ಈ ಪುಟವನ್ನು ಪ್ರಕಟಿಸಲಾಗಿದೆ

೪೨

ಶ್ರೀ ರಾಮಕೃಷ್ಣ ಪರಮಹಂಸರ

ಒಂದುದಿನ ಪರಮಹಂಸರೂ ಹೃದಯನೂ[೧] ದೇವಸ್ಥಾನದ ಹತ್ತಿರ ತಿರುಗಾಡುತ್ತಿದರು. ಮಧುರಾನಾಥನು ದೇವರದರ್ಶನ ಮಾಡಿಕೊಂಡು ಬರುತ್ತ ಪರಮಹಂಸರನ್ನು ನೋಡಿ, ಅವರನ್ನು ಕರೆದುಕೊಂಡು ಬರುವಹಾಗೆ ತನ್ನ ಸೇವಕನೊಬ್ಬನನ್ನು ಕಳುಹಿಸಿದನು. ಮಧುರನು ಕಣ್ಣಿಗೆ ಬಿದ್ದ ಒಡನೆಯೇ ಅವರು ಆ ಜಾಗವನ್ನೇಬಿಟ್ಟು ಹೊರಟು ಹೋಗುತ್ತಿದ್ದರು. ಅಷ್ಟರಲ್ಲಿಯೇ ಮಧುರಾ ನಾಥನ ಸೇವಕನು ಬಂದು " ಯಜಮಾನರು ತಮ್ಮನ್ನು ಕರೆಯುತ್ತಾರೆ ” ಎಂದು ಹೇಳಿದನು. ಪರಮಹಂಸರು ಹೋಗಲು ಹಿಂಜರಿಯುತ್ತ ನಿಂತುಬಿಟ್ಟಿದ್ದನ್ನು ಕಂಡು,

ಹೃದಯ:—— ಮಾವಾ, ಯಾಕೆ ಹೀಗೆ ಹಿಂದು ಮುಂದು ನೋಡುತ್ತೀ?
ಪರಮ:—— ಹೋಯಿತು ಅ೦ದರೆ ಇಲ್ಲೇ ಇರು ಅಂತ ಹೇಳುತ್ತಾನೆ. ಚಾಕರಿಗೆ ಸೇರಿಕೊ ಅಂತಾನೆ.
ಹೃದಯ:——ಅದರಿಂದ ದೋಷವೇನು? ಇಂಥ ಸ್ಥಳದಲ್ಲಿಮಹದಾಶ್ರಯದಲ್ಲಿ ನೌಕರಿಗೆ ಸೇರುವುದು ಒಳ್ಳೆದೇ ಹೊರತುಕೆಟ್ಟದ್ದೇನೂ ಅಲ್ಲ. ಇದಕ್ಕೇಕೆ ಹಿಂದು ಮುಂದು ನೋಡಬೇಕು ?
ಪರಮ:——ಇಲ್ಲಿ ಸುಮ್ಮನೆ ಚಾಕರಿಯಿಂದ ಕಟ್ಟುಬಿದ್ದಿರುವುದಕ್ಕೆ ನನಗೆ ಮನಸ್ಸಿಲ್ಲ. ಪೂಜೇಕೆಲಸಕ್ಕೆ ಒಪ್ಪಿಕೊಂಡರೆಆಭರಣಗಳ ಜವಾಬ್ದಾರಿ ಹೊತ್ತುಕೋಬೇಕು, ಅದು ಮಹಾ ಹಂಗಿನ ಕೆಲಸ, ಅದು ನನ್ನಿಂದ ಸಾಧ್ಯವಲ್ಲ. ಆ ಭಾರ ನೀನು ಹೊತ್ತುಕೊಳ್ಳುವಹಾಗಿದ್ದರೆ ನಾನು ಪೂಜೆ ಮಾಡುವುದಕ್ಕೆ ಅಡ್ಡಿಯಿಲ್ಲ.

ಹೃದಯನು ಚಾಕರಿಗಾಗಿಯೇ ಬಂದಿದ್ದರಿಂದ ಅದಕ್ಕೆ


  1. ಹೃದಯ ರಾಮಮುಖ್ಯೋಪಾಧ್ಯಾಯ, ಪರಮಹ೦ಸ ರ ಸೋದ ರತ್ತೆಯ ಮಗಳ ಮಗ; ಏನಾದರೂ ಒಂದು ನೌಕರಿಯನ್ನು ಸಂಪಾದಿಸ ಬೇಕೆಂದು ದಕ್ಷಿಣೇಶ್ವರಕ್ಕೆ ಬಂದಿದ್ದನು.