ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರ

೧೭

ಜನರ ಧರ್ಮಗ್ರಂಥಗಳಲ್ಲಿಯೂ ಹೇಳಿದೆ ಭಗರ್ವಾ ಶ್ರೀರಾಮ ಚಂದ್ರ, ಶ್ರೀಕೃಷ್ಣ, ಬುದ್ಧ, ಶಂಕರಾಚಾರ, ಏಸುಕ್ರಿಸ್ತ, ಚೈತನ್ಯ ಮುಂತಾದ ಅವತಾರಪುರುಷರ ತಾಯಿತಂದೆಗಳ ಉದಾಹರಣೆಯನ್ನು ತೆಗೆದುಕೊಂಡು ಇದರತತ್ವವನ್ನು ವಿಚಾರ ಮಾಡಬಹುದು. ಯಜ್ಞ ಪುರುಷನು ತಂದುಕೊಟ್ಟ ಪಾಯಸವನ್ನು ಭೋಜನವಾಡಿ ಕೌಸಲ್ಯೆ ಮೊದಲಾದ ದಶರಥನ ಹೆಂಡಿರು ಗರ್ಭಧಾರಣ ಮಾಡಿದಮೇಲೆ ಅವರಿಗಾದ ನಾನಾವಿಧವಾದ ದಿವ್ಯ ಅನುಭನವು ರಾಮಾಯಣದಲ್ಲಿ ವಿಸ್ತಾರವಾಗಿ ಲಿಖಿತವಾಗಿದೆ. ಶ್ರೀ ಕೃಷ್ಣನು ಗರ್ಭದಲ್ಲಿದ್ದಾಗ ಅವನ ತಾಯಿತಂದೆಗಳಿಗೆ ಜಗದೀ ಊರನು ದರ್ಶನಕೊಟ್ಟನೆಂದೂ ಹುಟ್ಟಿದಮೇಲೆ ಪ್ರತಿನಿತ್ಯವೂ ಯಾವುದಾದರೂ ಒಂದು ಅದ್ಭುತವು ನಡೆಯುತ್ತಿತ್ತೆಂದೂ ಭಾಗ ವತದಲ್ಲಿ ಹೇಳಿದೆ. ಬುದ್ಧ ದೇವನು ಶ್ರೀಮತಿಮಾಯಾದೇವಿಯ ಗರ್ಭವನ್ನು ಪ್ರವೇಶಮಾಡಿದ ಕಾಲದಲ್ಲಿಯೂ ಆಕೆಗೆ ಒಬ್ಬ ಮಹಾಪುರುಷನು ಜೋತಿರ್ಮಯವಾದ ಒಂದು ಬಿಳಿಯ ಆನೆಯ ರೂಪವನ್ನು ಧರಿಸಿ ಉದರವನ್ನು ಪ್ರವೇಶಮಾಡಿದಂತೆಯೂ ಆಮೇಲೆ ಇಂದ್ರಾದಿದೇವತೆಗಳು ಬಂದು ಆಕೆಗೆ ನಮಸ್ಕಾರಮಾಡಿದಂತೆಯೂ ಹೇಳಿದೆ. ಏಸುವಿನ ತಾಯಿಯಾದ ಶ್ರೀಮತಿ ಮೇರಿಗೂ ಜೋಸೆಫ್ ನೊಡನೆ ಸಂಗಮಾಡುವುದಕ್ಕೆ ಮುಂಚೆಯೇ ಗರ್ಭವಾದಂತೆಯ ಒಂದು ಅಪೂರ್ವವಾದ ದಿವಾನುಭವವಾದಂತೆಯೂ ಹೇಳಿದೆ. ಶ೦ಕರಾಚಾರರ ತಾಯಿಯೂ ಕೂಡ ದೇವಾದಿ ದೇವನಾದ ಮಹಾದೇವನ ದಿವ್ಯ ದರ್ಶನದಿಂದಲೂ ವರಮಹಿಮೆ ಯಿಂದಲೂ ಗರ್ಭೋತ್ಪತ್ತಿಯನ್ನು ಅನುಭವಮಾಡಿದಂತೆ ಬರೆಯಲ್ಪಟ್ಟಿದೆ. ಚೈತನ್ಯದೇವನ ತಾಯಿಯಾದ ಶಚೀದೇವಿಗೂ ಈ ವಿಧವಾದ ದಿವ್ಯಾನುಭವವಾದ ವಿಷಯವೂ ಶ್ರೀಚೈತನ್ಯ ಚರಿತಾಮೃತ ಮುಂತಾದ ಗ್ರಂಥಗಳಲ್ಲಿ ಹೇಳಿದೆ.

ಹಿಂದೂ, ಬೌದ್ಧ, ಕ್ರೈಸ್ತ ಮುಂತಾದ ಎಲ್ಲಾ ಧರ್ಮ ಗ್ರಂಥ