡಬೇಕೇಹೊರತು,ನಮ್ಮ ಭೋಗಾರವಲ್ಲ! ನಮ್ಮ ಸೇನಾಪರಿಕರಗಳೆಲ್ಲವೂ ಶತ್ರುಟೋ ರಾಯಬಾಧೆಗಳಿಲ್ಲದಹಾಗೆ ಪ್ರಜೆಗಳನ್ನು ಕ್ಷೇಮದಿಂದಿರಿಸುವುದ ಕ್ಕಾಗಿಯೇ ಹೊರತು, ಲೋಭಬುದ್ಧಿಯಿಂದ ರಾಜ್ಯವನ್ನು ಹೆಚ್ಚಿ ಸುವುದಕ್ಕಲ್ಲ : ಈ ವಿಚಾರವನ್ನು ನೀವು ನೆನಪಿನಲ್ಲಿಟ್ಟು, ನಿಮ್ಮ ನಿಮ್ಮ ಅಧಿ ಕಾರಗಳನ್ನು ನಡೆಸುತ್ತ ಬರಬೇಕು, ಮುಖ್ಯವಾಗಿ ನಮ್ಮ ಪ್ರಜೆಗಳಿಗೆ ಯಾವ ವಿಧದ ಹಾನಿಯೂ ಇಲ್ಲದಂತೆ, ಅವರ ನ್ನು ಕ್ಷೇಮದಿಂದ ನಡೆಸುತ್ತಒರುವುದೇ ನಮ್ಮ ಅವಶ್ಯಕಾಠ್ಯವು. ವಸಿಷ್ಟ-ರಾಜೇಂಬ್ರಾ ! ಸಾಕ್ಷಾನ್ನಾರಾಯಣನಿಗೆ ಅಸಾಧಾರಣಚಿಹ್ನ ವಾದ ಸುದರ್ಶನಚಕ್ರವೇ ನಿನಗೆ ಬೆಂಬಲವಾಗಿರುವಾಗ, ನಿನ ದೇಶಕ್ಕಾಗಲಿ, ನಿನ್ನ ಪ್ರಜೆಗಳಿಗಾಗಲಿ, ಹಾನಿಯೆಂದರೇನು ? ಲೋಕದಲ್ಲಿ ನಿನಗಿಂತಲೂ ಪರಮಧನ್ಯರಾರುಂಟು! ರಾಜಂ-ಪೂಜ್ಯರೆ ! ನಿಮ್ಮ ಪ್ರೀತಿವಚನಗಳಿಗಾಗಿ ನಾನು ಕೃತಜ್ಞನಾಗಿ ರುವೆನು. ಆದರೇನು ? ನನಗೆ ಸುವಿಧದಲ್ಲಿಯೂ ನೀವೇ ಮಾ ರ್ಗದರ್ಶಿಗಳಾಗಿರುವುದರಿಂದ, ನನಗೆ ಯಾವ ಅಭ್ಯುದಯವುಂಟಾ ಗಿದ್ದರೂ, ಅದೆಲ್ಲವೂ ನಿಮ್ಮ ಅನುಗ್ರಹದಿಂದಲ್ಲದೆ ಬೇರೆಯಲ್ಲ! ಅಸಾಧಾರಣವಾದ ಭಗವದನುಗ್ರಹಕ್ಕೆ ನಾನು ಪಾತ್ರನೆಂಬುದ ರಲ್ಲಿ ಸಂದೇಹವೇನು? ಏಕೆಂದರೆ:- ಕ೦ll ಘನಮುನಿಗಳಂ ನಿಜದ | ರ್ಶನಮಾತ್ರ ಮನೀಯದಖಿಲಲೋಕೇಶಂ ಮ |