ಈ ಪುಟವನ್ನು ಪ್ರಕಟಿಸಲಾಗಿದೆ
129

ಮನೆ ನೋಡಾ ಬಡವರು : ಮನ ನೋಡಾ ಘನ.
ಸೋಂಕಿನಲ್ಲಿ ಸುಖ ; ಸರ್ವಾಂಗಕಲಿಗಳು ;
ಪಸಾರಕ್ಕವಸರವಿಲ್ಲ ; ಬಂದ ತತ್ಕಾಲಕುಂಟು
ಕೂಡಲಸಂಗನ ಶರಣರು ಸ್ವತಂತ್ರಧೀರರು.
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು.
ಬೆಣ್ಣೆ ಕರಗಿ ತುಪ್ಪವಾಗಿ ಮರಳಿ
ತುಪ್ಪ ಬೆಣ್ಣೆಯಾಗದು ಕ್ರೀಯಳಿದು.
ಹೊನ್ನು ಕಬ್ಬುನವಾಗದು ಕ್ರೀಯಳಿದು.
ಮುತ್ತು ನೀರಲ್ಲಿ ಹುಟ್ಟಿ
ಮತ್ತೆ ನೀರಾಗದು ಕ್ರೀಯಳಿದು.
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗುವನು ಕ್ರೀಯಳಿದು.

ಭಗವಂತನಲ್ಲಿ ಬೆರೆತ ಶರಣನು ಜೀವನುಕನು. ಅವನು ಜನನ ಮರಣದ ತಿರುಗಣೆಯಲ್ಲಿ ಮರಳಿ ಸಿಲುಕಲರಿಯನು. ಅವನು ನಿಃಸಂದೇಹಿಯು, ನಿರ್ಮಲನು, ಸಹಜನು, ಅವನು ಉಪಮಾತೀತನು, ಎಂದು ಬಸವಣ್ಣನವರು ಹೇಳಿರುವರು :

ಸತ್ತು ಹುಟ್ಟುವನಲ್ಲ ಸಂದೇಹಿ ಸೂತಕಿಯಲ್ಲ
ಆಕಾರ ನಿರಾಕಾರನ ನೋಡಯ್ಯಾ!
ಕಾಯವಂಚಕನಲ್ಲ ಜೀವವಂಚಕನಲ್ಲ
ನಿರಂತರ ಸಹಜ, ನೋಡಯ್ಯಾ!
ಶಂಕೆಯಿಲ್ಲದ ಮಹಾಮಹಿಮನು ನೋಡಯ್ಯಾ!
ಕೂಡಲಸಂಗನ ಶರಣನುಪಮಾತೀತ ನೋಡಯ್ಯಾ!

ಜೀವನ್ಮುಕ್ತರಾದ ಇಂಥ ಶರಣರು ಮು೦ದೆ ಲೋಕ ಕಲ್ಯಾಣಕಾರ್ಯದಲ್ಲಿ ತೊಡಗುವರು. ಅದೇ ಅವರ ಜೀವಿತಕಾರ್ಯವಾಗುವದು. 'ಸಕಲ ಜೀವಾತ್ಮರ ಲೇಸನೇ ಬಯಸುವ' ಅವರ ಹೃದಯವು ಬೆಣ್ಣೆಗಿಂತ ಮೃದು. ತನಗೆ ತಗಲಿದ ತಾಪದಿಂದ