ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಶ್ರೀಮತೀಪರಿಣಯಂ ಸುವುದಕ್ಕಾರಂಭಿಸಿದೆನು!©! ಈ ವ್ಯಕ್ತಿಯು ಕಣ್ಣಿಗೆ ಬೀಳುತ್ತಿ ರುವವರೆಗೂ, ಮೊಹಾಕುಲವಾದ ನನ್ನ ಮನಸ್ಸನ್ನು ತಡೆಯಲಾ ರೆನು. ಆದುದರಿಂದ ಏನಾದರೂ ವ್ಯಾಜಾಂತರವನ್ನು ಹೇಳಿ, ಸ್ವಲ್ಪ ಹೊತ್ತಿನವರೆಗೆ ಬೇರೆಲ್ಲಿಯಾದರೂ ಹೋಗಿ ಬರುವೆನು.ಹಾ ಗಿಲ್ಲದಿದ್ದರೆ, ಇವರೆಲ್ಲರ ಮುಂದೆ ನನ್ನ ಸ್ಥಿತಿಯು ಕೇವಲಹಾಸ್ಕಾ ಸ್ಪದವಾಗುವುದು, ( ಪ್ರಕಾಶಂ ) ಮಹಾರಾಜಾ ! ಈಗ ನಾರದನು ಹೇಳುತ್ತಿರುವ ಇಂದ್ರ ಸಭಾವೃತ್ತಾಂತವು ನೀ ನು ಅವಶ್ಯವಾಗಿ ಕೇಳಬೇಕಾದುದೇ ! ನಾನೂ ಇಷ್ಟರಲ್ಲಿ ಈ ನಿನ್ನ ಉಸನವನ್ನು ಸುತ್ತಿ ನೋಡಿಬರುವೆನು. ರಾಜಂ-ಪೂಜ್ಯರೆ! ತಡೆಯೇನು?ಯಥೇಷ್ಯವಾಗಿ ಸುತ್ತಿ ನೋಡಬಹುದು. (ಮೃತನು ಹೊರಟುಹೋಗುವನು.) ರಾಜಂ- ಆತುರದೊಡನೆ) ಮುನೀಂದ್ರಾ ! ಆದೇನು? ಹಾಗೆ ತಮ್ಮ ಮನ - ಸ್ಸಿಗೆ ಅಸಮಾಧಾನವುಂಟಾಗುವಂತೆ ಇಂದ್ರಸಭೆಯಲ್ಲಿ ನಡೆದ ಅಕ್ರಮವೇನು ? ನಾರದಂ-ಅದನ್ನೇ ಹೇಳುವೆನು ಕೇಳು! ದೇವೇಂದ್ರನು ನಿನ್ನೆ ರಾತ್ರಿ, ಶಾರ ದೋತ್ಸವವನ್ನಾರಂಭಿಸಿ, ಅದರ ಕಾರನಿJಾಹಕ್ಕಾಗಿ ಮನ್ಮಥ ವನ್ನು ನಿಯಮಿಸಿದ್ದನು. ರಾಜಂ-ಆಯಿತು ! ಆಮೇಲೆ? ನಾರದಂ-ಆ ಉತ್ಸವವೈಭವವನ್ನು ನೋಡುವುದಕ್ಕಾಗಿ, ಇಷ್ಟಮಿತ್ರರೆಲ್ಲ ರನ್ನ ಕರೆಸಿದ್ದನು. ರಾಜಂ-ನ್ಯಾಯವೇ ! ನಾರದಂ-ನಾನೂ ಅದನ್ನು ನೋಡಬೇಕೆಂಬ ಕುತೂಹಲದಿಂದ ಅಲ್ಲಿಗೆ ಹೋದೆನು. ಹೀಗೆ ದೊಡ್ಡ ದೇವಸಭೆಯು ನೆರೆದಿರುವಾಗ, ಇಂದ್ರ ನು ಆ ಮನ್ಮಥನ ಕಾರವಿರಾಹನೈಪುಣ್ಯವನ್ನು ನೋಡಿ ಸಂ ತೋಷಪರವಶನಾಗಿ, ಅವನನ್ನು ಕರೆತಂದು,ತನ್ನ ಅರ್ಧಾಸನದಲ್ಲಿ