ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಸ್ತು ಶ್ರೀರಾಮಚಂದ್ರಪರಬ್ರಹ್ಮಣೇ ನಮಃ

))

ಅ ವ ತಾ ರಿ ಕೆ ಆರಣ್ಯಕಾಂಡದಲ್ಲಿ ಶ್ರೀರಾಮನು, ದೀನರಾದ ಋಷಿಗಳಿಗೆ ಸಮಸ್ಯ ರಾಕ್ಷಸರ ವಧವನ್ನು ಮಾಡುವುದಾಗಿ ಅಭಯವನ್ನು ಕೊಟ್ಟು, ಅದರಂತೆ ಖರಾರಾಕ್ಷಸರನ್ನು ಸಂಹರಿಸಿ, ಆ ಮಹರ್ಷಿಗಳನ್ನು ಕಾಪಾಡಿದದರ ಮೂಲಕವಾಗಿ, ದೀನಜನಸಂರಕ್ಷಣವೆಂಬ ಧರ್ಮವನ್ನು ಪ್ರಕಾಶಪಡಿಸಿರು ವನು ಈ ಕಿಕ್ಕಿಂಧಾಕಾಂಡದಲ್ಲಿ ಮಿತ್ರನಾದ ಸುಗ್ರೀವನಿಗೆ, ಅವನ ವೈರಿ ಯಾದ ವಾಲಿಯನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿಕೊಟ್ಟು, ಅದರಂತೆ ವಾಲಿಯನ್ನೂ ಕೊಂದು ಅದರಿಂದ ಮಿತ್ರರಕ್ಷಣವೆಂಬ ಧರ್ಮವನ್ನು ಲೋ ಕಕ್ಕೆ ತೋರ್ಪ್ಪಡಿಸುವನು ಮತ್ತು ಪೂರ್ವಕಾಂಡದಲ್ಲಿ ಮೋಕ್ಷಪ್ರದಾನ ವೆಂಬ ತನ್ನ ಪರತ್ನಚಿಹ್ನ ವನ್ನು ಪ್ರಕಾಶಪಡಿಸಿರುವನು ಈ ಕಾಂಡದಲ್ಲಿ ತ ದನುಗುಣಗಳಾದ ಅಸಂಖ್ಯ ಕಲ್ಯಾಣಗುಣಗಳನ್ನು ಹೊರಪಡಿಸುವನು. ಮುಖ್ಯವಾಗಿ ವಾಸ್ತವಾರ್ಥವನ್ನು ನೋಡುವಾಗ, ದ್ವಯಮಂತ್ರಾರ್ಥಪ್ಪ ತಿಪಾದಕವಾದ ಈ ರಾಮಾಯಣದಲ್ಲಿ, ಬಾಲಕಾಂಡದಿಂದ ಶ್ರೀಮತ್ನ ದೋದೀರಿತವಾದ ಭಗವಂತನ ಶ್ರೀಮತ್ಯವೂ, ಅಯೋಧ್ಯಾಕಾಂಡದಲ್ಲಿ ಸತ್ವಜನವ್ಯಾಮೋಹವಿಷಯತೊಕ್ಕಿಯಿಂದ ನಾರಾಯಣಶಬ್ದಾರ್ಥವೂ,ಆ ರಣ್ಯಕಾಂಡದ ಪಂಚವಟೇವಾಸಪರಂತವೃತ್ತಾಂತದಲ್ಲಿ, ಮಹರ್ಷಿಗಳಿಂದ ಮಾಡಲ್ಪಟ್ಟ ಕೈಂಕರ್ಯವನ್ನು ಹೇಳಿರುವುದರಿಂದಚತುರ್ಥ್ಯಥ್ರವೂ,ಖರಾ