ಈ ಪುಟವನ್ನು ಪ್ರಕಟಿಸಲಾಗಿದೆ

8

ಶಾಂತಿಸಮೃದ್ಧಿಗಳನ್ನು ಈ ರೀತಿ ಕಾವ್ಯಮಯವಾಗಿ ಬಣ್ಣಿಸಿರುವ :

ಜನೈರವಜ್ಞಾತಕವಾಟಮುದ್ರಣೈಃ | ಕ್ಷಪಾಸು ರಕ್ಷಾವಿಮುಖೈರಸುಪ್ಯತೆ ||
ಕರಾ ವಿಠಂತಿ ಸ್ಮಗವಾಕ್ಷವರ್ತ್ಮಸು | ಕ್ಷಪಾಪತೇಃ ಛಿದ್ರಪಥೈರ್ನ ತಸ್ಕರಾಃ ||

“ಜನರು ರಾತ್ರಿಯಲ್ಲಿ ತಮ್ಮ ಮನೆಗಳ ಬಾಗಿಲುಗಳನ್ನು ಕೂಡ ಇಕ್ಕುವದಿಲ್ಲ. ತಮ್ಮ ರಕ್ಷಣದ ಚಿಂತೆಯಿಲ್ಲದೆ ಅವರು ಸುಖವಾಗಿ ನಿದ್ರಿಸುತ್ತಿದ್ದರು. ಅವರ ಮನೆಯಲ್ಲಿ ಗವಾಕ್ಷದ್ವಾರದಿಂದ ಚಂದ್ರಕಿರಣಗಳಷ್ಟೇ ಸೇರುತ್ತಿದ್ದವಲ್ಲದೆ, ಕಳ್ಳರು ಎಂದೂ ಸೇರುತ್ತಿರಲಿಲ್ಲ. ಇಂಥ ನೀತಿ- ಶಾಂತಿಗಳು ಅಂದು ಅಲ್ಲಿ ನೆಲೆಸಿದ್ದವು.

ಕಲ್ಯಾಣವೇ ಮುಂದೆ ಬಸವಣ್ಣನವರ ಕಲ್ಯಾಣಕರ ಮಹಾಜೀವನದ ಹಾಗೂ ಮಹಾಕಾರ್ಯದ ಪ್ರಧಾನ ಕೇಂದ್ರವಾಯಿತು. ಪರಶಿವಪ್ರೇರಣೆಯಿಂದ ಬಸವಣ್ಣನವರು ಅಲ್ಲಿಗೆ ತೆರಳಿದರು. ಅಲ್ಲಿಯೆ ಬಾಳಿದರು, ಬೆಳೆದರು, ಬೆಳಗಿದರು. ಅದೇ ಅವರ ಮುಂದಿನ ತಪೋಭೂಮಿ, ಕರ್ಮಭೂಮಿ ಹಾಗೂ ಧರ್ಮಭೂಮಿ ಆಗಿ ಪರಿಣಮಿಸಿತು. ಅವರ ಪಾವನಜೀವನದ ಫಲವಾಗಿಯೆ ಕಲ್ಯಾಣವು "ಸಕಲೈಶ್ವರದ ನಿಲಯ, ಸತ್ಯದ ಸಾಗರ, ಭಕ್ತಿಯ ತವರ್ಮನೆ, ಮುಕ್ತಿಗೆಮುಖ, ಹಾಗೂ ಪುಣ್ಯದ ಪುಂಜವಾಗಿ ಲೋಕದಲ್ಲಿ ಅದು ಅಭನವ ಕೈಲಾಸ ಎನಿಸಿತು.” "ಇಂತಪ್ಪ ಕಲ್ಯಾಣದ ದರುಶನವ ಮಾಡಿದರೆ, ಭವಂನಾಸ್ತಿ ಆಗಿ, ನೆನೆದರೆ ಪಾಪಕ್ಷಯವೂ ಕರ್ಮಕ್ಷಯವೂ ಆಗಿ ಮೋಕ್ಷವು ಸಾಧ್ಯ ಆಗುತ್ತಿತ್ತಂತೆ."

ಶ್ರೀ ಪ್ರಭುದೇವರು ಉಸುರಿದ ಮೇರೆಗೆ -

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಯಲ್ಲಿ, ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿರ್ದಿತಯ್ಯಾ ಶಿವನ ಪ್ರಸಾದ !

____________________
೪. ಶೂ. ಸಂ. ಪು. ೮೩