೨೧೮೦ ಶ್ರೀಮದ್ಭಾಗವತವು [ಅಧ್ಯಾ, ೬೦. ಲೂ, ವ್ರತಗಳಿಂದಲೂ ನನ್ನನ್ನು ಆರಾಧಿಸುವರೋ, ಅವರೆಲ್ಲರೂ ನನ್ನ ಮಾ ಯೆಯಿಂದ ಮೋಹಿತರೆಂದೇ ತಿಳಿ : ಮೋಕ್ಷಲಕ್ಷ್ಮಿಗೆ ಮುಖ್ಯಾಧಾ ರನಾಗಿರುವ ನನ್ನನ್ನು , ತಪಸ್ಸು ಮೊದಲಾದುವುಗಳಿಂದ ಪ್ರಸನ್ನ ನನ್ನಾಗಿ ಮಾಡಿಕೊಂಡಮೇಲೆಯೂ, ಯಾರು,ನನ್ನಿಂದ ಪಡೆಯಬಹುದಾದ 3 ಉತ್ಯ ಮಪುರುಷಾರ್ಥವನ್ನು ಬಿಟ್ಟು,ಅಲ್ಪಸುಖವನ್ನು ಕೋರುವರೋ, ಅಂಥವರನ್ನು ಮಂದಭಾಗ್ಯರೆಂದು ಹೇಳುವುದರಲ್ಲಿ ಸಂದೇಹವೇಸಿದೆ ! ಲೌಕಿಕಗಳಾದ ಸು ಗಳೆಲ್ಲವೂ ಅತ್ಯಲ್ಪಗಳು! ನರಕದಲ್ಲಿಯೂ ಅಂತವುಗಳನ್ನನುಭವಿಸ ಬಹುದು. ಆದುದರಿಂದ ದಾಂಪತ್ಯ ಸುಖವನ್ನು ನರಕವೆಂದೇ ಹೇಳಬಹು ದು, ಓ ಗೃಹೇಶ್ವರೀ : ಸೀನು ಸಂಸಾರವಿಮೋಚನಕ್ಕೆ ಕಾರಣವಾದ, ಸಿ ಪ್ಯಾಮವಾದ ಅನಿವೃತಿಯನ್ನು ತೋರಿಸಿದೆಯವೆ ? ಇದು ನಿನಗೆ ದೈ ವಾನುಗ್ರಹದಿಂದುಂಟಾದುದೆಂದು ತಿಳಿ ! ಇದು ಪುಣ್ಯ ಪರಿಪಾಕವಿಲ್ಲದ ಅಲ್ಪ ಜನರಿಗೆ ಎಂದೆಂದಿಗೂ ಸಿದ್ದಿಸಲಾರದು : ಕೇವಲ ಇಂದ್ರಿಯತೃಪ್ತಿಪ ರಾಯಣರಾಗಿ, ತಮ್ಮ ಹಾವಭಾವವಿಳಾಸಗಳಿಂದ ಪತಿಯನ್ನು ವಂಚಿಸುವ ಸ್ವಭಾವವುಳ್ಳ ಸಾಮಾನ್ಯಸಿಯರಿಗೆ, ಇದು ಸ್ವಷ್ಟ ದಲ್ಲಿಯೂ ಸಾಧ್ಯವಲ್ಲ ವೆಂಬುದನ್ನು ಹೇಳಬೇಕಾದುದೇನು ? ಓ ಮಾನಿನೀ ! ಮುಖ್ಯವಾಗಿ ಒಂದೇ ಮಾತಿನಲ್ಲಿ ಹೇಳುವನು ಕೇಳು : ಕುಟುಂಬಿಗಳಲ್ಲಿ ನಿನ್ನಂತೆ ಪತಿಪರಾಯಣೆ ಯಾದ ಸ್ತ್ರೀಯನ್ನು ಇದುವರೆಗೆ ನಾನು ಕಂಡುಕೇಳಿದುದಿಲ್ಲ! ಇದಕ್ಕೆ ಬೇರೆ ನಿದರ್ಶನವೇಕೆ ! ನಿನ್ನ ವಿವಾಹಕಾಲದಲ್ಲಿ ಎಷ್ಟೋ ಮಂದಿ ರಾಜಾಧಿರಾಜರು ನಿನ್ನನ್ನು ತಾವಾಗಿ ಮೋಹಿಸಿಬಂದರೂ, ಅವರೆಲ್ಲರನ್ನೂ ಅನಾದರಿಸಿ, ಬ್ರಾ ಹ್ಮಣೋತ್ತಮನ ಮೂಲಕವಾಗಿ ನನಗೆ ರಹಸ್ಯ ಸಂದೇಶವನ್ನು ಹೇಳಿಕಳುಹಿ ಸಿದೆಯಲ್ಲವೆ ? ಅದೂ ಹಾಗಿರಲಿ ! ನಾನು ನಿನ್ನಣ್ಣನನ್ನು ಯುದ್ಧದಲ್ಲಿ ಪರಾ ಭವಿಸಿದೆನು!ಅವನಿಗೆ ವೈರೂಪ್ಯವನ್ನೂ ಉಂಟುಮಾಡಿದೆನು!ಅನಿರುದ್ಧನವಿವಾ ಹಕಾಲದಲ್ಲಿ ನಡೆದ ದ್ಯೋತಸಭೆಯಲ್ಲಿ, ಅವನ ಪ್ರಾಣವನ್ನೂ ನೀಗಿಸಿದೆವು.ಇ ವೆಲ್ಲವನ್ನೂ ನೋಡುತಿದ್ದಾಗಲೂ ನೀನು, ಮನಸ್ಸಿನ ದುಃಖವನ್ನು ಹೊರಕ್ಕೆ ಕಾಣಿಸದೆ, ನನ್ನ ಮನಸ್ಸಿಗೆ ಏನಾದರೂ ಅಸಮಾಧಾನವುಂಟಾಗುವುದೆಂಬ ಭಯದಿಂದ ಸುಮ್ಮನಿದ್ದೆಯಲ್ಲವೆ!ಇದೇ ನಿನಗೆ ನನ್ನಲ್ಲಿರುವ ಪ್ರೇಮದ ಪರಾ
ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೧೦೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.