ಈ ಪುಟವನ್ನು ಪ್ರಕಟಿಸಲಾಗಿದೆ

ಅಲೆ : ಏಳು

ಬೋಧಸುಧೆ

ರೂಪರೇಷೆ :
ಅರಿತು ಶರಣರಾದ ಬಸವಣ್ಣನವರು ಮರವಿನಲ್ಲಿ ಮಲಗಿದ ಮರೆತ ಮಾನವರನ್ನು ಎಚ್ಚರಿಸಿದರು. ಅಯ್ಯಾ, ಸಂಸಾರವು ಗಾಳಿಯ ಸೊಡರು !
ಅದನ್ನು ಶಾಶ್ವತವೆಂದು ನಂಬಿ ಕೆಡಬೇಡ, ಭಗವಂತನನ್ನು ಭಜಿಸು' ಎಂದು ಬೋಧಿಸಿದರು. ಭಗವಂತನನ್ನು ಪಡೆಯಲು ಅವರು ನೀತಿ-ಭಕ್ತಿಗಳ ಸಾಧನವನ್ನು ಅರುಹಿದರು. ಅದನ್ನು ಬಲ್ಲ ಸದ್ಗುರುಗಳಿಂದ ಅರಿತು ಆಚರಿಸಲು ತಿಳಿಸಿದರು. ನೀತಿಯು ಭಕ್ತಿಯ ನೆಲ. ಭಕ್ತಿಯು ನೀತಿಯ ಫಲ. ಸತ್ಯ, ಪ್ರೇಮ, ಸಂಯಮಗಳು ನೀತಿಯ ಪ್ರಧಾನ ಅಂಗಗಳಿರುವಂತೆ ತ್ರಿವಿಧ ದಾಸೋಹಗಳು ಬಸವಣ್ಣನವರ ಭಕ್ತಿಯ ಪ್ರಧಾನ ಅಂಗಗಳು. ಅದನ್ನು ಚೆನ್ನಾಗಿ ಮಾಡಲೇಬೇಕು. ಅದನ್ನು ಭಾವಪೂರ್ಣವಾಗಿ ತನು ಉಕ್ಕಿ ಮನ ಉಕ್ಕಿ ಮಾಡಬೇಕು. ಮಾಡಿದೆನೆಂಬುದು ಮನದಲ್ಲಿ ಮೂಡಕೂಡದು. ಅಂಥ ಅನನ್ಯ ಜಪಧ್ಯಾನಗಳಿಂದ ಪರಮಾತ್ಮನ ಅನುಭಾವ- ಆನಂದಗಳನ್ನು ಪಡೆದು, ಶರಣರ ಆದರ್ಶ ಜೀವನವನ್ನು ಬಾಳಲು ಕಲಿಯಬೇಕು. ಅದೇ ಎಲ್ಲರ ಆದರ್ಶವಾಗಬೇಕು, ಎಂಬ ಅವರ ಬೋಧೆಯನ್ನು ಬಸವಣ್ಣನವರ ವಚನಗಳ ನೆರವಿನಿಂದಲೇ ಮುಂದೆ ವಿವರಿಸಲು ಯತ್ನಿಸಲಾಗಿದೆ.
ಉತ್ತಿಷ್ಠ! ಜಾಗೃತ!!
ಏಳಿರಿ ! ಎಚ್ಚರಾಗಿರಿ ! ಎಂಬುದು ಉಪನಿಷತ್ ಕಾಲದಿಂದ ಅನೇಕ ಸಂತಮಹಂತರು ಮನವರಿಗೆ ಇತ್ತ ಕರೆ, ಮರೆವುಳ್ಳ ಮಾನವರಿಗೆ ಮಾಯೆಯ ಮೋಹವು ಆವರಿಸಿರುವದು. ಅವರು ಮೋಹನಿದ್ರೆಯಲ್ಲಿ