ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೭೫

ಅವರ ಆದರ್ಶಸ್ವರೂಪವಾದ ಸಾಂಸಾರಿಕ ಜೀವನ ಮುಂತಾದ ವಿಚಾರಗಳು ಕೇವಲ ಉಪಯುಕ್ತವಾಗಿದ್ದರೂ ಗ್ರಂಥವಿಸ್ತಾರ ಭಯದಿಂದ ಅವನ್ನು ಇಲ್ಲಿ ಬರೆಯಲು ಹಿಂತೆಗೆಯುವೆವು. “ ಶ್ರೀ ಶ್ರೀರಾಮಕೃಷ್ಣ ಲೀಲಾಪ್ರಸಂಗ” ವನ್ನು ಓದಿ ಪಾಠಕರು ಅವೆಲ್ಲವನ್ನೂ ತಿಳಿದುಕೊಳ್ಳಬಹುದು.




ಶ್ರೇಷ್ಠ ಬಹುಳ ಅಮಾವಾಸ್ಯೆ. ಆ ದಿನ ಜಗದಂಬೆಯ ಪೂಜೆಗಾಗಿ ಬೇಕಾದ ಸಾಮಗ್ರಿಗಳೆಲ್ಲ ಸಿದ್ಧವಾಗಬೇಕಾದರೆ ರಾತ್ರಿ ಒಂಬತ್ತು ಗಂಟೆಯಾಯಿತು. ಪರಮಹಂಸರು ಪೂಜೆಮಾಡುವುದಕ್ಕೆ ಮೊದಲು ಶಾರದಾದೇವಿಗೆ ಹೇಳಿ ಕಳುಹಿಸಿದರು. ಆಕೆಯು ಒಂದ ನಂತರ ಪೂಜೆಗೆ ಆರಂಭವಾಗಿ ಕಲಶಾರ್ಚನೆ ಶ೦ಖಾರ್ಚನೆಗಳು ಮುಗಿದುವು. ಆಗ ಪರಮಹಂಸರು ಶಾರದಾದೇವಿಯನ್ನು ಪೂಜಾಸನದ ಮೇಲೆ ಹೋಗಿ ಕುಳಿತುಕೊಳ್ಳುವಂತೆ ಹೇಳಲು ಆಕೆಯ ಭಾವಾವಿಷ್ಟಳಾಗಿ ತಾನು ಏನು ಮಾಡುತ್ತೆನೆಂಬುದೇ ತಿಳಿಯದೆ ಹೋಗಿ ಕುಳಿತುಕೊಂಡಳು. ಪರಮಹಂಸರು ಯಥಾವಿಧಿಯಾಗಿ ಆಕೆಗೆ ಷೋಡಶೋಪಚಾರ ಪೂಜೆಯನ್ನು ಮಾಡಿ ಮಂತ್ರವನ್ನು ಉಚ್ಚರಿಸುತ್ತ ಉಚ್ಚರಿಸುತ್ತ ಸಮಾಧಿಮಗ್ನರಾದರು. ಪತ್ನಿಯನ್ನು ದೇವಭಾವದಿಂದ ಪೂಜೆ ಮಾಡಿದ ಪರಮಹಂಸರ ಮಹತ್ವವನ್ನು ಪಾಮರರಾದ ನಾವು ಗ್ರಹಿಸುವುದು ಹೇಗೆ?

ಸ್ವಲ್ಪ ಹೊತ್ತಾದಮೇಲೆ ಬಾಹ್ಯ ಜ್ಞಾನದ ಚಿಹ್ನೆಗಳು ಕಾಣಿಸಲಾರಂಭಿಸಿದುವು. ಎಚ್ಚರವಾದಮೇಲೆ ತಮ್ಮ ಸಾಧನಗಳ ಫಲವನ್ನೂ, ಜಪಮಾಲೆ ಮುಂತಾದ ಸಮಸ್ತ ಸಾಧನ ಸಾಮಗ್ರಿಗಳನ್ನೂ