ಈ ಪುಟವನ್ನು ಪ್ರಕಟಿಸಲಾಗಿದೆ

೮೪

ಶ್ರೀ ರಾಮಕೃಷ್ಣ ಪರಮಹಂಸರ

ವಿಧವಾದ ವ್ಯಥೆಯನ್ನು ಸಹಿಸಿಕೊಂಡಿದ್ದು, ಶಿಶುವು ಎದ್ದು ಬರುವುದನ್ನೇ ನಿರೀಕ್ಷಿಸಿಕೊಂಡಿರುತ್ತಾ, ಎದ್ದುಬಂದ ಕೂಡಲೆ ಆನಂದದಿಂದ ಆಲಿಂಗಿಸಿಕೊಂಡು ಅದಕ್ಕೆ ಸ್ತನವನ್ನು ಊಡಿ ಸುಖಿಯ ಸ್ವಪ್ನ ಚಿತ್ರ ಆಗುವ ತಾಯಿಯಂತೆ ಈ ಗುರುಕುಸುಮವು ಶಿಷ್ಟಭೃಂಗಗಳು ತಡಮಾಡಿದ್ದಕ್ಕಾಗಿ ಒದ್ದಾಡುತ್ತಿದ್ದ ಬಂದಕೂಡಲೆ ಲೇಖರಿಸಿಕೊಂಡಿದ್ದ ಅಮೃತವನ್ನು ಪಾನಮಾಡಿಸಿ ಕೃತಕೃತ್ಯ ಬುದ್ದಿಯನ್ನು ಪಡೆಯಿತು. ಮಧುಪಗಳೂ ಅದೇ ಬುದ್ಧಿಯಿಂದ ತಾವು ಪಡೆದುಕೊಂಡ ಅಮೃತವನ್ನು ಜೀವರಾಶಿಗಳ ಉಪಯೋಗಕ್ಕಾಗಿ ನಾನಾ ದಿಕ್ಕುಗಳಿಗೂ ತೆಗೆದುಕೊಂಡು ಹೋದುವು. ಎಂಥ ಪುಷ್ಪವೋ ಅಂಥ ಮಕರಂದ! ಎಂಥ ಮಕರಂದವೋ ಅಂಥ ದುಂಬಿಗಳು !!

ಶ್ರೀ ವಿವೇಕಾನಂದ ಸ್ವಾಮಿಗಳು ಪರಮಹಂಸರನ್ನು ಮೊದಲು ಸಾರಿ ನೋಡಿದು ಒಂದಪೂರ್ವದ ಘಟನೆ. ಅವರ ವರ್ಣನೆ ಯನ್ನು ಪಾಠಕರು ಅನ್ಯತ್ರ ನೋಡಬಹುದು. ಸ್ವಲ್ಪ ಹೆಚ್ಚು ಕಡಿಮೆ ಅವರು ಬಂದ ಕಾಲದಲ್ಲಿಯೇ ಪ್ರಮುಖರಾದ ಇತರ ಶಿಷ್ಯರೆಲ್ಲರೂ ಬಂದು ಸೇರಿದರು. ಅಲ್ಲಿಂದ ಮುಂದಕ್ಕೆ ಪರಮಹಂಸರ ಗುರುಭಾವವೂ ಜನಗಳಲ್ಲಿ ವಿಶೇಷವಾಗಿ ಪ್ರಕಟವಾಯಿತು. ಆದರೆ ಅವರ ಗುರುಭಾವವು ಆಗಲೇ ಆರಂಭವಾಯಿತೆಂದು ತಿಳಿಯಬಾರದು. ಏಕೆಂದರೆ ನಾಧನಕಾಲ ಮುಗಿದ ಮೇಲೆ ಅದರ ಪೂರ್ಣ ವಿಕಾಸವಾದರೂ, ಸರಮಹಂಸರ ಬಾಲ್ಯದಿಂದಲೂ ಆ ಗುರುಭಾವವು ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇತ್ತು. ಇನ್ನೂ ಚಿಕ್ಕವಯಸ್ಸಿನಲ್ಲಿಯೇ ಲಾಹಾಬಾಬುವಿನ ಮನೆಯಲ್ಲಿ ನಡೆದ ಸಂಗತಿಯೂ ಯೌವನಕಾಲದಲ್ಲಿ ರಾಣಿರಾಣಿಗೆ ಆದ ಶಿಕ್ಷೆಯೂ [೧] ಪಾಠಕರ ನೆನಪಿನಲ್ಲಿರಬಹುದು. ಅಲ್ಲಿಂದೀಚೆಗೆ, ಕಲ್ಕತ್ತೆಗೆ ಬಂದ ಮೇಲೆ, ವಿವೇಕಾನಂದ ಸ್ವಾಮಿಗಳು ಬರುವುದಕ್ಕೆ ಬಹಳ ಮುಂಚೆಯೇ, ಪರಮಹಂಸರ


  1. ೩೦ ಮತ್ತು ೫೪ ನೇ ಪುಟಗಳನ್ನು ನೋಡಿ