೨೩೭೪ ಶ್ರೀಮದ್ರಾಮಾಯಣವು (ಸರ್ಗ, ೪೮. ತಹ ಮಹಾಬಲಪರಾಕ್ರಮಿಯಾದ ರಾಮನೂಕೂಡ, ತನ್ನ ತಮ್ಮನಾದ ಲಕ್ಷ್ಮಣನೊಡನೆ ಯುದ್ಧದಲ್ಲಿ ಹತನಾಗಿ ಬಿಳುವುದೆಂದರೇನು? ಲೋ ಕದಲ್ಲಿ ಕಾಲಕ್ಕಿಂತಲೂ ಪ್ರಬಲವಾದುದು ಯಾವುದೊಂದೂ ಇಲ್ಲವು. ದೈವವನ್ನು ಗೆಲ್ಲಬೇಕೆಂದರೆ ಯಾರಿಗೂ ಎಷ್ಟು ಮಾತ್ರವೂ ಸಾಧ್ಯವಲ್ಲ ಹಾ ಕಷ್ಟವೆ' ಶೋಚನೀಯಾವಸ್ಥೆಯನ್ನು ಹೊಂದಿದ ಆ ನನ್ನ ಅತ್ತೆಯನ್ನು ನೆನೆಸಿ ಕೊಂಡಾಗ ನನಗುಂಟಾಗುವ ದು:ಖವು, ರಾಮನನ್ನಾಗಲಿ, ಮಹಾಬಲಾ ಢನಾದ ಲಕ್ಷಣವನ್ನಾಗಲಿ,ನನ್ನ ಸ್ಥಿತಿಯನ್ನೇ ಆಗಲಿ ನನ್ನ ತಾಯಿಯನ್ನೇ ಆಗಲಿ ನೆನೆಸಿಕೊಂಡರೂ ಆಷ್ಟು ವ್ಯಥೆಯನ್ನುಂಟುಮಾಡದು. ಆ ನನ್ನ ಆತ್ಮ ಯಾದ ಕೌಸಲ್ಯಯು, ಈಗಲೂ ಅಹೋರಾತ್ರವೂ ಮನಸ್ಸಿಗೆ ನೆಮ್ಮದಿ ಯಿಲ್ಲದೆ, ಈ ಹದಿನಾಲ್ಕು ವರ್ಷಗಳ ವನವಾಸವ್ರತವನ್ನು ಮುಗಿಸಿ ತನ್ನ ಮುದ್ದು ಮಗನಾದ ರಾಮನು ಸೀತಾಲಕ್ಷಣರೊಡನೆ ಬಂದು,ಯಾವಾಗ ತನ್ನ ಕಣ್ಣುಗಳಿಗೆ ಆತ್ಯಾನಂದವನ್ನು ಬೀರೋವನೋ ಎಂದು ಎಡೆಬಿಡದೆ ಚಿಂತಿಸುತ್ತಿರುವಳಲ್ಲವೆ ? ಇನ್ನು ಆಕೆಯ ಗತಿಯೇನು ?” ಎಂದು ವಿಲಪಿಸಿ ದಳು ಹೀಗೆ ಗೋಳಿಡುತಿದ್ದ ಸೀತೆಯನ್ನು ನೋಡಿ, ತ್ರಿಜಟೆಯೆಂಬ ರಾಕ್ಷಸಿ ಯು ಆಕೆಯನ್ನು ಸಮಾಧಾನಪಡಿಸುತ್ತ, 4 ಅಮ್ಮ ಸೀತೆ " ಸೀನು ದು:ಖಿ ಸಬೇಡ' ಧೈಯ್ಯದಿಂದಿರು' ಈ ನಿನ್ನ ಪತಿಯು ಬದುಕಿರುವನು ಈ ಸಹೋ ದರರಿಬ್ಬರೂ ಬದುಕಿರುವರಂಬುದನ್ನು ಸೂಚಿಸುವಂತೆ ನನಗೆ ಅನುಭವಿಸಿ ದೃಗಳಾದ ಕೆಲವು ಕಾರಣಗಳು ಸ್ಪಷ್ಟವಾಗಿ ಕಾಣಿಸುತ್ತಿರುವುವು, ಅವುಗ ಳನ್ನೂ ಹೇಳುವೆನು ಕೇಳು' ನಿನ್ನ ಪತಿಯು ಹತನಾಗಿದ್ದ ಪಕ್ಷದಲ್ಲಿ, ಈ ಯುದ್ಧ ರಂಗದಲ್ಲಿ ಅವನ ಕಡೆಯ ಯೋಧರ ಮುಖಗಳೆಲ್ಲವೂ ಹೀಗೆ ಕೋಪಾವೇಶ ದಿಂದ ಕೂಡಿದವುಗಳಾಗಿಯೂ, ಸಂತೋಷದಿಂದ ಪ್ರಸನ್ನ ಗಳಾಗಿಯೂ ಇ ರಲಾರವು.ಮತ್ತು ಎಲೆ ಸೀತೆ! ಈಗ ನಾವು ಏರಿಬಂದಿರುವ ಈಪುಷ್ಪಕವಿಮಾ ನವು ದಿವ್ಯವಾದುದರಿಂದ, ಈ ರಾಮಲಕ್ಷ್ಮಣರು ಈಗ ಪ್ರಾಣವನ್ನು ಬಿಟ್ಟೆ ದ ಪಕ್ಷದಲ್ಲಿ ಇದುಪತಿಹೀನೆಯಾದ ನಿನ್ನನ್ನು ವಹಿಸಿಕೊಂಡಿರಲಾರದು!ಯು ದ್ಯದಲ್ಲಿ ಪ್ರಧಾನವೀರನು ಹತನಾದಪ್ಪಕ್ಷದಲ್ಲಿ, ಅವನ ಕಡೆಯ ಸೈನ್ಯಗಳೆ ಲ್ಲವೂ ಉತ್ಸಾಹಭಂಗವನ್ನು ಹೊಂಗಿ, ಮುಂದಿನ ಪ್ರಯತ್ನವನ್ನೂ ಬಿಟ್ಟು, ಜಲಮಧ್ಯದಲ್ಲಿ ನಾವಿಕನಿಲ್ಲದ ದೋಣಿಯಂತೆ, ಯುದ್ಧದಲ್ಲಿ ತಮ್ಮನ್ನು ನಡೆ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.