ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೦

ಈ ಪುಟವನ್ನು ಪ್ರಕಟಿಸಲಾಗಿದೆ



2

ಹೇಳುವ ಹಾಗಿಲ್ಲ. ಇದಕ್ಕಾಗಿ ನಾವು ಅವರಿಗೆ ಬಹಳವಾಗಿ ಕೃತಜ್ಞ ರಾಗಿರುವೆವು.
ಜ್ಞಾನಸಂಪಾದನೆಗೆ ಸತ್ಸಂಗವೇ ಮುಖ್ಯ ಸಾಧನವೆಂದು ಕೇಳಿದ್ದೇವೆ. ರಾಮಕೃಷ್ಣ ಪರಮಹಂಸರಂಥ ಮಹಾನುಭಾವರ ಸಂಗವು ಲಭಿಸದಿದ್ದ ಪಕ್ಷದಲ್ಲಿ ಅವರ ಚರಿತಾಮೃತ ಶ್ರವಣ ಉಪ ದೇಶ ಮನನ ಇವುಗಳಿ೦ದ ಬಹುಮಟ್ಟಿಗೆ ಅವರ ಸಂಗಫಲವನ್ನು ಪಡೆಯಬಹುದು. ಆದರೆ ನಮ್ಮಂಥ ಅಲ್ಪಮತಿಗಳಿಂದ ರಚಿತವಾದ ಈ ಸಣ್ಣ ಪುಸ್ತಕವನ್ನು ಓದಿ ಪಾಠಕರು ಪರಮಹಂಸರ ವಿಚಾರಗಳೆಲ್ಲವೂ ತಿಳಿದುವೆಂದೂ ಅವರ ಮಾಹಾತ್ಮವು ಇಷ್ಟೇಯೆಂದೂ ನಿರ್ಧರಿಸಲಾಗದು. ಏಕೆಂದರೆ ಅವರ ವಿಚಾರವಾಗಿ ಸುಮಾರು ೧,೫೦೦ ಪುಟಗಳುಳ್ಳ ಗ್ರಂಥವನ್ನು ಓದಿದ್ದರೂ ಅವರ ಜೀವನದ ಸಂಗತಿಗಳನ್ನೆಲ್ಲ ತಿಳಿದುಕೊಂಡಿದ್ದೇವೆಂಬ ನಂಬುಗೆಯು ನಮಗೇ ಹುಟ್ಟಲೊಲ್ಲದು. ಆದ್ದರಿಂದ "ಶ್ರೀರಾಮಕೃಷ್ಣ ಲೀಲಾಪ್ರಸಂಗ", "ಶ್ರೀರಾಮಕೃಷ್ಣ ಕಥಾಮೃತ" ಮುಂತಾದ ಗ್ರಂಥಗಳನ್ನು ಕನ್ನಡಿಗರು ಓದಬೇಕೆಂದು ಪ್ರಾರ್ಥಿಸುವೆವು. ಈ ಗ್ರಂಥಗಳಲ್ಲಿ ಶ್ರೀ ರಾಮ ಕೃಷ್ಣ ಕಥಾಮೃತದ ಸ್ವಲ್ಪಭಾಗವು ಇಂಗ್ಲೀಷಿಗೆ ತರ್ಜಮೆಯಾಗಿ "The Gospel of Sri Rahakrishna " ಎಂಬ ಹೆಸರಿ ನಿಂದ ಪ್ರಕಟವಾಗಿದೆ. ಶ್ರೀರಾಮಕೃಷ್ಣ ಲೀಲಾಪ್ರಸಂಗವು ಇನ್ನೂ ಇಂಗ್ಲೀಷಿಗೆ ತರ್ಜಮೆಯಾಗಿಲ್ಲ. ಸದ್ಯಕ್ಕೆ ಆಗುವ ಸಂಭವವೂ ಇಲ್ಲ. ಆದರೆ ನಾವು ಅದನ್ನೇಕೆ ಕಾದುಕೊಂಡಿರಬೇಕು ? “ ಸುಲಿದ ಬಾಳೆಯ ಹಣ್ಣಿನಂದದಿ ......” ಇರುವ ನಮ್ಮ ಕನ್ನಡನುಡಿ ಯಲ್ಲಿಯೇ ಅವನ್ನು ಏಕೆ ಓದಬಾರದು ? ಭಕ್ತಶಿರೋಮಣಿಗಳ ಉದಾರಾಶ್ರಯವು ದೊರೆತರೆ ಈ ಗ್ರಂಥಗಳನ್ನೂ ವಿವೇಕಾನಂದ ಸ್ವಾಮಿಗಳು ಶಿಷ್ಯರೊಡನೆ ಮಾಡಿದ ಸಂಭಾಷಣೆಗಳನ್ನೂ, ಧರ್ಮ ವೀರರಾದ ಆಚಾರ್ಯ ಪುರುಷರ ಚರಿತ್ರೆಗಳನ್ನೂ ಧಾರಾವಾಹಕವಾಗಿ ಮಾಸಪತ್ರಿಕೆಯ ರೂಪದಲ್ಲಿ ಕನ್ನಡಿಸಿ ಸಮರ್ಪಿಸಬೇಕೆಂಬ ಉದ್ದೇಶ