ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೪೫

ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

೨೯

ಹತ್ತಿರವಿದ್ದ ವಿಶಾಲಾಕ್ಷಿಯಗುಡಿಗೆ ಕೆಲವರು ಹೆಂಗಸರು ಹೋಗು ತ್ತರಲು ಗದಾಧರನೂ ಹೊರಟನು. ದಾರಿಯಲ್ಲಿ ಅವರು ಹೇಳುತ್ತಿದ್ದ ದೇವಿಯಮೇಲಣ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ಅವನ ಅಂಗಾಂಗಗಳೆಲ್ಲವೂ ನಿಶ್ಚಲವಾದುವು. ಕಣ್ಣಗಳಲ್ಲಿ ದಳದಳನೆ ನೀರುಸುರಿಯುವುದಕ್ಕೆ ಆರಂಭವಾಯಿತು. ಜೊತೆಯಲ್ಲಿದ್ದವರಿಗೆ ಗಾಬರಿಯಾದರೂ ಅವನುಮಾತ್ರ " ದೇವಿಯಧ್ಯಾನ ಮಾಡುತ್ತ ಮಾಡುತ್ತ ಅವಳಾಪದ ಪದ್ಮಳಲ್ಲಿ ಮನಸ್ಸು ಅಯವಾಗಿಹಾಗಾಯಿತು " ಎಂದು ಹೇಳಿದನು.

ಗದಾಧರನಿಗೆ ಆಗಲೇ ಒಂಬತ್ತು ವರ್ಷ ತುಂಬಿಹೋದ

ದ್ದನ್ನು ನೋಡಿ ರಾಮಕುಮಾರನು ಅವನಿಗೆ ಉಪನಯನ ಮಾಡಬೇಕೆಂದು ನಿಶ್ಚಯಿಸಿ ಅದಕ್ಕೆ ಬೇಕಾದ ಏರ್ಪಾಡು ಮಾಡುತ್ತಿದ್ದನು. ಇವರ ಮನೆಯಹತ್ತಿರ ಧನಿ ಎಂಬ ಹೆಂಗಸು ಇದ್ದಳೆಂದು ಹಿಂದೆಯೇ ಹೇಳಿದ್ದೇವೆ. ಆಕೆಯುಕಮ್ಮಾರ ಜಾತಿಯವಳು. ಆದರೆ ಗದಾಧರನು ಹುಟ್ಟಿದಂದಿನಿಂದ ಅವನನ್ನು ಎತ್ತಿ ಆಡಿಸಿ ಅವನಿಗೆ ಬಹು ಬೇಕಾದವಳಾಗಿದ್ದಳು, ಒಂದುದಿವಸ ತಾನು ಗದಾಧರನ ಉಪನಯನ ಕಾಲದಲ್ಲಿ ಅವನಿಗೆ ಭಿಕ್ಷಾ ಮಾತೆಯಾಗಿ ತಾನು ಮೊದಲು ಭಿಕ್ಷವನ್ನು ಹಾಕಬೇಕೆಂದು ಕೇಳಿಕೊಂಡಿದ್ದಳು. ಗದಾಧರನು ಅವಳ ಅಕೃತ್ರಿಮವಾದ ವಿಶ್ವಾಸಕ್ಕೆಮೆಚ್ಚಿ ಒಪ್ಪಿಕೊಂಡಿದ್ದನು. ಧನಿಯೂ ಅವನ ಮಾತಿನಲ್ಲಿ ನಂಬುಗೆಯಿಟ್ಟು, ಕಾಸಿಗೆಕಾಸು ಗಂಟುಹಾಕಿ ಈ ಸಮಯವನ್ನೇ ಎದುರುನೋಡುತ್ತಿದ್ದಳು, ಉಪನಯನ ನಿಶ್ಚಯವಾದದ್ದನ್ನು ನೋಡಿ ಗದಾಧರನೂ ರಾಮಕುಮಾರನೊಡನೆ ಈ ಪ್ರಸ್ತಾಪವನ್ನೆತ್ತಿದನು. ಇದು ವೈದಿಕಾಚಾರಕ್ಕೂ ಸತ್ಸಂಪ್ರದಾಯಕ್ಕೂ ವಿರೋಧವಾಗಿದ್ದದ್ದರಿಂದ ರಾಮಕುಮಾರನು ಒಪ್ಪಲಿಲ್ಲ. ಗದಾಧರನು ಬಿಡಲಿಲ್ಲ. ಅವನು “ ನಾನು ಮಿಥ್ಯಾವಾದಿಯಾಗುವೆನಲ್ಲವೆ? ಸುಳ್ಳು ಹೇಳುವವನು ಉಪನಯನ ಮಾಡಿಕೊಳ್ಳುವುದಕ್ಕೆ ಎಂದಿಗೂ ಯೋಗ್ಯ