ಈ ಪುಟವನ್ನು ಪ್ರಕಟಿಸಲಾಗಿದೆ

142
ನಾಡುಗಳಿಗಾಗಿ, ಎಲ್ಲ ಸಂತರು ಜನಿಸಿದುದು ಒಂದು ಕಾಲದಲ್ಲಿ ಒಂದು ದೇಶದಲ್ಲಿ ಒಂದು ಸಮಾಜದಲ್ಲಿ ಭಗವಂತನು ಅವರನ್ನು ಆಯಾ ಕಾಲದ, ಆಯಾ ದೇಶದ, ಜನರಿಗೆ ತೀರ ಅವಶ್ಯವಾದ ಸಂದೇಶವನ್ನು ಸಲ್ಲಿಸಿ, ಅವರನ್ನು ಉದ್ಧರಿಸಲು ಕಳುಹಿಸಿರುವ, ಅವರು ಪರಮಾತ್ಮನ ಆದೇಶದ ಮೇರೆಗೆ ಅವತರಿಸಿ, ತಮ್ಮ ಲೋಕೋದ್ಧಾರದ ಕಾರ್ಯವನ್ನು ನೆರವೇರಿಸಿ, ತೆರಳುವರು. ಆಯಾ ಜನಾಂಗದವರಲ್ಲಿ ಅವರವರ ಸಂಸ್ಕಾರಗಳಿಗೆ ಸರಿಹೋಗುವ ರೀತಿಯಲ್ಲಿ ನೀತಿಯ ಸಂದೇಶವನ್ನೂ ಭಗವಂತನ ಭಕ್ತಿ-ಅನುಭಾವಗಳ ಸಂದೇಶವನ್ನೂ ಬೀರಿರುವರು. ನೀತಿಯು ಸನಾತನವಾದುದು, ಭಕ್ತಿಯು ಸನಾತನವಾದುದು, ಅನುಭಾವವು ಸನಾತನವಾದುದು. ಅವನ್ನು ಅರುಹಿದ ರೀತಿಯು, ಭಾಷೆಯು ತನಾತನವಾದುದು, ತಾತ್ಕಾಲಿಕವಾದುದು.
ಶ್ರೀ ಬಸವಣ್ಣನವರು ಇದಕ್ಕೆ ಅಪವಾದವಾಗುವದೆಂತು? ಅವರು ಕನ್ನಡಿಗರನ್ನು ಉದ್ದರಿಸಲು, ಕನ್ನಡ ನಾಡಿನಲ್ಲಿ ಅವತರಿಸಿದರು. ಅಂದಿನ ಸಮಾಜಕ್ಕೆ-ವಸ್ತುಸ್ಥಿತಿಗೆ ಸರಿಹೋಗುವ ರೀತಿಯಲ್ಲಿ ತಮ್ಮ ಪರಶಿವನ ಭಕ್ತಿ ಅನುಭಾವಗಳ ಬೋಧೆಯನ್ನು ನೀಡಿದರು. ಅದಕ್ಕೆ ಪೋಷಕವಾದ ನೀತಿ ಧರ್ಮವನ್ನು ಅರುಹಿದರು. ಜನರಲ್ಲಿ ನೀತಿಜೀವನದ ಹಾಗೂ ಭಕ್ತಿಜೀವನದ ಹೊಳೆಯನ್ನು ಹರಿಯಿಸಿದರು. ಭಕ್ತಿಜನಿತ ಸಮತೆಯ ತಳಹದಿಯ ಮೇಲೆ ಒಂದು ಅಂದವಾದ ವೀರಶೈವಬಾಂಧವ್ಯವನ್ನು ನಿರ್ಮಿಸಿದರು. ಸಂಕುಚಿತ ವೃತ್ತಿಯ ಕುರುಡುನಂಬಿಕೆಯ ಕತ್ತಲಲ್ಲಿ ತಡವರಿಸುತ್ತಿರುವ ಕನ್ನಡಿಗರಿಗೆ ನೀತಿ-ಭಕ್ತಿಗಳ ಬೆಳಕನ್ನು ಕಾಣಿಸಿ, ಕನ್ನಡ ಕುಲದೀಪಕರಾದರು. ಅಂದು ಅವರು ಕಾಣಿಸಿದ ಹಿರಿಯ ಬೆಳಕು, ಸಲ್ಲಿಸಿದ ದಿವ್ಯಸಂದೇಶವು, ಇಂದಿನವರಿಗೂ ಬೆಳಕಿನ ಹೊನಲಾಗಿ, ಸ್ಪೂ ರ್ತಿಯ ಸೆಲೆಯಾಗಿ ಪರಿಣಮಿಸದಿರದು. ಬಸವಣ್ಣನವರಿಂದ ಅಂಥ ಬೆಳಕನ್ನೂ ಚೈತನ್ಯವನ್ನೂ ಪಡೆದು ನಾವು ಇಂದು ಚೆನ್ನಾಗಿ ಬಾಳಿದರೆ, ನಮ್ಮ ನವಚೈತನ್ಯದಿಂದ ತುಂಬಿದ ಬೆಳಗುವ ಬಾಳು ಬಸವಣ್ಣನವರನ್ನು ಭಾರತಜ್ಯೋತಿಯನ್ನಾಗಿ ಮಾಡುವದಲ್ಲದೆ, ಜಗಜ್ಯೋತಿಯನ್ನು ಆಗಿಯೂ ಮಾಡಬಲ್ಲದು. ಶಿಷ್ಯರ ಬೆಳಕಿನ ಬಾಳೇ ಅವರ ಗುರುಗಳ ત્ર