ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ೦೪ ಶ್ರೀ ರಾಮಕೃಷ್ಣ ಪರಮಹಂಸರ ಎಲ್ಲೆಲ್ಲಿಗೆ ಎತ್ತಿಕೊಂಡು ಹೋದರೆ ಅಲ್ಲಲ್ಲಿಗೆ ಹೊರಟುಹೋಗುತ್ತದೆ. ಅದರ ಹಾಗೆ, ಅವನಮೇಲೆ ಭಾರಹಾಕಿದ್ದು ಬಿಡಬೇಕು. ಚೈತನ್ಯ ವಾಯುವು ಹ್ಯಾಗೆ ಹ್ಯಾಗೆ ಮನಸ್ಸನ್ನು ತಿರುಗಿಸುತ್ತೋ ಹಾಗೆ ಹಾಗೆ ತಿರುಗಬೇಕು-ಇಷ್ಟೆ ! ಇನ್ನೇನು ?” ಎಂದರು. ಹೀಗೆ ಹೆಂಗಸರು, ಗಂಡಸರು, ಯುವಕರು, ಯುವತಿಯರು, ವೈದ್ಯರು, ವಿಧವೆಯರು, ಸಧವೆಯರು ಯಾರು ಬಂದರೂ ಅವರವರಿಗೆ ತಕ್ಕ ಮಾರ್ಗವನ್ನು ಅವರವರಿಗೆ ತಕ್ಕ ರೀತಿಯಲ್ಲಿ ಬೋಧಿಸುತ್ತಿದ್ದರು. ಮೇಲೆ ಕೊಟ್ಟ ರುವ ಕೆಲವು ಉದಾಹರಣೆಗಳಿಂದ ಒಬ್ಬರಿಗೆ ಹೇಳಿದ ಮಾರ್ಗವು ಮಿಕ್ಕವರಿಗೆ ಎಂದಿಗೂ ಸರಿಹೋಗಲಾರದೆಂದು ಪಾಠಕರೇ ತಿಳಿದು ಕೊಳ್ಳಬಹುದು. ಆದರೆ ಕೆಲವು ಅಸಹಕರಗಳಾದ ಕೇಶಕರಗಳಾದ ತಾಂತ್ರಿಕ, ಕಾಪಾಲಿಕ ಮುಂತಾದ ಮಾರ್ಗಗಳನ್ನು ಮಾತ್ರ ಯಾರಿಗೂ ಅನುಸರಿಸುವ ಹಾಗೆ ಹೇಳುತ್ತಿರಲಿಲ್ಲ. ಅವೆಲ್ಲ ನಿರುಪಯೋಗ ವೆಂದಾಗಲಿ ಸುಳ್ಳೆ೦ದಾಗಲಿ ಅವರ ಅಭಿಪ್ರಾಯವಲ್ಲ. ಆ ವಿಚಾರ ವಾಗಿ “ ಎಲೋ ದ್ವೇಷಬುದ್ದಿ ಯಾಕೋ ? ಅದೂ (ಕಾಪಾಲಿಕ ಅಥವಾ ತಾಂತ್ರಿಕಮಾರ್ಗ) ಒಂದುಮಾರ್ಗ. ಆದರೆ ಕೊಳಕು ಮಾರ್ಗ. ಒಂದು ಮನೆಯೊಳಗೆ ಹೋಗುವುದಕ್ಕೆ ಎಷ್ಟೋ ಬಾಗಿಲು ಗಳಿವೆ. ದೊಡ್ಡ ಬೀದಿಯ ಬಾಗಿಲಿದೆ, ಕಿಟಕಿಯ ಬಾಗಿಲಿದೆ. ಗುಡಿಸುವವನು ಬರುವುದಕ್ಕೆ ಹಿತ್ತಿಲುಕಡೆ ಒಂದು ಬಾಗಿಲೂ ಇದೆ. ಎಲ್ಲವನ್ನೂ ಬಿಟ್ಟು ಈ ಹಿತ್ತಿಲಿನ ಕೊಳಕು ಬಾಗಿಲಿಂದ ಏಕೆ ಬರಬೇಕು ? " ಎಂದು ಹೇಳುತ್ತಿದ್ದರು. ಇದಕ್ಕೆ ಕಾರಣವೇ ನೆಂದರೆ ಅವರು ನಮ್ಮಂತೆ ಸ್ಫೂಲವಾದ ದೇಹವನ್ನು ನೋಡದೆ ಪ್ರತಿಯೊಬ್ಬರ ಮನಸ್ಸನ್ನೂ ಹೃದಯವನ್ನೂ ನೋಡಬಲ್ಲವರಾಗಿ ದರು. ರೋಗಿಯ ಸ್ಥಿತಿಯನ್ನು ತಿಳಿದುಕೊಂಡ ವೈದ್ಯನಂತೆ ಅವ ರವರ ಮನಸ್ಸು, ಸ್ವಭಾವ, ಸಂಸ್ಕಾರ, ಮುಂತಾದುವುಗಳಿಗೆ ಸರಿ ಯಾದ ಮಾರ್ಗವನ್ನು ವಿಧಿಸಿ ಅವಶ್ಯವಿದ್ದರೆ ಅವುಗಳನ್ನು ಹೇಗೆ ಬೇಕೋ ಹಾಗೆ ತಿರುಗಿಸುತ್ತಿದರು !