ಈ ಪುಟವನ್ನು ಪ್ರಕಟಿಸಲಾಗಿದೆ
153

ಭಕ್ತನು ಭಗವಂತನಲ್ಲಿ ಅನನ್ಯವಾಗುವ, ಆತನಿಗೆ ಪೂರ್ಣ ಶರಣಾಗತನಾಗುವ!

ಕೊನೆಯ ಭಕ್ತನು ಭಗವಂತನ ದಿವ್ಯ ದರ್ಶನವನ್ನು ಪಡೆಯುವ. ಆತನ ಅದ್ಭುತ ನೋಟದಿಂದ ಭಕ್ತನಿಗೆ "ಅನಂತ ಸುಖ' ಆಗುವದು. ಆತನ ಅನುಪಮ ಕೂಟದಿಂದ ಭಕ್ತನಿಗೆ ಪರಮಾನಂದವಾಗುವದು. ಅವನ ರೋಮ ರೋಮಗಳೆಲ್ಲ ಕಂಗಳಾಗಿ ಭಗವಂತನನ್ನು ನೋಡತೊಡಗುವವು. ಭಕ್ತನು ಅಂಬುಧಿಯೊಳಗೆ ಬಿದ್ದ ಆಲಿಕಲ್ಲಿನಂತೆ, ಈ ಪರಮಾನಂದದಲ್ಲಿ ಭಿನ್ನಭಾವ ಅರಿಯದೆ ತಲ್ಲೀನನಾಗುವನು. ಇಂಥ ಅನುಭಾವದ ದಿವ್ಯ ಅಂಶವನ್ನೂ ಧನ್ಯತೆಯನ್ನೂ ತಾವು ಪಡೆದು ಬಸವಣ್ಣನವರು ಅದನ್ನು ಪಡೆಯಲು ನಮಗೂ ಹೇಳಿರುವರು. ಅದರಲ್ಲಿಯೇ ಆತ್ಮಕಲ್ಯಾಣ! ಅದರಿಂದಲೇ ವಿಶ್ವಕಲ್ಯಾಣ! 'ನಾನ್ಯಃ ಪಂಥಾ ವಿದ್ಯತೇ ಅಯನಾಯ. ಇದನ್ನುಳಿದು ಅನ್ಯಪಥವಿಲ್ಲ.

ಬಸವಣ್ಣನವರು ನಮಗಿತ್ತ ಸಂದೇಶವು ಇದೇ! ಇಂದು ಕೂಡ ಅದು ನಮಗೆ ಹೊಸ ಬೆಳಕನ್ನು ನೀಡದಿರದು. ಆದರೆ ಆ ಬೆಳಕನ್ನು ಅರಿಯುವ ಬುದ್ದಿ ಬೇಕು! ಪಡೆಯುವ ಯತ್ನ ಬೇಕು!