ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾ೦ಕಂ. ಕಂ || ಇವಳೇಂ ಮನ್ಮಥರಾಜನ ನವಮೋಹನಮಂತ್ರವಿದ್ಯೆಯೊ!ಮಾನವರೂ ಪವನಾಂತ ವಿಷ್ಣು ಮಾಯೆಯೊ! ಭುವನತ್ರಯಭಾಗ್ಯಲಕ್ಷ್ಮಿ ಯೋ! ನಾನರಿಯೆಂ। ಇವಳ ರೂಪಲಾವಣ್ಯಗಳನ್ನು ನೋಡಿದರೆ ಸಾಮಾನ್ಯ ಮನುಷ್ಯ ಸ್ತ್ರೀಯಂತೆ ತೋರುವುದಿಲ್ಲ ! ಆಹಾ!ಇವಳ ಅಸಾಧಾರಣಸಂದ ಕ್ಯವು ನನ್ನ ಮನಸ್ಸನ್ನೂ ಮೋಹಪಾಶದಲ್ಲಿ ಕಟ್ಟಿಡುವಂತೆ ತೋ ರುವುದಿಲ್ಲ! ಆದರೇನು ? ಇರಲಿ ! ಕಾಲವಶದಿಂದ ಎಂತಹ ಪಿರಕ್ತರಿಗಾದರೂ ಮನಸ್ಸು ಕರಗುವುದುಂಟು ! ಅಂತಹ ಸ್ಥಿತಿಯಲ್ಲಿಯ ಇಂದ್ರಿಯಚಾಪಲ್ಯಕ್ಕೊಳಗಾಗದಂತೆ ಮನಸ್ಸ ನ್ನು ತಡೆದಿಡುವುದೇ ಜಿತೇಂದ್ರಿಯ ಲಕ್ಷ ಇವಲ್ಲವೆ ? ಇದಕ್ಕಾಗಿ ಧೈಯ್ಯಗೆಡ ಶಾರದು, (ಪ್ರಕಾಶ೦) ರಾಜೀಂವ ! ಈಕೆಯೇ ನಿನ್ನ ಮಗಳೆ ? ರಾಜ ೦-ಪೂಜ್ಯರೆ ! ಇದು ! ಇವಳೇ ನನ್ನ ಮಗಳು. ನಾರದಂ-- ಅವಳ ರೂಪಕ್ಕೆ ಬೆರಗಾಗಿ ಆಶ್ವರಪಡುತ್ತ) ರಾಜಾ! ಇವಳಿ ಗಾಗಿಯೇ ನಿನ್ನ ವರಾನ್ವೇಷಣಪ್ರಯತ್ನ ವಲ್ಲವೆ ? ರಾಜಂ-ಹೌದು ! ಇವಳಿಗಾಗಿಯೇ ! ನಾರದಂ-ರಾಜಾ! ನೀನು ಈ ಕಸ್ಯೆಗೆ ತಕ್ಕ ವರಸಿಲ್ಲವೆಂದು ಚಿಂತಿಸುವುದು ಯುಕ್ತವೇ ! ಇವಳ ರೂಪಲಾವಣ್ಯಸಂಪತ್ತಿಯನ್ನು ನೋಡಿದ ರೆ, ಈ ಭೂಲೋಕದಲ್ಲಿಯಾಗಲಿ, ಕೊನೆಗೆ ದೇವಲೋಕದಲ್ಲಿ ಯಾಗಲಿ, ಇವಳಿಗೆ ಅನೂರೂಪನಾದ ವರನು ಸಿಕ್ಕಲಾರನೆಂದೇ ನನಗೂ ತೋರುವುದು, ಅಷ್ಟೇಕೆ ! ವೃ! ಅನುಪಮದಿವ್ಯಮೂರ್ತಿ! ಶುಭಕೀರ್ತಿ! ಸುರಾಸುರಚಕ್ರವರ್ತಿಯೆಂ। ದೆನೆ ನೆಗಳಾ ಮಹಾಪುರುಷನಲ್ಲದೆ,ಲೋಕದೊಳನ್ಯ ಪೂರುಷರ«| ತನುಜೆಯಿವಳ್ಳಿ ತಕ್ಕ ವರಸಾಮ್ಯಮನೊಂದುವರಿಲ್ಲ! ನಿಶ್ಚಯಂ! ಮನದನುಮಾನವಿಲ್ಲದೆ! ಬಿಡಿನ್ನು ವರಾನಯನಪ್ರಯತ್ನ ಮಂ ||