೨.೪೫ ಅಧ್ಯಾ, ೫೭.] ದಶಮಸ್ಕಂಧವು. ಪ್ಪಿಸಿ ನಮಸ್ಕರಿಸಿದನು. ಆಗ ಕೃಷ್ಣನು ಸತ್ರಾಜಿನಲ್ಲಿ ಪ್ರಸನ್ನನಾಗಿ, ಶಾಸ್ಕೊಕ್ಕವಾಗಿ ಸತ್ಯಭಾಮೆಯನ್ನು ಮದಿವೆಮಾಡಿಕೊಂಡನು. ಓ 'ಪರೀ ದ್ರಾಜಾ ! ರೂಪದಲ್ಲಿಯೂ, ಗುಣದಲ್ಲಿಯೂ, ಔದಾಲ್ಯದಲ್ಲಿಯೂ, ಲೋ ಕೊರೆಯೆನಿಸಿಕೊಂಡ ಆಸತ್ಯಭಾಮೆಯನ್ನು ಇದುವರೆಗೆ ಎಷ್ಟೋ ರಾಜಾ ಧಿರಾಜರೆಲ್ಲರೂ ಪ್ರಾರ್ಥಿಸಿದ್ದರು. ಅವರೊಬ್ಬರನ್ನೂ ಮೋಹಿಸದಿದ್ದ ಸತ್ಯ. ಭಾಮೆಯು, ಸಾಕ್ಷಾದ್ಭಗವಂತನಾದ ಶ್ರೀಕೃಷ್ಣನ ಕೈಸೇರಿದಳು! ಶಾಸ್ಕೋ ಕವಾಗಿ ವಿವಾಹವು ನಡೆದಮೇಲೆ,ಕೃಷ್ಣನು ಸತ್ರಾಜಿತನ್ನು ನೋಡಿ, ಓ, ಸೌಮ್ಯಾ ! ಈ ಸ್ಯಮಂತಕರತ್ನವು ನಿನ್ನಲ್ಲಿಯೇ ಇರಲಿ ! ಇದನ್ನು ಸೂರ ದೇವನು ಭಕ್ತನಾದ ನಿನಗೆ ಅನುಗ್ರಹಿಸಿಕೊಟ್ಟಿರುವನು. ಆದುದರಿಂದ ಇದು ನಿನ್ನಲ್ಲಿರಬೇಕಾದುದೇ ಉಚಿತವು ! ಇದು ನಿನ್ನಲ್ಲಿದ್ದರೂ, ಇದರ ಪ್ರ. ಭಾವದಿಂದ ಕಾಮಡಾಮರಾದಿಬಾಧೆಗಳೆಲ್ಲವೂ ನೀಗುವುದರಿಂದ, ಆ ಫಲಕ್ಕೆ ನಾವೆಲ್ಲರೂ ಭಾಗಿಗಳಾಗುವೆವಲ್ಲವೆ?” ಎಂದು ಆ ರತ್ನ ವನ್ನು ಹಿಂತಿರುಗಿ ಕೊ ಟ್ಟು ಬಿಟ್ಟನು, ಇದು ಐವತ್ತಾರನೆಯ ಅಧ್ಯಾಯವು. ( ಶತಧನ್ಯನೆಂಬವನು ಸತ್ರಾಜಿತನ್ನು ಕೊಂದು, ಅವನ ) ಲ್ಲಿದ್ದ ಸ್ಯಮಂತಕರತ್ನವನ್ನು ಅಪಹರಿಸಿಕೊಂಡು “ ಹೋಗಲು, ಕೃಷ್ಣನು ಶತಧನ್ವನನ್ನು ಕೊ೦ದುದು. ಓ ಪರೀಕ್ಷಿದ್ರಾಜಾ ! ಇಷ್ಟರಲ್ಲಿ ಅತ್ತಲಾಗಿ ಪಾಂಡವರೂ, ಕುಂತಿ ಯೂ 'ಅರಗಿನ ಮನೆಯಲ್ಲಿ ದಗ್ಧರಾದರೆಂಬ ಸುದ್ದಿಯು, ಎಲ್ಲೆಲ್ಲಿಯೂ ಹರಡಿ ಕೊಂಡಿತು, ಕ್ರಮಕ್ರಮವಾಗಿ ಈ ವೃತ್ತಾಂತವು ಕೃಷ್ಣನ ಕಿವಿಗೂ ಬಿದ್ದಿತು. ಸತ್ವಜ್ಞನಾದ ಕೃಷ್ಣನು ನಿಜಸ್ಥಿತಿಯನ್ನು ಬಲ್ಲವ ನಾಗಿದ್ದರೂ, ರಹಸ್ಯವನ್ನು ಹೊರಪಡಿಸದೆ, ಮನುಷ್ಯಲೀಲೆಯನ್ನೇ ನಟಿಸು ತ್ಯ, ತನ್ನ ಬಂಧುಗಳಾದ ಪಾಂಡವರಿಗೂ, ಕುಂತಿಗೂ, ಕುಲೋಚಿತವಾದ ಅಪರಸಂಸ್ಕಾರಗಳನ್ನು ನಡೆಸಬೇಕೆಂದು ಬಲರಾಮನನ್ನೂ ಸಂಗಡಕರೆದು ಕೊಂಡು ಹಸ್ತಿನಾವತಿಗೆ ಬಂದನು, ಅಲ್ಲಿ ಪಾಂಡವರ ಮರಣಕ್ಕಾಗಿ ದುಃಖಿ.
ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.